Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿರಾಟ್ ಕಳವಳದಲ್ಲಿ ಸತ್ಯವಿದೆ- ಕೊಹ್ಲಿ ನಿವೃತ್ತಿಯ ಮಾತಿನ ಹಿಂದಿದೆ ಅಂಕಿ ಅಂಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ವಿರಾಟ್ ಕಳವಳದಲ್ಲಿ ಸತ್ಯವಿದೆ- ಕೊಹ್ಲಿ ನಿವೃತ್ತಿಯ ಮಾತಿನ ಹಿಂದಿದೆ ಅಂಕಿ ಅಂಶ

Cricket

ವಿರಾಟ್ ಕಳವಳದಲ್ಲಿ ಸತ್ಯವಿದೆ- ಕೊಹ್ಲಿ ನಿವೃತ್ತಿಯ ಮಾತಿನ ಹಿಂದಿದೆ ಅಂಕಿ ಅಂಶ

Public TV
Last updated: February 20, 2020 5:57 pm
Public TV
Share
3 Min Read
virat
SHARE

– 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ, 82 ಟಿ20

ವೆಲ್ಲಿಂಗ್ಟನ್: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನೇಕ ಸಂದರ್ಭಗಳಲ್ಲಿ ಕ್ರಿಕೆಟ್ ಜವಾಬ್ದಾರಿ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಕಳವಳದಲ್ಲಿ ಸತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು, ವಿರಾಟ್ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಸೇರಿದಂತೆ ಪ್ರತಿವರ್ಷವೂ ಸರಾಸರಿ 36 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಒಟ್ಟುಗೂಡಿಸಿ ಕೊಹ್ಲಿ ಪ್ರತಿ ವರ್ಷವೂ ಸುಮಾರು 300 ದಿನಗಳ ಕಾಲ ಕಾರ್ಯನಿರತವಾಗಿದೆ. ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಸರಣಿಯ ಮುನ್ನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಕೊಹ್ಲಿ ಮಾತು 

TEAM INDIA 2

ವಿರಾಟ್ ಕೊಹ್ಲಿ 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಕಿಂಗ್ಸ್‍ಸ್ಟನ್‍ನಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡಿದರು. ಅಂದಿನಿಂದ ಅವರು 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ ಹಾಗೂ 82 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಕೊಹ್ಲಿ ಇಲ್ಲಿಯವರೆಗೆ ಕೇವಲ ಪಂದ್ಯಕ್ಕಾಗಿ 750 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಆದರೆ ಪ್ರಯಾಣ, ಅಭ್ಯಾಸ ಅವಧಿ ಮತ್ತು ಅಭ್ಯಾಸ ಪಂದ್ಯಗಳನ್ನು ಕೂಡಿಸಿದರೆ ಕೊಹ್ಲಿ ಇದುವರೆಗೆ ಸುಮಾರು 4 ಸಾವಿರ ದಿನಗಳಿಂದ ಕ್ರಿಕೆಟ್‍ನಲ್ಲಿ ನಿರತರಾಗಿದ್ದಾರೆ.

ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಜನವರಿ 23ರಂದು ಬಿಡುಗಡೆಯಾದ ವೇಳಾ ಪಟ್ಟಿಯ ವಿಚಾರವಾಗಿ ವಿರಾಟ್ ಕೊಂಚ ಅಸಮಾಧಾನ ಹೊರ ಹಾಕಿದ್ದರು. “ಆಟಗಾರರು ನೇರವಾಗಿ ಕ್ರೀಡಾಂಗಣಕ್ಕೆ ಇಳಿದು ಪಂದ್ಯವನ್ನು ಆಡುವ ದಿನ ದೂರವಿಲ್ಲ” ಎಂದು ಕೊಹ್ಲಿ ಹೇಳಿದ್ದರು. ಈ ಬೆನ್ನಲ್ಲೇ ವೆಲ್ಲಿಂಗ್ಟನ್‍ನಲ್ಲಿನ ಜವಾಬ್ದಾರಿ ಹೊರೆಯ ಮಾತನಾಡಿ, “ಇದನ್ನು ನೀವು ಯಾವುದೇ ರೀತಿಯಲ್ಲಿ ಮರೆಮಾಡಲು ಸಾಧ್ಯವಿಲ್ಲ. ನಾನು ವರ್ಷಕ್ಕೆ 300 ದಿನ ಆಡುತ್ತಿದ್ದೇನೆ. ಇದು ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಸಹ ಒಳಗೊಂಡಿದೆ. ಕೆಲಸದ ಹೊರೆ ಸಾರ್ವಕಾಲಿಕ ಒಂದೇ ಆಗಿರುತ್ತದೆ” ಎಂದು ತಿಳಿಸಿದ್ದರು.

Team India Main 2

ಕಳೆದ ವರ್ಷ ಜೂನ್‍ನಿಂದ ಟೀಂ ಇಂಡಿಯಾ ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುಎಸ್‍ಎ ಮತ್ತು ಭಾರತದಲ್ಲಿ 22 ಏಕದಿನ, 20 ಟಿ20 ಹಾಗೂ 7 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ಒಂದು ದಿನದ ಅಭ್ಯಾಸವನ್ನು ಸೇರಿಸಲಾಗುತ್ತದೆ. 9 ತಿಂಗಳಲ್ಲಿ ಭಾರತವು 132 ದಿನಗಳ ಕಾಲ ಮೈದಾನದಲ್ಲಿದೆ.

3 ಸ್ವರೂಪಗಳಲ್ಲಿ 414 ಪಂದ್ಯ:
ವರ್ಷದ ಪಂದ್ಯ
2008- 5
2009- 10
2010- 27
2011- 43
2012- 40
2013- 43
2014- 38

Team India Test A

2015- 31
2016- 37
2017- 46
2018- 37
2019- 44
2020- 13

2017, 2018ರಲ್ಲಿ 53 ಪಂದ್ಯಗಳನ್ನಾಡಿದ ಭಾರತ:
ಕಳೆದ 4 ವರ್ಷಗಳ ಅಂಕಿಅಂಶಗಳು ವಿರಾಟ್ ಕೊಹ್ಲಿ ಅವರ ಹೇಳಿಕೆಯನ್ನು ಸಮರ್ಥಿಸುವಂತಿವೆ. ಟೀಂ ಇಂಡಿಯಾ 2016 ಮತ್ತು 2019ರ ನಡುವೆ 12 ದೇಶಗಳಿಗೆ ಪ್ರವಾಸ ಕೈಗೊಂಡು ಮೂರು ಸ್ವರೂಪಗಳಲ್ಲಿ 204 ಪಂದ್ಯಗಳನ್ನು ಆಡಿದೆ. 2018ರಲ್ಲಿ ಭಾರತೀಯ ಕ್ರಿಕೆಟ್ ತಂಡವು ಹೆಚ್ಚು ಅಂದ್ರೆ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವರ್ಷ ಆಟಗಾರರು ಗರಿಷ್ಠ 97 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಅಂದರೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭಾರತೀಯ ತಂಡವು ಮೈದಾನದಲ್ಲಿ ಕಾಣಿಸಿಕೊಂಡಿದೆ.

team india

ಭಾರತವು ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ 2016ರಲ್ಲಿ 46 ಪಂದ್ಯಗಳನ್ನು ಆಡಿದೆ. ಈ ಸಮಯದಲ್ಲಿ ತಂಡವು 90 ದಿನಗಳ ಕಾಲ ಮೈದಾನದಲ್ಲಿ ಉಳಿದಿತ್ತು. ಅಂದರೆ ಸರಾಸರಿ ಭಾರತ ತಂಡವು ಪ್ರತಿ ನಾಲ್ಕನೇ ದಿನ ಪಂದ್ಯವನ್ನು ಆಡುತ್ತಿತ್ತು. ಟೀಂ ಇಂಡಿಯಾ 2017ರಲ್ಲಿ 53 ಪಂದ್ಯಗಳನ್ನು ಆಡಿದ್ದು, 75 ದಿನಗಳನ್ನು ಮೈದಾನದಲ್ಲಿ ಕಳೆದಿದೆ. ಈ ಅರ್ಥದಲ್ಲಿ ಆಟಗಾರರು ಪ್ರತಿ ಐದನೇ ದಿನ ಪಂದ್ಯವನ್ನು ಆಡುತ್ತಿದ್ದರು. 2019ರಲ್ಲಿ ಭಾರತ ತಂಡವು 52 ಪಂದ್ಯಗಳನ್ನು ಆಡಿ 79 ದಿನಗಳ ಕಾಲ ಮೈದಾನದಲ್ಲಿ ಉಳಿಯಿತು. ಅಂದರೆ ಪ್ರತಿ ಐದನೇ ದಿನ ಪಂದ್ಯಗಳನ್ನು ಆಡಿದೆ.

ಈ ಎಲ್ಲ ಅಂಕಿ ಅಂಶಗಳನ್ನು ನೋಡಿದಾಗ ಟೀಂ ಇಂಡಿಯಾ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಹ್ಲಿ ಅಷ್ಟೇ ಅಲ್ಲದೆ ಕೆ.ಎಲ್.ರಾಹುಲ್ ಕೂಡ ನಿರಂತರ ಪಂದ್ಯದ ಬಗ್ಗೆ ಕೊಂಚ ಅಸಮಾಧಾನ ಹೊರ ಹಾಕಿದ್ದರು.

TAGGED:CaptaincricketPublic TVRetirementStatisticsTeam indiavirat kohliಟೀಂ ಇಂಡಿಯಾನ್ಯೂಜಿಲೆಂಡ್ಪಬ್ಲಿಕ್ ಟಿವಿಬಿಸಿಸಿಐವಿರಾಟ್ ಕೊಹ್ಲಿ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

Andhra Pradesh Man Kills Daughter For Marrying Lover Cop Suspended For Hiding Murder
Crime

ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಕೊಂದ ತಂದೆ –  ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಇನ್ಸ್‌ಪೆಕ್ಟರ್ ಸಸ್ಪೆಂಡ್

Public TV
By Public TV
11 minutes ago
HD Kumaraswamy
Bagalkot

ನಿಮ್ಮ ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ಐದೈದು ದಿನ ಪ್ರಚಾರ ಮಾಡೋ ಅಗತ್ಯ ಇತ್ತಾ? – ಸಿಎಂಗೆ ಹೆಚ್‌ಡಿಕೆ ಗುದ್ದು

Public TV
By Public TV
23 minutes ago
Gadag priniting press
Districts

ಮುದ್ರಣ ಕಾಶಿಗೂ ತಟ್ಟಿತು ಯುದ್ಧದ ಕರಿನೆರಳು – ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆ

Public TV
By Public TV
1 hour ago
Tadiandamol Peak 1
Districts

ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ಮಿಸ್ಸಿಂಗ್‌ – 4ನೇ ದಿನವೂ ಮುಂದುವರಿದ ಶೋಧ

Public TV
By Public TV
2 hours ago
Tumakuru Sira KSRTC Private Bus Accident
Crime

ಓವರ್‌ಟೇಕ್ ಮಾಡುವಾಗ KSRTC, ಖಾಸಗಿ ಬಸ್ ನಡುವೆ ಡಿಕ್ಕಿ – ಇಬ್ಬರು ಸಾವು, 20 ಮಂದಿಗೆ ಗಾಯ

Public TV
By Public TV
2 hours ago
Ballri Municipal CorporationEngineer Veeresh
Bellary

ಬಳ್ಳಾರಿ ಪಾಲಿಕೆಯ ಕೈ ಸದಸ್ಯನಿಂದ ಹಲ್ಲೆಗೆ ಒಳಗಾದ ಎಂಜಿನಿಯರ್‌ ಮೇಲೆ ಈಗ ಅಟ್ರಾಸಿಟಿ ಕೇಸ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?