– 51 ಮಕ್ಕಳ ವಿಮಾನಯಾನದ ಭತ್ಯೆ ಭರಿಸಿದ ಶಿಕ್ಷಕ
ತುಮಕೂರು: ವಿಮಾನದಲ್ಲಿ (Aeroplane) ಹಕ್ಕಿಯಂತೆ ಹಾರಾಡುವ ಕನಸು ಕಂಡಿದ್ದ ಶಾಲಾ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪಕ್ಕದ ಮಹಾರಾಷ್ಟ್ರ (Maharashtra) ಪ್ರವಾಸಕ್ಕೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ಹಳ್ಳಿಯ ಬಡ ಮಕ್ಕಳ ಕನಸನ್ನು ಶಿಕ್ಷಕರೊಬ್ಬರು (Teacher) ನನಸಾಗಿಸಿದ್ದಾರೆ. ಈ ಮೂಲಕ ಮಕ್ಕಳ ಪ್ರವಾಸವನ್ನು ಸ್ಮರಣೀಯವಾಗಿಸಿದ್ದಾರೆ.
ಹಳ್ಳಿಯೊಂದರ ಬಡ ಕುಟುಂಬದಲ್ಲಿನ ಶಾಲಾ ಮಕ್ಕಳನ್ನು ಮುಖ್ಯ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಅದು ಬಸ್ನಲ್ಲಿ ಅಲ್ಲ, ರೈಲಿನಲ್ಲಿಯೂ ಅಲ್ಲ, ಬಡವರಿಗೆ, ಬಹುತೇಕ ಮಧ್ಯಮ ವರ್ಗದವರಿಗೆ ಕೈಗೆಟುಕದಂಥ ತೀರಾ ದುಬಾರಿ ಎನ್ನಬಹುದಾದ ವಿಮಾನದಲ್ಲಿ. ಒಟ್ಟು ಐದು ದಿನಗಳ ಶಾಲೆಯ ಶೈಕ್ಷಣಿಕ ಪ್ರವಾಸವನ್ನು ಅವಿಸ್ಮರಣೀಯಗೊಳಿಸಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಹ ಪ್ರವಾಸವನ್ನಾಗಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷ ನಾಯಕ ಅಶೋಕ್ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!
ತುಮಕೂರು ತಾಲೂಕಿನ ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ, ತಮ್ಮ ಶಾಲೆಯ ಮಕ್ಕಳಿಗೆ ಉಚಿತ ವಿಮಾನ ಪ್ರಯಾಣ ಮಾಡಿಸಿದ ಮಾದರಿಯ ಶಿಕ್ಷಕ. ಅವರ ಈ ಅಮೋಘ ಸೇವೆಗೆ ಗ್ರಾಮೀಣ ಶಾಲಾ ಮಕ್ಕಳು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ
ತಾನು ಕೆಲಸ ನಿರ್ವಹಿಸುವ ಶಾಲೆಯ 51 ಮಕ್ಕಳನ್ನು ಮತ್ತು 7 ಶಾಲಾ ಸಿಬ್ಬಂದಿಯನ್ನು ಶಿಕ್ಷಕ ರಾಜಣ್ಣ ತಮ್ಮ ಸ್ವಂತ ಹಣದಲ್ಲಿ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ಮೂಲಕ ಅನೇಕ ಶಿಕ್ಷಕರಿಗೆ ಮಾದರಿ ಶಿಕ್ಷಕರೆನಿಸಿದ್ದಾರೆ. ಈ ಐದು ದಿನಗಳ ಪ್ರವಾಸದಲ್ಲಿ ಶಾಲೆಯ 51 ಮಕ್ಕಳು, ಐವರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ ಸೇರಿ ಒಟ್ಟು 58 ಮಂದಿಗೆ ಶಿಕ್ಷಕ ರಾಜಣ್ಣ ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆಗೆ ವಿಮಾನದಲ್ಲಿ ಪ್ರವಾಸಕ್ಕಾಗಿ ಕರೆದೊಯ್ದಿದ್ದಾರೆ. ಪ್ರಯಾಣದ ವೆಚ್ಚ ಒಬ್ಬರಿಗೆ 4,675 ರೂ. ಗಳಂತೆ ಒಟ್ಟು 2,71,150 ರೂ. ವೆಚ್ಚ ಮಾಡಿದ್ದಾರೆ. ಇದನ್ನೂ ಓದಿ: ಶಿವನಸಮುದ್ರಕ್ಕೆ ಶಿವಣ್ಣ ದಂಪತಿ ಭೇಟಿ – ಕಾವೇರಿ ನದಿಗೆ ಬಾಗಿನ ಅರ್ಪಣೆ
ಒಟ್ಟಾರೆ ತಾವು ಚಿಕ್ಕಂದಿನಲ್ಲಿ ಆಗಸದಲ್ಲಿ ಹಾರುವ ವಿಮಾನವನ್ನು ಕಂಡ ಕನಸನ್ನು ಮಕ್ಕಳಿಗೆ ನನಸು ಮಾಡಲು, ತಮ್ಮ ಸಂಬಳದ ಉಳಿತಾಯದ ಹಣದಲ್ಲಿ ಕನ್ನಡ ಮಾಧ್ಯಮದ 8, 9, 10ನೇ ತರಗತಿಯ ಮಕ್ಕಳನ್ನು ಸದಾ ಸ್ಮರಣೆಯಲ್ಲಿ ಉಳಿಯುವ ವಿಮಾನಯಾನ ಪ್ರವಾಸಕ್ಕೆ ಕರೆದೊಯ್ದಿದ್ದು ಮಕ್ಕಳ ಪಾಲಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ಸಿಂಗ್ ಬದಲು ಪ್ರಣಬ್ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್ ಅಯ್ಯರ್