ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ಗೌರವ ನೀಡಿದೆ: ಎಸ್.ಎಂ.ಕೃಷ್ಣ

Public TV
1 Min Read
SM KRISHNA REACTION 1

ಬೆಂಗಳೂರು: ನನ್ನ ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ಕೊಟ್ಟಿದೆ ಅಂತ ಪದ್ಮವಿಭೂಷಣ (Padmavibhushan) ಗೌರವಕ್ಕೆ ಪಾತ್ರರಾಗಿರೋ ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna) ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಕೃಷ್ಣ ಅವರನ್ನು ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತಾನಾಡಿದ ಅವರು, ನನ್ನ ಯೋಗ್ಯತೆ ಮೀರಿದ ದೊಡ್ಡ ಗೌರವ ಕೇಂದ್ರ ನೀಡಿದೆ. ಪ್ರಧಾನಿ ಮೋದಿ (Narendra Modi), ಗೃಹಮಂತ್ರಿ ಅಮಿತ್ ಶಾ (AmitShah) ಅವರು ಗೌರವ ನೀಡಿದ್ದಾರೆ. ಇದು ಬಯಸದೇ ಬಂದ ಭಾಗ್ಯ. ನಾನು ಕನಸು-ಮನಸಿನಲ್ಲೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಪ್ರಧಾನಿಗಳು, ಗೃಹ ಸಚಿವರು ಗೌರವ ನೀಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೇನೆ ಅಂದರು.

SM KRISHNA REACTION

ಪ್ರಧಾನಿಗಳು ಪದ್ಮ ಪ್ರಶಸ್ತಿಗೆ ಒಂದು ಚೌಕಟ್ಟು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ನಾನು ಧನ್ಯವಾದ ಹೇಳ್ತೀನಿ. ಯಶಸ್ವಿನಿ ಯೋಜನೆ ಮತ್ತು ಬಿಸಿಯೂಟ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಗಳು. ಯಶಸ್ವಿನಿಯನ್ನ ಮತ್ತಷ್ಟು ಯಶಸ್ವಿಯಾಗಿ ಮಾಡಲು ಸಿಎಂ ಮುಂದಾಗಿದ್ದಾರೆ. ಸಿಎಂಗೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಾಧನೆ ಮರೆಯಲು ಸಾಧ್ಯವಿಲ್ಲ: ಕೆ.ಗೋಪಾಲಯ್ಯ

ರಾಜ್ಯ ಸರ್ಕಾರ ನನ್ನ ಬಗ್ಗೆ ಒಳ್ಳೆಯ ರೀತಿ ನಡೆಸಿಕೊಂಡು ಬಂದಿದೆ. ಮೊದಲು ಕೆಂಪೇಗೌಡ ಪ್ರಶಸ್ತಿ (Kempegowda Award) ಈಗ ಪದ್ಮವಿಭೂಷಣ ಪ್ರಶಸ್ತಿ ಬಂತು. ಇದು ನನ್ನ ಅಲ್ಪ ಸೇವೆಗೆ ಸಿಕ್ಕ ಗೌರವ ಅಂದುಕೊಳ್ತೀನಿ. ಎಲ್ಲರಿಗೂ ನನ್ನ ನಮಸ್ಕಾರ ಮಾಡ್ತೀನಿ. ದೇಶಕ್ಕೆ ಜನರಿಗೆ ಒಳ್ಳೆಯದಾಗಲಿ ಎಂದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *