ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್

Public TV
1 Min Read
PAVITHRA GOWDA

ರೇಣುಕಾಸ್ವಾಮಿ ಕೊಲೆ ಕೇಸ್‍ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರೀತಾ ಇರೋ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗಾಗಿ ತಂದಿದ್ದ ಬಾಕ್ಸ್ ಅನ್ನು ಜೈಲು ಸಿಬ್ಬಂದಿ ವಾಪಸ್ಸು ಕಳುಹಿಸಿದ್ದಾರೆ. ಜೈಲಿನಲ್ಲಿ ತಿಂಡಿ ಇಟ್ಟುಕೊಳ್ಳುವುದಕ್ಕಾಗಿ ಪವಿತ್ರಾ ಗೌಡ ತಾಯಿ ಬಾಕ್ಸ್ ತಂದಿದ್ದರು.

PAVITHRA GOWDA RENUKASWAMY

ಪವಿತ್ರಾ ಗೌಡ ಇರೋ ಕೋಣೆಯಲ್ಲಿ 13ಕ್ಕೂ ಹೆಚ್ಚು ಕೈದಿಗಳು ಇದ್ದಾರೆ ಎನ್ನೋ ಮಾಹಿತಿ ಇದೆ. ಹಾಗಾಗಿ ಮನೆಯಿಂದ ತಂದ ತಿಂಡಿಯನ್ನು ಇಟ್ಟುಕೊಳ್ಳಲು ಬಾಕ್ಸ್ ಬೇಕು ಅಂತ ತಾಯಿಗೆ ಪವಿತ್ರ ಗೌಡ ಹೇಳಿದ್ದರಂತೆ. ಮಗಳ ಮಾತಿನಂತೆ ಇಂದು ಜೈಲಿಗೆ ಬಾಕ್ಸ್ ಸಮೇತ ಬಂದಿದ್ದರು ಪವಿತ್ರಾ ಗೌಡ ತಾಯಿ. ಆದರೆ, ಬಾಕ್ಸ್ ಅನ್ನು ಒಳಗೆ ಕಳುಹಿಸಲು ಜೈಲು ಸಿಬ್ಬಂದಿ ಒಪ್ಪಿಲ್ಲ.

 

ಜೈಲು ನಿಯಮದ ಪ್ರಕಾರ ಹೊರಗಿನ ಪಾತ್ರೆಗಳಿಗೆ ಅವಕಾಶವಿಲ್ಲ. ಇದನ್ನು ಪವಿತ್ರಾ ತಾಯಿಗೆ ತಿಳಿಹೇಳಿ ವಾಪಸ್ಸು ಕಳುಹಿಸಿದ್ದಾರೆ. ಪವಿತ್ರಾ ನೋಡಲು ತಾಯಿ, ತಂದೆ ಮತ್ತು ಮಗಳು ಪಾತ್ರ ಬರುತ್ತಿರುವುದು ಸಹಜವಾಗಿಯೇ ಪವಿತ್ರಾಗೆ ಆತಂಕ ತಂದೊಡ್ಡಿದೆ. ತನ್ನ ಸಪೋರ್ಟಿಗೆ ದರ್ಶನ್ ನಿಲ್ಲುತ್ತಾರೆ ಎಂದು ಪವಿತ್ರಾ ಅಂದುಕೊಂಡಿದ್ದಳು. ಆದರೆ, ದರ್ಶನ್ ಅಂತರ ಕಾಪಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

Share This Article