Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ!

Public TV
Last updated: April 8, 2023 11:55 am
Public TV
Share
4 Min Read
HALADI SRINIVAS SHETTY
SHARE

ಉಡುಪಿ: ಕರಾವಳಿಯ ವಾಜಪೇಯಿ ಎಂಬೂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಜನ ಬಿರುದು ಕೊಟ್ಟಿದ್ದು ಸುಮ್ ಸುಮ್ನೆ ಅಲ್ಲ. ಕುಂದಾಪುರದ ಕರ್ಣ ಅಂತ ಕಳೆದ ಐದು ಟರ್ಮ್ ನಲ್ಲಿ ಹಾಲಾಡಿ ಹೆಸರುವಾಸಿಯಾಗಿದ್ದಾರೆ ಅಂದ್ರೆ ಜನ ಹಾಲಾಡಿಯನ್ನು ಕೇವಲ ರಾಜಕಾರಣಿಯಾಗಿ ಎಂದೂ ಪರಿಗಣಿಸಲೇ ಇಲ್ಲ. ಶ್ರೀನಿವಾಸ ಶೆಟ್ರು ಮನೆ ಮಗ ಅಂತ ಕುಂದಾಪುರದ ಜನ ಭಾವಿಸಿದ್ದಾರೆ. ಪ್ರೀತಿ ತೋರಿದ್ದಾರೆ. ಕಾಂಗ್ರೆಸ್‍ನ ಭದ್ರಕೋಟೆಯನ್ನು ಭೇದಿಸಿ ಹಾಲಾಡಿ ಐದು ಬಾರಿ ಶಾಸಕ ಕುರ್ಚಿ ಮೇಲೆ ಕುಳಿತುಕೊಂಡದ್ದು ಒಂದು ದೊಡ್ಡ ಸಾಹಸವೇ.

BJP FLAG

ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಇಡೀ ಕರಾವಳಿ ಬಿಜೆಪಿಗೆ ಒಂದು ದೊಡ್ಡ ಶಕ್ತಿ. ಅದೊಂದು ಎಷ್ಟು ದೊಡ್ಡ ಶಕ್ತಿ ಎಂದರೆ ಅವರ ರಾಜೀನಾಮೆಯಿಂದ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತಳಮಳಕ್ಕೊಳಗಾಗಿದೆ. ಆಯ್ದಕ್ಕೈದು ನಾವೇ ಗೆದ್ದು ಬಿಡುತ್ತೇವೆ ಎಂದು ಎನ್ನುವ ಕಾರಿನಲ್ಲಿ ಓಡಾಡುತ್ತಿದ್ದ ಬಿಜೆಪಿಯ ಮುಖಂಡರು ದಿಕ್ಕು ತೋಚದಂತಾಗಿದ್ದಾರೆ ನಾಲ್ವರು ಶಾಸಕರು ಗಲಿಬಿಲಿಗೊಂಡಿದ್ದಾರೆ. ಉಡುಪಿಯ ಐದು ಸೀಟುಗಳನ್ನು ಗೆದ್ದೇ ಬಿಡುತ್ತೇವೆ ಎಂದು ಅಂದುಕೊಂಡಿದ್ದ ಬಿಜೆಪಿಯ ಪಂಡಿತರು ಈಗ ಲೆಕ್ಕಾಚಾರ ಹಾಕುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಹಾಲಾಡಿ ಎಂಬ ರಾಜಕಾರಣಿಯ ನಿವೃತ್ತಿ.

haladi kk

ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಜನಸೇವೆ ಸಲ್ಲಿಸಿದ್ದರೂ, ಉಡುಪಿ ಕಾರ್ಕಳ, ಬೈಂದೂರು, ವಿಧಾನಸಭಾ ಕ್ಷೇತ್ರಗಳ ಮೇಲೆ ಪ್ರಭಾವ ಹೊಂದಿದ್ದರು. ಹಿಂದೆ ಕಾಪು ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಯ ಪರ ಒಂದು ವಾರ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಸಜ್ಜನ ಮತ್ತು ಸಾಮಾಜಿಕ ನ್ಯಾಯ ಈ ಎರಡು ವರ್ಚಸ್ಸುಗಳು ಹಾಲಾಡಿ ಅವರನ್ನು ಮತ್ತು ಅವರು ಬೆಂಬಲಿಸಿದ ಅಭ್ಯರ್ಥಿಗಳನ್ನ ನಿರಂತರವಾಗಿ ಗೆಲ್ಲಿಸುತ್ತಾ ಬಂದಿದೆ.

haladi srinivas shetty

ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ರಾಜಕೀಯಕ್ಕೆ ವಿದಾಯದ ಘೋಷಿಸುವುದರ ಮೂಲಕ ಜಿಲ್ಲೆಯ ರಾಜಕಾರಣದೊಳಗೆ ಬದಲಾವಣೆಗಳಿಗೆ ಇದೀಗ ಕಾರಣವಾಗಿದ್ದಾರೆ. ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಲು ಹಾಲಾಡಿ ಶ್ರೀನಿವಾಸ ಶೆಟ್ಟರೇ ಕಾರಣ. ಬಂಟ ಸಮುದಾಯ ಬಹುಕಾಲ ಬಿಜೆಪಿ ಜೊತೆ ಇರಲು ಹಾಲಾಡಿಯೇ ಕಾರಣ. ಇದೀಗ ಈ ಎಲ್ಲಾ ಲೆಕ್ಕಾಚಾರಗಳು ಜಿಲ್ಲೆಯ ರಾಜಕೀಯ ಪಂಡಿತರಲ್ಲಿ ಕೇಳಿಬರುತ್ತಿದೆ.

KIRAN KODGI 1

ಸದ್ಯ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಆಪ್ತಮಿತ್ರ, ಸಹೋದರ ಸಮಾನ ಎಂದು ಗುರುತಿಸಿಕೊಂಡಿರುವ ಕಿರಣ್ ಕುಮಾರ್ ಕೊಡ್ಗಿ (Kiran Kumar Kodgi) ಯವರ ರಾಜಕೀಯ ಭವಿಷ್ಯಕ್ಕಾಗಿ, ಕ್ಷೇತ್ರವನ್ನು ತ್ಯಾಗ ಮಾಡುವುದರೊಂದಿಗೆ ತನ್ನ ಸುಖ, ದುಃಖದಲ್ಲಿ ಭಾಗಿಯಾಗಿ 25 ವರ್ಷಗಳ ಕಾಲ ತನಗಾಗಿ, ತನ್ನ ಚುನಾವಣೆಗಾಗಿ ದುಡಿದ ಕಿರಣ್ ಕೊಡ್ಗಿಯವರಿಗಾಗಿ ಈ ತೀರ್ಮಾನ ಎಂದು ಹೇಳಲಾಗುತ್ತಿದೆ. ಹಾಲಾಡಿ ಮತ್ತು ಕೊಡ್ಗಿಯ ಪರಿಚಯ, ಗೆಳೆತನ 40 ವರ್ಷದ್ದು.

bjp flag

ಬಿಜೆಪಿ ಪಕ್ಷವು 9BJP Party) ಹಿಂದಿನಿಂದಲೂ ಜಿಲ್ಲೆಯಲ್ಲಿ ಬಂಟರಿಗೆ ಸ್ಥಾನಮಾನವನ್ನು ನೀಡುತ್ತಾ ಬಂದಿದೆ. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿರುಷ್ಟು ಕಾಲ ಯಾವ ಬಂಟರಿಗೂ ಬಿಜೆಪಿಯಲ್ಲಿ ಟಿಕೇಟ್ ಪಡೆಯುವ ಅವಕಾಶ ಸಾಧ್ಯ ಆಗಿಲ್ಲ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಂಟ ಮತ ಹೆಚ್ಚಿದ್ದು ಕೊಡ್ಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಬಂಟ ಮತಗಳನ್ನು ಬಿಜೆಪಿಯ ಒಳಗೆ ಇಟ್ಟುಕೊಳ್ಳಬೇಕಾದರೆ ಹಾಲಾಡಿಯ ವಿಶ್ವಾಸವನ್ನು ಗಳಿಸಲೇಬೇಕಾಗಿದೆ. ಜಿಲ್ಲಾ ಬಿಜೆಪಿ ಹಾಲಾಡಿಯವರನ್ನು ಹೊರತುಪಡಿಸಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದು ಸುಲಭವಿಲ್ಲ. ಹೀಗಾಗಿ ಕುಂದಾಪುರ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಯಾರೆಂಬುದರ ಮೂಲಕ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಯಾರಿಗೆ ಸೀಟು ನೀಡಲಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ.

KIRAN KODGI

ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವಿದಾಯ ಪತ್ರದೊಂದಿಗೆ ಮುಂದೆಯೂ ಬಿಜೆಪಿಗೆ ಬೆಂಬಲಿಸಿ ಎಂದು ಕರೆ ನೀಡಿದ್ದಾರೆ. ಸದ್ಯ ಕುಂದಾಪುರ ಕ್ಷೇತ್ರದ ಹಾಲಾಡಿಯವರ ಅಭಿಮಾನಿಗಳು ಕಿರಣ್ ಕೊಡ್ಗಿಯವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ನಾಲ್ಕು ಬಾರಿ ಬಿಜೆಪಿಯಲ್ಲಿ, ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತೀ ಚುನಾವಣೆಯಲ್ಲೂ ಗೆಲುವಿನ ಅಂತರ ಹೆಚ್ಚಿಸಿಕೊಂಡು ಹೋಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 8 ರಿಂದ 10 ಸಾವಿರ ಹೆಚ್ಚು ಲೀಡ್ ಬರುತ್ತದೆ ಎಂದು ಲೆಕ್ಕಾಚಾರವಿತ್ತು. ಇದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

UDUPI ELECTION

ಹಾಲಾಡಿ 1999ರಲ್ಲಿ ಕಾಂಗ್ರೆಸ್‍ (Congress)  ನ ಹಿರಿಯ ನಾಯಕ ಪ್ರತಾಪ್‍ ಚಂದ್ರ ಶೆಟ್ಟಿ (PratapChandra Shetty) ವಿರುದ್ಧ 1,021 ಅಂತರದ ಗೆಲುವು ಸಾಧಿಸಿದ್ದರು. ಇದು ಶ್ರೀನಿವಾಸ ಶೆಟ್ಟರ ಮೊದಲ ಗೆಲುವು. 2004 ರಲ್ಲಿ ಕಾಂಗ್ರೆಸ್‍ನ ಅಶೋಕ್ ಕುಮಾರ್ ಹೆಗ್ಡೆ ವಿರುದ್ಧ 19,665 ಅಂತರದ ಗೆಲುವಾಯಿತು. ಎರಡನೇ ಬಾರಿಗೆ ಹಾಲಾಡಿ ಶಾಸಕರಾದರು. 2008ರ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಬಿಜೆಪಿ ಪರ 71695 ಮತ ಸಿಕ್ಕಿತು. ಜಯಪ್ರಕಾಶ್ ಹೆಗ್ಡೆಗೆ – ಕಾಂಗ್ರೆಸ್ ಮೂಲಕ 46612 ಮತ ಸಿಕ್ಕಿ ಸೋಲಾಯಿತು. ಆಗ ಗೆಲುವಿನ ಅಂತರ 25,083.

BSYediyurappa

ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿ ತಪ್ಪಿಸಿದರು ಎಂಬ ಕಾರಣಕ್ಕೆ ಕ್ಷೇತ್ರದ ಮತದಾರರು ಮತ್ತು ಅಭಿಮಾನಿಗಳ ಅಭಿಪ್ರಾಯದಂತೆ 2013 ರಲ್ಲಿ ಹಾಲಾಡಿ- ಪಕ್ಷೇತರರಾಗಿ ಸ್ಪರ್ಧೆ ಮಾಡಿದರು. 80563 ಮತ ಪಡೆದರೆ, ಮಲ್ಯಾಡಿ ಶಿವರಾಮ ಶೆಟ್ಟಿ- ಕಾಂಗ್ರೆಸ್ ನಿಂದ 39952 ಮತ ಪಡೆದರು. ಗೆಲುವಿನ ಅಂತರ – 40611 ಆಯ್ತು. ಶ್ರೀನಿವಾಸ್ ಶೆಟ್ಟಿ ಅವರ ವರ್ಚಸ್ಸು ಬೆಳೆಯುತ್ತಲೇ ಹೋಯಿತು. ಅವರ ಸಿಂಪ್ಲಿಸಿಟಿ ಜನರ ಜೊತೆಗೆ ಇರುವ ನಿರಂತರ ಸಂಪರ್ಕ ಶಾಸಕರಾದ ನಂತರ ಜನಸಂಪರ್ಕ, ಸ್ಪಂದಿಸುವ ರೀತಿ ಇತರೆ ರಾಜಕಾರಣಿಗಳಿಗೆ ಇಲ್ಲದ ಗುಣಗಳು ಹಾಲಾಡಿಗೆ ಇರುವುದನ್ನು ಜನ ಮೆಚ್ಚಿಕೊಂಡರು.

HALADI SRINIVAS SHETTY 1

2018ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಜೀವಮಾನದಲ್ಲೇ ಅತಿ ದೊಡ್ಡ ಅಂತರ ತಂದುಕೊಟ್ಟ ಚುನಾವಣೆ. ಹಾಲಾಡಿ ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಿದರು. 103434 ಲಕ್ಷ ಮತ ಪಡೆದರು. ಕಾಂಗ್ರೆಸ್ ನಿಂದ ರಾಕೇಶ್ ಮಲ್ಲಿ 40029 ಪಡೆದರು. ಗೆಲುವಿನ ಅಂತರ 56,405 ಆಗಿತ್ತು. ಚುನಾವಣೆಗೆ ಬಿಜೆಪಿ ಇವರಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಹಾಲಾಡಿಗೆ ಒಲವಿರುವ ಅಭ್ಯರ್ಥಿ ಗೆ ಬಿಜೆಪಿ ಮಣೆ ಹಾಕದಿದ್ದರೆ ಕುಂದಾಪುರ ವಿಧಾನಸಭಾ ಕ್ಷೇತ್ರ 2013ರ ಚುನಾವಣೆಯನ್ನು ಮತ್ತೆ ನೆನಪಿಸಿಕೊಳ್ಳಬೇಕಾದೀತು.

TAGGED:bjpHaladi Srinivas ShettyKarnataka Election 2023udupiಉಡುಪಿಕರ್ನಾಟಕ ಚುನಾವಣೆ 2023ಬಿಜೆಪಿಹಾಲಾಡಿ ಶ್ರೀನಿವಾಸ ಶೆಟ್ಟಿ
Share This Article
Facebook Whatsapp Whatsapp Telegram

Cinema Updates

Khushi Mukherjee
ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ
2 minutes ago
jayam ravi
ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ
3 minutes ago
Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
1 day ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
2 days ago

You Might Also Like

Mahua Moitra Pinaki Misra
Latest

ಬಿಜೆಡಿ ಮಾಜಿ ಸಂಸದನ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ – ಜರ್ಮನಿಯಲ್ಲಿ ಮದುವೆಯಾಗಿರುವ ಫೋಟೋ ವೈರಲ್

Public TV
By Public TV
10 minutes ago
bengaluru stambede 1
Bengaluru City

ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

Public TV
By Public TV
27 minutes ago
Shivam Death ElectricShock
Bengaluru City

ಕಲ್ಯಾಣಮಂಟಪದ ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ – 4 ವರ್ಷದ ಮಗು ದುರ್ಮರಣ

Public TV
By Public TV
1 hour ago
Chinnaswamy Stampede
Bengaluru City

Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

Public TV
By Public TV
2 hours ago
RCB
Bengaluru City

Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಗಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

Public TV
By Public TV
2 hours ago
BY Vijayendra
Bengaluru City

ಸಿಎಂ, ಡಿಸಿಎಂ, ಸಚಿವರಿಗೆ ಪ್ರಚಾರದ ಹುಚ್ಚೇ ಜಾಸ್ತಿ: ಹಾಲಿ‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು: ವಿಜಯೇಂದ್ರ ಆಗ್ರಹ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?