ಬೆಳಗಾವಿ: ಧಾರವಾಡ (Dharwad) ದಿಂದ ಜಮಖಂಡಿ ಹೋಗುತ್ತಿದ್ದ ಜಮಖಂಡಿ (Jamkhandi) ಡಿಪೋಗೆ ಸೇರಿದ ಕೆಎಸ್ಆರ್ ಟಿಸಿ (KSRTC) ಬಸ್ ಪಲ್ಟಿ ಆಗಿ 7ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್ನಲ್ಲಿ ಬಸ್ ಅಪಘಾತ ಆಗಿದ್ದು, ಅಪಘಾತದಲ್ಲಿ 7 ಜನರಿಗೆ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಗ್ಯಾರಂಟಿ ನಂಬಿ BPL ಕಾರ್ಡ್ಗೆ ಮುಗಿಬಿದ್ದ ಜನ – ಅರ್ಜಿ ಸ್ವೀಕರಿಸೋದನ್ನೇ ನಿಲ್ಲಿಸಿದ ಇಲಾಖೆ!
ಧಾರವಾಡದಿಂದ ಜಮಖಂಡಿಗೆ ಹೊರಟಿದ್ದ ಬಸ್ 30ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟನಲ್ಲಿ ಪಲ್ಟಿ ಆಗಿದೆ. ಈ ವೇಳೆ ಪ್ರಾಣಾಪಾಯಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ರಾಮದುರ್ಗ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.