ಬೆಂಗಳೂರು: ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ವಂಚಿಸಿದ್ದು, ಸುಶ್ಮಿತಾ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಸುಶ್ಮಿತಾ ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ಸುಶ್ಮಿತಾ ಅಲ್ಲದೇ ಸರೋಜ ಎನ್ನುವವರಿಗೂ ವಂಚನೆಯಾಗಿದೆ.
ರಘು ಹಾಗೂ ಸಂಗೀತಾ ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ಸುಶ್ಮಿತಾ ಅವರಿಗೆ ವಂಚಿಸಿದ್ದಾರೆ. ಹಣ ಕೇಳಿದರೆ ರಘು ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಸರೋಜ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 420, 418, ಹಾಗೂ 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಏನಿದೆ?
ನನಗೆ ನನ್ನ ಚಿಕ್ಕಮ್ಮನ ಮಗಳ ಕಡೆಯಿಂದ ಪರಿಚಯವಾದ ರಘು ಚಂದ್ರಪ್ಪ ನನ್ನನ್ನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಗೆ ಆದಿಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಾಕ್ಷರನ್ನಾಗಿ ಮಾಡುತ್ತೇನೆಂದು ನಂಬಿಸಿದ್ದಾನೆ. ಅಲ್ಲದೇ ನನ್ನ ಬಳಿ 1 ಲಕ್ಷ ರೂ. ಹಣವನ್ನು ಪಡೆದು, ಸುಶ್ಮಿತಾ ಅವರಿಂದ 3,50,000 ರೂ. ಹಣವನ್ನು ಪಡೆದು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದಾನೆ. ಸಶನಿವಾರ ರಘು ಬಿಡಿಎ ಕಾಂಪ್ಲೆಕ್ಸ್ ಬಳಿ ಬರಲು ಹೇಳಿದ್ದನು. ಆಗ ನಾನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಹೋದಾಗ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ರಘು ಹಾಗೂ ಆತನ ಸ್ನೇಹಿತೆ ಸಂಗೀತ ಇಬ್ಬರು ಹಣ ನೀಡದೇ ಪ್ರಾಣ ಬೆದರಿಕೆ ಹಾಕಿದ್ದಾರೆ. ಸದ್ಯ ರಘು ಹಾಗೂ ಸಂಗೀತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv