ಅಂಗನವಾಡಿ ಶಿಕ್ಷಕಿಯಿಂದಲೇ ಕಳ್ಳತನ!

Public TV
1 Min Read
shira copy

ತುಮಕೂರು: ಮಕ್ಕಳಿಗೆ, ಬಾಣಂತಿಯರಿಗೆ ನೀಡುತ್ತಿದ್ದ ಆಹಾರ ಪದಾರ್ಥವನ್ನು ಕದ್ದು ಅಂಗನವಾಡಿ ಶಿಕ್ಷಕಿ ಸಿಕ್ಕಿಬಿದ್ದಿದ್ದಾರೆ.

ತಿಮ್ಮರಾಜಮ್ಮ ಕಳ್ಳತನ ಮಾಡುತ್ತಿದ್ದ ಶಿಕ್ಷಕಿ. ಶಿರಾ ತಾಲೂಕು ಬುಕ್ಕಾಪಟ್ಟಣದ ಇಂದಿರಾ ಕಾಲೋನಿ ಅಂಗನವಾಡಿಯಲ್ಲಿ ಕದ್ದ ಆಹಾರ ಪದಾರ್ಥಗಳೊಂದಿಗೆ ಶಿಕ್ಷಕಿ ಸಿಕ್ಕಿಬಿದ್ದಿದ್ದಾರೆ.

TMK copy

ಬೆಲ್ಲ, ಎಣ್ಣೆ, ಬೇಳೆಯನ್ನು ಶಿಕ್ಷಕಿಯೇ ಕದ್ದು ಜನರಲ್ ಸ್ಟೋರ್ ಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಆಕೆ ಕದಿಯುವಾಗ ಊರಿನವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಕ್ಕಳಿಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಲಾಗುತ್ತಿದ್ದ ಆಹಾರ ಪದಾರ್ಥಗಳನ್ನು ಶಿಕ್ಷಕಿ ಕದಿಯೋದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ.

ಹೀಗೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿದ ಶಿಕ್ಷಕಿ ಹೈಡ್ರಾಮ ಮಾಡಿದ್ದಾರೆ. ತಪ್ಪಾಯ್ತು ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದು ಅಂಗಲಾಚಿದ ಪ್ರಸಂಗ ನಡೆಯಿತು. ಈ ಬಗ್ಗೆ ಸ್ಥಳೀಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *