Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಗ್ಳನ್ನು ಬರ್ತ್ ಡೇಗೆ ಕಳಿಸಿಲ್ಲವೆಂದು ಟೆಡ್ಡಿ ಬೇರ್ ನಿಂದ ಆಂಟಿಯನ್ನೇ ಸಾಯಿಸಿದ ಬಾಲಕ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಮಗ್ಳನ್ನು ಬರ್ತ್ ಡೇಗೆ ಕಳಿಸಿಲ್ಲವೆಂದು ಟೆಡ್ಡಿ ಬೇರ್ ನಿಂದ ಆಂಟಿಯನ್ನೇ ಸಾಯಿಸಿದ ಬಾಲಕ!

Crime

ಮಗ್ಳನ್ನು ಬರ್ತ್ ಡೇಗೆ ಕಳಿಸಿಲ್ಲವೆಂದು ಟೆಡ್ಡಿ ಬೇರ್ ನಿಂದ ಆಂಟಿಯನ್ನೇ ಸಾಯಿಸಿದ ಬಾಲಕ!

Public TV
Last updated: August 6, 2018 3:21 pm
Public TV
Share
3 Min Read
CHENNAI MURDER 1
SHARE

ಚೆನ್ನೈ: 15 ವರ್ಷದ ಬಾಲಕನೊಬ್ಬ ತನ್ನ ಸ್ವಂತ ಆಂಟಿಯನ್ನೇ ಟೆಡ್ಡಿ ಬೇರ್ ಬಳಸಿ ಉಸಿರುಗಟ್ಟಿ ಸಾಯಿಸಿದ ಘಟನೆ ಅಮಿಂಜಿಕರೈ ಎಂಬಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಇದು ಆತ್ಮಹತ್ಯೆ ಎಂದು ಬಿಂಬಿಸಲು ಆಂಟಿಯ ಕೈಯ ನರವನ್ನೇ ಹರಿತವಾದ ಚಾಕುವಿನಿಂದ ಕತ್ತರಿಸಿದ್ದಾನೆ. ಇದರಿಂದಾಗಿ ಆಕೆಯ ದೇಹದಿಂದ ಅಪಾರ ಪ್ರಮಾಣದ ರಕ್ತಸ್ರಾವವಾಗಿದೆ. ಆದರೆ ಬಾಲಕನ ದುರಾದೃಷ್ಟಕ್ಕೆ ಆತ ಮನೆಯೊಳಗೆ ಹೋಗಿ, ವಾಪಸ್ ಬಂದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಾರಣ ಈಗ ಸಿಕ್ಕಿಬಿದ್ದಿದ್ದಾನೆ.

ಯಾರು, ಏನಾಯ್ತು?:
ಅಮಿಂಜಿಕರೈನ ವೆಲ್ಲಾಲಾರ್ ಬೀದಿಯಲ್ಲಿ ಶಂಕರ್ ಸುಬ್ಬು ಹಾಗೂ ತಮಿಳ್ ಸೆಲ್ವಿ (35) ದಂಪತಿ ವಾಸವಾಗಿದ್ದರು. ಶಂಕರ್‍ಸುಬ್ಬು ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಗುರುವಾರ ಮಧ್ಯಾಹ್ನ ಅಂಗಡಿಯಿಂದ ವಾಪಸ್ ಬಂದ ಸುಬ್ಬುವಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ತಮಿಳ್ ಸೆಲ್ವಿ ಕಾಣಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಅಮಿಂಜಿಕರೈ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

CHENNAI MURDER 2

ಸಾಕ್ಷಿಯಾಗಿ ಸಿಕ್ಕಿತ್ತು ಸಿಸಿಟಿವಿ ದೃಶ್ಯ!
ದೂರು ಸ್ವೀಕರಿಸಿದ ತಕ್ಷಣ ಕಾರ್ಯಾಚರಣೆಗಿಳಿದ ಸಹಾಯಕ ಪೊಲೀಸ್ ಆಯುಕ್ತ ಗುಣಶೇಖರನ್ ಹಾಗೂ ಇನ್ಸ್ ಪೆಕ್ಟರ್ ಪೆರುಂದುರೇ ಮುರುಗನ್ ಆ ಪ್ರದೇಶದಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಇದರ ಪರಿಶೀಲನೆ ವೇಳೆ 15 ವರ್ಷ ಬಾಲಕನೊಬ್ಬ ತಮಿಳ್ ಸೆಲ್ವಿ ಮನೆಯೊಳಗೆ ಹೋಗುತ್ತಿದ್ದ ದೃಶ್ಯಾವಳಿ ಸಿಕ್ಕಿದೆ. ಗುರುವಾರ ಬೆಳಗ್ಗೆ 11.00 ಗಂಟೆಗೆ ಮನೆಯೊಳಗೆ ಹೋಗಿದ್ದ ಬಾಲಕ ಸರಿಯಾಗಿ 11.25ಕ್ಕೆ ಮನೆಯಿಂದ ವಾಪಸ್ಸಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಪೊಲೀಸರು ತೋರಿಸಿದಾಗ ಮಹಿಳೆಯ ಪತಿ ಶಂಕರ್ ಸುಬ್ಬು ಆ ಬಾಲಕ ತನ್ನ ಸೋದರಳಿಯ ಎಂದು ಪತ್ತೆ ಹಚ್ಚಿದ್ದಾರೆ.

CHENNAI MURDER 4

ಅಂತ್ಯಕ್ರಿಯೆಗೂ ಬಂದಿದ್ದ!
ಇಷ್ಟೆಲ್ಲಾ ಕಿರಾತಕ ಕೃತ್ಯ ನಡೆಸಿದ್ದ 10ನೇ ತರಗತಿ ಓದುತ್ತಿದ್ದ ಬಾಲಕ ಅತ್ತೆಯ ಅಂತ್ಯಕ್ರಿಯೆಗೂ ಆಗಮಿಸಿದ್ದ. ಎಲ್ಲಾ ಮುಗಿದ ಮೇಲೆ ಪೊಲೀಸರು ಬಾಲಕನ ವಿಚಾರಣೆ ಶುರು ಮಾಡಿದಾಗ ಆತ ನಾನು ಸುತ್ತಿಗೆ ತೆಗೆದುಕೊಂಡು ಹೋಗಲು ಬಂದಿದ್ದೆ ಎಂದು ಕತೆ ಹೇಳಲು ಶುರುವಿಟ್ಟುಕೊಂಡಿದ್ದಾನೆ. ಆದರೆ ಯಾವಾಗ ತನಿಖೆ ತೀವ್ರವಾಯಿತೋ ಆತ ತಡವರಿಸೋಕೆ ಶುರು ಮಾಡಿದ. ಕೊನೆಗೆ ತಾನೇ ಕೃತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಾನು ತಮಿಳ್ ಸೆಲ್ವಿ ಪುತ್ರಿಯ ಜೊತೆ ಸ್ನೇಹದಿಂದಿದ್ದೆ. ಆದರೆ ತಮಿಳ್ ಸೆಲ್ವಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ನಾನು ಈ ಕೃತ್ಯವೆಸಗಿದ್ದೇನೆ ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

CHENNAI MURDER 3

ಬರ್ತ್ ಡೇಗೆ ಬಾರದ್ದಕ್ಕೆ ಸಿಟ್ಟು!
ವಾರದ ಹಿಂದಷ್ಟೇ ಬಾಲಕನ ಬರ್ತ್ ಡೇ ಇತ್ತು. ಹೀಗಾಗಿ ಈ ಸಂಭ್ರಮದಲ್ಲಿ ಭಾಗಿಯಾಗಲು ಬಾಲಕ ತಮಿಳ್ ಸೆಲ್ವಿಯ 13 ವರ್ಷದ ಪುತ್ರಿಯನ್ನೂ ಆಹ್ವಾನಿಸಿದ್ದ. ಆದರೆ ತಮಿಳ್ ಸೆಲ್ವಿ ಅನುಮತಿ ಕೊಡದ ಹಿನ್ನೆಲೆಯಲ್ಲಿ ಆಕೆ ಬರ್ತ್ ಡೇ ದಿನ ಬಂದಿರಲಿಲ್ಲ. ಹೀಗಾಗಿ ಆಕೆಯ ಮೊಬೈಲ್ ಗೆ ಯಾಕೆ ಬಂದಿಲ್ಲ ಎಂದು ಮೆಸೇಜ್ ಮಾಡಿದ್ದಾನೆ. ಮೆಸೇಜ್ ಸಿಕ್ಕುತ್ತಿದ್ದಂತೆಯೇ ಫೋನ್ ಮಾಡಿದ ಬಾಲಕಿಯ ತಾಯಿ ತಮಿಳ್ ಸೆಲ್ವಿ. ನನ್ನ ಮಗಳ ಸಹವಾಸಕ್ಕೆ ಬರಬೇಡ. ಆಕೆಯಿಂದ ದೂರವಿರು ಎಂದು ಎಚ್ಚರಿಸಿದ್ದಾರೆ.

CHENNAI MURDER 6

ಈ ಘಟನೆ ಬಳಿಕ ಬಾಲಕ ಫುಲ್ ಸಿಟ್ಟಿಗೆದ್ದು ತಮಿಳ್ ಸೆಲ್ವಿ ಮೇಲೆ ದ್ವೇಷ ಸಾಧನೆಗೆ ಹೊಂಚುಹಾಕುತ್ತಿದ್ದ. ಘಟನೆ ನಡೆದ ದಿನ ಬೆಳಗ್ಗೆ ತಮಿಳ್ ಸೆಲ್ವಿ ಬಾಗಿಲಿನ ಚಿಲಕ ಹಾಕದೇ ನಿದ್ದೆಗೆ ಜಾರಿದ್ದರು. ಈ ಹೊತ್ತಲ್ಲಿ ಮನೆಗೆ ಆಗಮಿಸಿದ ಬಾಲಕ ಮನೆಯಲ್ಲಿದ್ದ ಟೆಡ್ಡಿ ಬೇರ್ ತೆಗೆದುಕೊಂಡು ಮುಖಕ್ಕೆ ಒತ್ತಿದ್ದಾನೆ. ಇದರಿಂದ ಬಿಡಿಸಿಕೊಳ್ಳಲು ಯತ್ನಿಸಿದರೂ ಉಸಿರುಗಟ್ಟಿ ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ಇದೊಂದು ಕೊಲೆ ಎಂದು ಗೊತ್ತಾಗಬಾರದು ಎಂದು ಬಾಲಕ ತಾನು ಬಯಾಲಜಿಯಲ್ಲಿ ಕಲಿತಿದ್ದ ಪಾಠದಂತೆ ತನ್ನ ಆಂಟಿಯ ಎಡಗೈಯ ನರವನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಇದರಿಂದ ಆಕೆಗೆ ರಕ್ತಸ್ರಾವ ತೀವ್ರವಾಗಿದೆ. ಹೀಗೆ ಮಾಡೋದ್ರಿಂದ ಎಲ್ಲರೂ ಆಕೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಭಾವಿಸುತ್ತಾರೆ ಎಂದು ಈ ರೀತಿ ಮಾಡಿದ್ದಾಗಿ ಪೊಲೀಸರ ಮುಂದೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಮಧ್ಯಾಹ್ನ ಊಟಕ್ಕೆ ಬಂದಿದ್ದ ಅಂಕಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಮಿಳ್ ಸೆಲ್ವಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸರು ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

CHENNAI MURDER 5

TAGGED:aminjikaraiaunty murderbirthdayMurderteddy bearಅಮಿಂಜಿಕರೈಆಂಟಿ ಮರ್ಡರ್ಟೆಡ್ಡಿ ಬೇರ್ ಕೊಲೆಬರ್ತ್ ಡೇ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Chikkamagaluru School 2
Chikkamagaluru

ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Public TV
By Public TV
5 minutes ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
20 minutes ago
Chitradurga Nirmithi Kendra Former Accountant Lokayukta Raid
Chitradurga

ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ

Public TV
By Public TV
30 minutes ago
Israel Strikes Iran
Latest

ಕದನ ವಿರಾಮಕ್ಕೆ ಒಪ್ಪದ ಇರಾನ್‌ ಮೇಲೆ ಮಿಸೈಲ್‌ ಮಳೆಗರೆದ ಇಸ್ರೇಲ್‌ – ಹಲವೆಡೆ ಸ್ಫೋಟ

Public TV
By Public TV
44 minutes ago
Aviation Indian Airlines
Latest

ಇರಾನ್, ಇಸ್ರೇಲ್-ಅಮೆರಿಕ ವಾರ್ ಎಫೆಕ್ಟ್ – ಭಾರತದ ವಿಮಾನಯಾನ ಉದ್ಯಮಕ್ಕೆ 2,500 ಕೋಟಿ ನಷ್ಟ

Public TV
By Public TV
49 minutes ago
daily horoscope dina bhavishya
Astrology

ದಿನ ಭವಿಷ್ಯ: 07-04-2026

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?