ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

Public TV
1 Min Read
Ganja Gang Andhra Pradesh Accident PSI Bidar

ಬೀದರ್: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಬೀದರ್ ಮೂಲದ ಪಿಎಸ್‍ಐ ಮೃತದೇಹ ಇಂದು ಸ್ವ-ಗ್ರಾಮ ತಲುಪಿದೆ.

Ganja Gang Andhra Pradesh Accident PSI Bidar 1

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಸ್ವ-ಗ್ರಾಮಕ್ಕೆ ಪಿಎಸ್‍ಐ ಅವಿನಾಶ್ ಯಾದವ್ ಮೃತದೇಹ ತಲುಪಿದೆ. ಆಂಧ್ರಪ್ರದೇಶದ ಚಿತ್ತೂರಿನಿಂದ ಆ್ಯಂಬುಲೇನ್ಸ್ ಮೂಲಕ ಸ್ವ-ಗ್ರಾಮಕ್ಕೆ ಮೃತದೇಹ ಇಂದು ತರಲಾಗಿದ್ದು, ಗ್ರಾಮಕ್ಕೆ ಪಿಎಸ್‍ಐ ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಇದನ್ನೂ ಓದಿ: ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್ 

Ganja Gang Andhra Pradesh Accident PSI Bidar 2

ದಾಸರವಾಡಿ ಗ್ರಾಮದ ನಿವಾಸದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ದಾಸರವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜನರು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಗ್ರಾಮದ ಜಮೀನಿನಲ್ಲಿ ಯಾದವ್ ಸಂಪ್ರದಾಯದಂತೆ ಪಿಎಸ್‍ಐ ಅಂತ್ಯಕ್ರಿಯೆ ನಡೆಯಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *