ಥೈಲ್ಯಾಂಡ್‍ನಲ್ಲಿ ಅಪಘಾತ – ಬೆಂಗ್ಳೂರಿನ ಟೆಕ್ಕಿ ಸಾವು

Public TV
1 Min Read
techie death

ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಂಗಳೂರಿನ ಟೆಕ್ಕಿ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಭಾರತಕ್ಕೆ ತರಲು ಪೋಷಕರು ಪರದಾಡುತ್ತಿದ್ದಾರೆ.

ಪ್ರಜ್ಞಾ ಮೃತಪಟ್ಟ ಯುವತಿ. ಮೂಲತಃ ಮಧ್ಯಪ್ರದೇಶದ ಛಾತ್ರಾಪುರದ ಪ್ರಜ್ಞಾ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಥೈಲ್ಯಾಂಡ್‍ನಲ್ಲಿ ಆಯೋಜಿಸಲಾಗಿದ್ದ ಸೆಮಿನಾರ್ ನಲ್ಲಿ ಭಾಗವಹಿಸಲು ಆಕೆಯನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಪ್ರಜ್ಞಾ ಆಫೀಸ್‍ನಿಂದ ರಜೆ ಪಡೆದು ಅಕ್ಟೋಬರ್ 7ರಂದು ಥೈಲ್ಯಾಂಡ್‍ಗೆ ಹೋಗಿದ್ದಳು. ಆದರೆ ಅಕ್ಟೋಬರ್ 10ರಂದು ಸೆಮಿನರ್ ಶುರು ಆಗುವ ಮೊದಲೇ ಪ್ರಜ್ಞಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಪ್ರಜ್ಞಾ ಸಾವಿಗೆ ಸಂತಾಪ ಸೂಚಿಸಿ, ಆಕೆಯ ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಮಲ್‍ನಾಥ್ ಅವರು, ಪ್ರಜ್ಞಾ ಪಾಲಿವಾಲ್ ಅವರ ತರಬೇತಿಯ ಸಮಯದಲ್ಲಿ ಥೈಲ್ಯಾಂಡ್‍ನ ಪುಕೆಟ್‍ನಲ್ಲಿ ನಡೆದ ಅಪಘಾತದ ಸಾವಿನ ಸುದ್ದಿ ತಿಳಿದು ತುಂಬಾ ದುಃಖಕರವಾಗಿದೆ. ಕುಟುಂಬದ ಯಾವುದೇ ಸದಸ್ಯರ ಬಳಿ ಪಾಸ್‍ಪೋರ್ಟ್ ಇಲ್ಲ. ಆದ್ದರಿಂದ ಮೃತದೇಹವನ್ನು ತರುವಲ್ಲಿ ಸಮಸ್ಯೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಕಮಲ್‍ನಾಥ್, ಪ್ರಜ್ಞಾ ಕುಟುಂಬಸ್ಥರು ಆತಂಕಪಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜೊತೆ ಇದೆ. ವಿದೇಶಾಂಗ ಸಚಿವರ ಜೊತೆ ಸರ್ಕಾರ ಮಾತನಾಡಿ ಮೃತದೇಹವನ್ನು ತರಲು ಪ್ರಯತ್ನಿಸುತ್ತೇವೆ. ಕುಟುಂಬದ ಸದಸ್ಯರು ಹೋಗಲು ಬಯಸಿದ್ದರೆ, ಅದಕ್ಕೂ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿಕೊಡುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಜ್ಞಾ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ತರುವಲ್ಲಿ ಕಂಪನಿಗೆ ಸಹಕರಿಸಲು ಸಾಧ್ಯವಾಗುತ್ತಿಲ್ಲ.

ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. “ಥೈಲ್ಯಾಂಡ್‍ನ ಭಾರತೀಯ ರಾಯಭಾರ ಕಚೇರಿ ಪ್ರಜ್ಞಾ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *