Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

Latest

ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

Public TV
Last updated: May 26, 2017 12:37 pm
Public TV
Share
2 Min Read
Tejas Express
SHARE

ಮುಂಬೈ: ಸೌಲಭ್ಯಗಳನ್ನು ಕೊಟ್ಟರೆ ಅದನ್ನು ಜನರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಭಾರತೀಯ ರೈಲ್ವೇಯ ‘ಭೂಮಿಯ ಮೇಲೆ ಚಲಿಸುವ ವಿಮಾನ’ ಖ್ಯಾತಿಯ ತೇಜಸ್ ರೈಲಿನಲ್ಲಿ ನೀಡಲಾಗಿದ್ದ ಹೆಡ್‍ಫೋನ್‍ಗಳನ್ನು ಕಿಡಿಗೇಡಿ ಪ್ರಯಾಣಿಕರು ಕದ್ದಿದ್ದಾರೆ. ಅಷ್ಟೇ ಅಲ್ಲದೇ ಎಲ್‍ಇಡಿ ಸ್ಕ್ರೀನ್ ಗಳನ್ನು ಜಖಂಗೊಳಿಸಿದ್ದಾರೆ.

ಹೌದು. ಸೋಮವಾರ ರೈಲ್ವೇ ಸಚಿವ ಸುರೇಶ್ ಪ್ರಭು ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಮುಂಬೈನಿಂದ ಗೋವಾಗೆ ತೆರಳಿದ್ದ ರೈಲು ಮಂಗಳವಾರ ಮುಂಬೈಗೆ ಹಿಂದಿರುಗಿತ್ತು. ಮರಳಿದ ತೇಜಸ್ ರೈಲಿನ ಒಳಗಡೆ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ಶಾಕ್ ಆಗಿದ್ದಾರೆ.

12 ಹೈ ಕ್ವಾಲಿಟಿ ಹೆಡ್‍ಫೋನ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಂಗಳು ಕಳುವಾಗಿದ್ದರೆ, ಕೆಲವು ಸ್ಕ್ರೀನ್‍ಗಳು ಜಖಂಗೊಂಡಿದೆ ಎಂದು ಎಂದು ರೈಲ್ವೇ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಅಷ್ಟೇ ಅಲ್ಲದೇ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿರುವುದು ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದು ಇನ್ನು ಮುಂದೆ ಈ ರೀತಿ ಹಾನಿ ಆಗದೇ ಇರಲು ಪ್ರಯಾಣಿಕರಲ್ಲಿ ಮನವಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.

ಕಿಡಿಗೇಡಿ ಪ್ರಯಾಣಿಕರು ಈ ರೀತಿ ಕೃತ್ಯ ಎಸಗಬಹುದು ಎಂದು ರೈಲ್ವೇ ಅಧಿಕಾರಿಗಳು ಮೊದಲೇ ಊಹಿಸಿದ್ದರು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಆಗಬಹುದು ಎಂದು ಊಹಿಸಿರಲಿಲ್ಲ ಪತ್ರಿಕೆ ವರದಿ ಮಾಡಿದೆ.

TEJAS EXPRESS

ಕಲ್ಲು ತೂರಿದ್ದರು: ಸೋಮವಾರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ಈ ರೈಲನ್ನು ಮುಂಬೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆದರೆ ಭಾನುವಾರ ದುಷ್ಕರ್ಮಿಗಳು ಈ ರೈಲಿಗೆ ಕಲ್ಲು ತೂರಿದ್ದು, ಕಿಟಕಿಯ ಗಾಜನ್ನು ಜಖಂಗೊಳಿಸಿದ್ದರು.

ಈ ರೈಲಿನ ವಿಶೇಷತೆ ಏನು?
#1. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕ ಇರಲಿದೆ.

#2. ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 56 ಸೀಟಿನ ಸಾಮರ್ಥ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ ಇರಲಿದೆ. ಅಷ್ಟೇ ಅಲ್ಲದೇ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇರಲಿದೆ.

#3. ಈ ರೈಲು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದ್ದು ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಕೋಚ್ ನಲ್ಲಿ ಗ್ರಾಫ್ಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ.

tejas rail 7 1

#4. ಆರಂಭಿಕ ಹಂತವಾಗಿ ಈ ರೈಲು ವಾರದ ಐದು ದಿನಗಳ ಕಾಲ ಮುಂಬೈ ಮತ್ತು ಗೋವಾ ಮಧ್ಯೆ ಸಂಚರಿಸಲಿದೆ. ಮಳೆಗಾಲದಲ್ಲಿ ಮೂರು ದಿನಗಳಿಗೊಮ್ಮೆ ಸಂಚರಿಸಲಿದೆ.

#5. 640 ಕಿ.ಮೀ ಕ್ರಮಿಸುವ ಈ ರೈಲಿನಲ್ಲಿ ಎಕ್ಸಿಕ್ಯೂಟಿವ್ ಕೋಚ್ ಟಿಕೆಟ್ ಬೆಲೆ ಆಹಾರ ಸೇರಿ 2680 ರೂ. ಇದ್ದರೆ, ಆಹಾರವಿಲ್ಲದ 1 ಟಿಕೆಟಿಗೆ 2525ರೂ. ನಿಗದಿಯಾಗಿದೆ. ಎಸಿ ಚೇರ್ ಗೆ ಆಹಾರದೊಂದಿಗೆ 1280 ರೂ. ನಿಗದಿಯಾಗಿದ್ದರೆ, ಆಹಾರವಿಲ್ಲದ ಟಿಕೆಟಿಗೆ 1155 ರೂ. ನಿಗದಿಯಾಗಿದೆ.

#6. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಬ್ದಿ ಎಕ್ಸ್ ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.

#7. ರೈಲು ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
#8. ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.

#9. ಮುಂದಿನ ದಿನಗಳಲ್ಲಿ ತೇಜಸ್ ರೈಲು ದೆಹಲಿ ಮತ್ತು ಚಂಡೀಗಢ, ಸೂರತ್ ಮತ್ತು ಮುಂಬೈ ನಡುವೆ ಸಂಚರಿಸಲಿದೆ.

It's a shame. Headphones stolen, LED damaged in Mumbai Goa Tejas express. Do we really deserve such services from @RailMinIndia then ? pic.twitter.com/nLAQhInfwd

— IndianRailMedia ???????? (@IndianRailMedia) May 25, 2017

Tejas Express 1 1

tejas rail 1 1

tejas rail 4

tejas rail 6 1

tejas rail 8

tejas rail 9

tejas rail 10

tejas rail 11

 

TAGGED:goaIndian Railwaysmumbaitejas rxpressತೇಜಸ್ ರೈಲುಭಾರತೀಯ ರೈಲ್ವೇರೈಲುವಿಮಾನಸುರೇಶ್ ಪ್ರಭು
Share This Article
Facebook Whatsapp Whatsapp Telegram

Cinema news

father movie team
ಭಾವುಕ ಪ್ರಪಂಚಕ್ಕೆ ಕರೆದೊಯ್ಯುವ ‘ಫಾದರ್’ ಥೀಮ್ ಸಾಂಗ್
Cinema Latest Sandalwood Top Stories
Toxic Nayanatara
ಟಾಕ್ಸಿಕ್ ಟೀಮ್‌ನಿಂದ ನಯನತಾರಾ ಪಾತ್ರದ ಫಸ್ಟ್ ಲುಕ್ ರಿಲೀಸ್
Cinema Latest Sandalwood Top Stories
New Year Album Music
ಹೊಸ ವರ್ಷಕ್ಕೆ ಹೊಸ ಸಂಗೀತ ಸ್ಪರ್ಶ: ನ್ಯೂ ಇಯರ್ ಆಲ್ಬಂ
Cinema Latest Sandalwood Top Stories
gilli ashwini gowda
ಕೈಗೊಂಬೆಗಳು ಅಂತ ಧ್ರುವಂತ್‌, ಅಶ್ವಿನಿ ಕೆಣಕಿದ ಗಿಲ್ಲಿ – ಬಾರೋ ಅಖಾಡಕ್ಕೆ ಅಂತ ತೊಡೆ ತಟ್ಟಿದ ಅಶ್ವಿನಿ
Cinema Latest Top Stories TV Shows

You Might Also Like

jaishankar wang yi
Latest

ಕದನ ವಿರಾಮ ನಿರ್ಧಾರದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ: ಚೀನಾಗೆ ಭಾರತ ತಿರುಗೇಟು

Public TV
By Public TV
23 minutes ago
CRIME
Crime

ಚಲಿಸುತ್ತಿದ್ದ ವಾಹನದಲ್ಲೇ 2 ಗಂಟೆ ಗ್ಯಾಂಗ್ ರೇಪ್ –  ಮಹಿಳೆಯನ್ನ ರಸ್ತೆಗೆ ಎಸೆದು ದುರುಳರು ಪರಾರಿ

Public TV
By Public TV
27 minutes ago
G Parameshwar
Bengaluru City

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ, ಡ್ರಿಂಕ್ & ಡ್ರೈವ್ ಕೇಸ್ ಇರುತ್ತೆ: ಪರಮೇಶ್ವರ್ ಸ್ಪಷ್ಟನೆ

Public TV
By Public TV
2 hours ago
Siddaramaiah Pinarayi Vijayan
Latest

ಇತ್ತ ಕೋಗಿಲು ಲೇಔಟ್‌ ಜಟಾಪಟಿ, ಅತ್ತ ಕೇರಳ & ಕರ್ನಾಟಕ ಸಿಎಂ ಹ್ಯಾಂಡ್‌ಶೇಕ್‌

Public TV
By Public TV
2 hours ago
Vijayapura Bidar Tourist place
Bidar

ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ

Public TV
By Public TV
2 hours ago
Mandya Cauvery River Bank Prohibited For New Year Celebration
Districts

ನ್ಯೂ ಇಯರ್ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು – ಕಾವೇರಿ ತೀರದಲ್ಲಿ ನಿಷೇಧಾಜ್ಞೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?