ಅಮಿತ್ ಶಾ, ಕಲ್ಲಡ್ಕ ಭಟ್ ವಿರುದ್ಧ ಸಚಿವ ತನ್ವೀರ್ ಸೇಠ್ ಹೀಗಂದ್ರು!

Public TV
1 Min Read
AMITH SAIT BHAT

ರಾಯಚೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾವ ಭ್ರಮೆಯಲ್ಲಿದ್ದಾರೋ ಗೊತ್ತಿಲ್ಲ, ಕನ್ನಡಿ ನೋಡಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತನ್ವೀರ್ ಸೇಠ್, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರಗಳನ್ನ ನೋಡಿಯೇ ಅಮಿತ್ ಶಾ ಮಾತನಾಡಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ್ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಇಲಾಖೆ ಅನುದಾನ ನೀಡುತ್ತಿಲ್ಲ. ಸಂಸ್ಥೆಯ ಶಾಲೆಗಳು ಅನುದಾನಿತ ಶಾಲೆಗಳಲ್ಲ ಖಾಸಗಿ ಶಾಲೆಗಳು. ಮುಜರಾಯಿ ಇಲಾಖೆ ಬಿಸಿಯೂಟ ನೀಡುತ್ತಿತ್ತು ಈಗ ನಿಲ್ಲಿಸಿದೆ. ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕೆಲಸಕ್ಕೆ ಮಾತ್ರ ಸೀಮಿತವಾಗಿರಬೇಕು. ಮಕ್ಕಳ ಮೂಲಕ ಹಿರಿತನದ ಮಾತು ಆಡಿಸುವುದು ಸರಿಯಲ್ಲ ಅಂತ ಅಸಮಧಾನ ವ್ಯಕ್ತಪಡಿಸಿದರು.

ಆ ಸಂಸ್ಥೆಯ ಶಾಲೆಗೆ ಬಿಸಿಯೂಟ ಒದಗಿಸುವುದು ನಮಗೆ ಹೊರೆಯಲ್ಲ. ಅನುದಾನಕ್ಕೆ ಒಳಪಡಿಸಿಕೊಳ್ಳಲು ಮನವಿ ಮಾಡಲಿ. ಬಳಿಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತ ಸಚಿವರು ಹೇಳಿದ್ದಾರೆ.

vlcsnap 2017 08 15 14h19m35s37 e1502787034811

Share This Article
Leave a Comment

Leave a Reply

Your email address will not be published. Required fields are marked *