ಅಲೋಕ್ ಕುಮಾರ್ ಎಚ್ಚರಿಕೆಗೂ ಡೋಂಟ್ ಕೇರ್ – ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಡಿ ರೌಡಿ ಅವಾಜ್

Public TV
1 Min Read
talagattapura

ಬೆಂಗಳೂರು: ನಗರದಲ್ಲಿ ರೌಡಿಗಳನ್ನು ಮಟ್ಟ ಹಾಕಲು ಐಜಿಪಿ ಅಲೋಕ್ ಕುಮಾರ್ ಅವರು ಖಡಕ್ ನಿರ್ಣಯ ಕೈಗೊಂಡು ವಾರ್ನಿಂಗ್ ನೀಡಿದ ಬಳಿಕವೂ ಪುಡಿ ರೌಡಿಯೊಬ್ಬ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಅವಾಜ್ ಹಾಕಿರುವ ಘಟನೆ ನಗರದ ತಲಗಟ್ಟಪುರದಲ್ಲಿ ನಡೆದಿದೆ.

ಇಲ್ಲಿನ ಪುಡಿ ರೌಡಿ ಡೋಬಿ ಕಿರಣ ಲಾಂಗ್ ಹಿಡಿದು ಅವಾಜ್ ಹಾಕಿದ್ದು, ಇತನೊಂದಿಗೆ ರೌಡಿ ಶೀಟರ್ ಗಡವ ನಾಗ ಕೂಡ ಸಾಥ್ ನೀಡಿದ್ದಾನೆ. ಈ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದೆ.

talagattapura 1

ದೃಶ್ಯಗಳಲ್ಲಿ ರೌಡಿ ಕಿರಣ್, ನವೀನ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ನವೀನ್ ಹಾಗೂ ಅವರ ತಂದೆ ಇಬ್ಬರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮನೆ ಮುಂದೇ ನಿಂತು ಹೊರಗೆ ಬಾ ನಿನ್ನನ್ನು ಬಿಡಲ್ಲ ಎಂದು ಹೇಳಿ ರಾಂಪಾಟ ನಡೆಸಿದ್ದಾನೆ. ಇದೇ ಶನಿವಾರ ರಾತ್ರಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ವೈರಲ್ ಆಗುತ್ತಿದಂತೆ ಪೊಲೀಸರ ಗಮನಕ್ಕೆ ಬಂದಿದೆ.

ವಿಡಿಯೋದಲ್ಲಿ ಸೆರೆಯಾಗಿರುವ ಘಟನೆ ನಮ್ಮ ಗಮನಕ್ಕೆ ಬಂದಿದೆ. ಅವಾಜ್ ಹಾಕಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕುಡಿದ ಅಮಲಿನಲ್ಲಿ ಘಟನೆ ನಡೆದಿದ್ದು, ಅಕ್ಕಪಕ್ಕನ ಮನೆಯ ನಡುವಿನ ಗಲಾಟೆಯ ವೇಳೆ ಈ ರೀತಿ ವರ್ತಿಸಲಾಗಿದೆ. ಆದರ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *