ತುಮಕೂರು: ಕೆರೆಯಲ್ಲಿ (Lake) ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದಿದೆ.
ರಾಕೇಶ್ (14), ಧನುಷ್ (15) ಮೃತ ಬಾಲಕರು. ರಾಕೇಶ್ ತಿಮ್ಮನಹಳ್ಳಿ ಗ್ರಾಮದ ತಿಮ್ಮರಾಜು ಎಂಬವರ ಪುತ್ರನಾಗಿದ್ದು, ಧನುಷ್ ಶಾಂಕೇಶ್ ಎಂಬವರ ಮಗ. ರಾಕೇಶ್ ಹಾಗೂ ಧನುಷ್ ಭಾನುವಾರ ಬೆಳಗ್ಗೆ ಕಂಟಲಗೆರೆ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹುಚ್ಚುನಾಯಿ ದಾಳಿ – ಗಂಭೀರ ಗಾಯಗಳಾಗಿ 13 ಮಂದಿ ಆಸ್ಪತ್ರೆಗೆ ದಾಖಲು
ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?
Web Stories