ಮಂಡ್ಯ: ಸದ್ಯ ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಭಕ್ತರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh 2025) ತೆರಳುತ್ತಿದ್ದಾರೆ. ಇಲ್ಲೊಬ್ಬ ಕೀಚಕ ಒಡಹುಟ್ಟಿದವನ ಕೊಲೆಗೆ ಸುಪಾರಿ ನೀಡಿ, ಪಾಪ ಕಳೆದುಕೊಳ್ಳಲು ಹಾಗೂ ಪೊಲೀಸರ ದಿಕ್ಕು ತಪ್ಪಿಸಲು ಪ್ರಯಾಗ್ರಾಜ್ಗೆ ಹೋಗಿದ್ದು, ಇದೀಗ ಪೊಲೀಸರ (Mandya Police) ಅತಿಥಿಯಾಗಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.
Advertisement
ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಲಕ್ಷ್ಮೇಗೌಡನದೊಡ್ಡಿಯ ಎಲ್.ಕೃಷ್ಣೇಗೌಡ ಎಂಬಾತನನ್ನು ಫೆಬ್ರವರಿ 11 ರಂದು ಬೆಳ್ಳಂಬೆಳಗ್ಗೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದರಿಂದ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದರು. ಇತ್ತ ಕೃಷ್ಣೇಗೌಡ ಪತ್ನಿ ಹಾಗೂ ಸಂಭಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಜಮೀನಿಗೆ ಕೃಷ್ಣೇಗೌಡ ಎಮ್ಮೆ ಕಟ್ಟಿ ಹಾಕಲು ಹೋದಾಗ 6 ಜನರ ಗುಂಪು ಕೃಷ್ಣೇಗೌಡನನ್ನು ಬರ್ಬರವಾಗಿ ಕೊಲೆ ಮಾಡಿ ಪಾರಾರಿಯಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಕೆ.ಎಂ ದೊಡ್ಡಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿ ಕಲೆ ಹಾಕಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ
Advertisement
Advertisement
ಈ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೊದಲು ಅನುಮಾನ ಬಂದಿದ್ದೆ ಕೊಲೆಯಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಉರುಫ್ ಗುಡ್ಡಪ್ಪನ ಮೇಲೆ. ಕೊಲೆಯಾದ ಸಂದರ್ಭದಲ್ಲಿ ಹಾಗೂ ಮೃತ ದೇಹದ ಅಂತ್ಯಸಂಸ್ಕಾರದ ವೇಳೆ ಶಿವನಂಜೇಗೌಡ ಸ್ಥಳದಲ್ಲಿ ಇರಲೇ ಇಲ್ಲ. ಬಳಿಕ ಪೊಲೀಸರು ವಿಚಾರಣೆ ಮಾಡಿದ ವೇಳೆ ಈ ಗುಡ್ಡಪ್ಪ ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಹೋಗಿದ್ದ ಎಂದು ತಿಳಿದಿದೆ ಹಾಗೂ ಅಂತ್ಯಸಂಸ್ಕಾರಕ್ಕೆ ಬರ್ತೀಯಾ ಎಂದು ಕೇಳಿದಾದ ಆತ ಇಲ್ಲ ಇಲ್ಲಿ ಫ್ಲೈಟ್ ಮಿಸ್ ಆಗಿದೆ ಎಂದು ಸಹ ಹೇಳಿದ್ದಾನೆ. ಇದನ್ನೇಲ್ಲಾ ತಿಳಿದ ಪೊಲೀಸರು ಈ ಗುಡ್ಡಪ್ಪನ ಮೇಲೆ ತಮ್ಮದೇ ಆದ ರೀತಿಯಲ್ಲಿ ಇನ್ವೇಸ್ಟಿಕೇಶನ್ ಮಾಡಿದ್ದಾರೆ. ಇದನ್ನೂ ಓದಿ: ವಿವಿಗಳನ್ನು ಮುಚ್ಚುವುದರಿಂದ ಎಸ್ಸಿ-ಎಸ್ಟಿ, ಒಬಿಸಿ, ಮಹಿಳೆಯರಿಗೆ ಅನ್ಯಾಯವಾಗಲಿದೆ – ಬೊಮ್ಮಾಯಿ
Advertisement
ಈ ಇನ್ವೇಸ್ಟಿಕೇಶನ್ನಲ್ಲಿ ಕೃಷ್ಣೇಗೌಡ ಕೊಲೆಗೆ ಆತನ ಅಣ್ಣನಾದ ಶಿವನಂಜೇಗೌಡ ಉರುಫ್ ಗುಡ್ಡಪ್ಪ ಕಾರಣ ಎಂದು ತಿಳಿದುಬಂದಿದೆ. ಈ ಶಿವನಂಜೇಗೌಡ ಕೃಷ್ಣೇಗೌಡ ಮಾಡಿದ ಸಾಲ ತೀರಿಸಿದ್ದು, ಕೃಷ್ಣೇಗೌಡನ ಜಮೀನನ್ನು ಸಾಲದ ಬದಲಿಗೆ ಗುಡ್ಡಪ್ಪಗೆ ಕೊಡುವುದಾಗಿ ಒಪ್ಪಂದ ಆಗಿತ್ತಂತೆ. ಆದ್ರೆ ಬಳಿಕ ಕೃಷ್ಣೇಗೌಡ ಜಮೀನು ನೀಡಲು ನೀರಾಕರಿಸದ ಕಾರಣ ಈ ಕೃಷ್ಣೇಗೌಡ ತಮ್ಮನನ್ನು ಕೊಲೆ ಮಾಡಲು ಸಪಾರಿ ನೀಡಿದ್ದು, ಮೂರು ತಿಂಗಳಿನಿಂದ ಕೊಲೆ ತಾನೇ ಸ್ಕೇಚ್ ಹಾಕಿದ್ದಾನೆ. ಕೊಲೆಯ ದಿನಾಂಕ ನಿಗದಿ ಆಗುತ್ತಿದ್ದಂತೆ ಪೊಲೀಸರನ್ನು ಯಾಮಾರಿಸಲು ಹಾಗೂ ಒಡಹುಟ್ಟಿದವನ ಸಾವಿಗೆ ಕಾರಣ ಆಗಿರುವ ಪಾಪ ತೊಳೆದುಕೊಳ್ಳಲು ಪ್ರಯಾಗ್ರಾಜ್ವೆ ಈತ ಹೋಗಿದ್ದಾನೆ. ಸದ್ಯ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಿವನಂಜೇಗೌಡ, ಚಂದ್ರಶೇಖರ್, ಸುನೀಲ್, ಉಲ್ಲಾಸ್ಗೌಡ, ಪ್ರತಾಪ್, ಅಭಿಷೇಕ್, ಶ್ರೀನಿವಾಸ್, ಹನುಮೇಗೌಡರನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸುವಲ್ಲ ಯಶಸ್ಸಿಯಾಗಿದ್ದಾರೆ.
ಪುಣ್ಯ ಪ್ರಾಪ್ತಿಗೆ ದೇಶದ ಜನರು ಪ್ರಯಾಗ್ರಾಜ್ ಕುಂಭಮೇಳಗೆ ಹೋಗ್ತಾ ಇದ್ದಾರೆ, ಆದ್ರೆ ಇತ ಒಡಹುಟ್ಟಿದವನ ಸಾವಿನ ಸುಪಾರಿ ನೀಡಿ ಆ ಪಾಪ ಕಳೆದಿಕೊಳ್ಳಲು ಕುಂಭಮೇಳಕ್ಕೆ ಹೋಗಿರೋದು ದುರ್ದೈವೇ ಸರಿ. ಇದನ್ನೂ ಓದಿ: ಪ್ಲಾಟ್ಫಾರ್ಮ್, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್