Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

Districts

ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

Public TV
Last updated: January 2, 2019 8:53 am
Public TV
Share
2 Min Read
mnd village gulum
SHARE

ಮಂಡ್ಯ: ಸ್ಥಳೀಯ ಶಾಸಕ, ಎಂಎಲ್‍ಸಿಯ ಬೆಂಬಲಿಗನಾಗಿರುವ ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಇಡೀ ಹಳ್ಳಿಯನ್ನೇ ತಮ್ಮ ತಾಯಿಯ ಹೆಸರಿಗೆ ರಿಜಿಸ್ಟಾರ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಗ್ರಾಮದ ಜನ ಹಲವು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ಇದೀಗ ಗ್ರಾಮದಲ್ಲಿರುವ ಮನೆ, ದೇವಾಲಯ, ಸರ್ಕಾರಿ ಶಾಲೆ ಸೇರಿದಂತೆ ಸಂಪೂರ್ಣ ಹಳ್ಳಿಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಕಳೆದುಕೊಳ್ಳುವ ಭೀತಿಯಲ್ಲಿ ತಮ್ಮ ಹಳ್ಳಿಯ ಉಳಿವಿಗಾಗಿ ಬೀದಿಗಿಳಿದು ಪ್ರತಿಭಟನೆಯನ್ನು ಕೂಡ ಮಾಡಿ ಹೋರಾಡುತ್ತಿದ್ದಾರೆ.

mnd village gulum 1

ಗ್ರಾಮದ ಸರ್ವೆ ನಂಬರ್ 190/1 ರಲ್ಲಿ ಬರುವ 4 ಎಕರೆ 16 ಗುಂಟೆ ಜಮೀನು ಮುಜರಾಯಿ ಇಲಾಖೆಗೆ ಸೇರಿದ್ದು, ಶ್ರೀ ಲಕ್ಷ್ಮಿ ದೇವರ ದೇವಸ್ಥಾನಕ್ಕೆ ಜಮೀನನ್ನು ಅರ್ಚಕರ ಹೆಸರಿಗೆ ವಿಲ್ ಮಾಡಲಾಗಿತ್ತು. ಈ ನಾಲ್ಕು ಎಕರೆ 16 ಗುಂಟೆ ಜಮೀನಿನಲ್ಲಿ 1 ಎಕರೆ 16 ಗುಂಟೆ ಜಮೀನನ್ನು ನಿಯಮಾನುಸಾರ ಶಾಲೆ, ದೇವಸ್ಥಾನ ಮತ್ತು ಮನೆ ನಿರ್ಮಿಸಲು ಮದಲಹಳ್ಳಿ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದಲಹಳ್ಳಿಯ ಸುಮಾರು 30 ಕುಟುಂಬಗಳು ಈ ಜಾಗದಲ್ಲಿ ಕಳೆದ 50 ವರ್ಷಗಳ ಹಿಂದೆಯೇ ಮನೆಕಟ್ಟಿಕೊಂಡು ವಾಸವಾಗಿದ್ದಾರೆ.

mnd village gulum 2

ಆದರೆ ಇದೀಗ 4 ಎಕರೆ 16 ಗುಂಟೆ ಸಂಪೂರ್ಣ ಜಮೀನನ್ನು ಶಾಸಕ ಸುರೇಶ್‍ಗೌಡ ಬೆಂಬಲಿಗ ತಾಲೂಕು ಪಂಚಾಯಿತಿ ಸದಸ್ಯ ಹೇಮರಾಜ್ ತನ್ನ ತಾಯಿ ಲಕ್ಷ್ಮಿದೇವಿ ಹೆಸರಿಗೆ ಅಕ್ರಮವಾಗಿ ರಿಜಿಸ್ಟಾರ್ ಮಾಡಿದ್ದಾರೆ. ಅಕ್ರಮ ಎಸಗಲು ಲಕ್ಷ್ಮಿದೇವಿಯ ಸಹೋದರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಶಿಕ್ಷಕ ಸಿ.ಜೆ.ಕುಮಾರ್ ತಮ್ಮ ಪ್ರಭಾವ ಬಳಸಿ ಹೇಮರಾಜ್ ಅವರಿಗೆ ಈ ಅಕ್ರಮ ಮಾಡಲು ಸಹಾಯ ಮಾಡಿದ್ದಾರೆ ಎಂದು ಮದಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

mnd village gulum 3

ಗ್ರಾಮದ 40 ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ಶಾಲೆ, ದೇವಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು ನಾಗಮಂಗಲ ತಹಶಿಲ್ದಾರ್ ನಂಜುಂಡಯ್ಯ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ನ್ಯಾಯ ದೊರಕಿಸಿಕೊಡುವುದಾಗಿ ತಹಶಿಲ್ದಾರ್ ನಂಜುಂಡಯ್ಯ ಭರವಸೆ ನೀಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಆರೋಪ ನಿರಾಕರಿಸುತ್ತಿರುವ ಲಕ್ಷ್ಮಿದೇವಿಯ ತಮ್ಮ, ಶಿಕ್ಷಕ ಸಿ.ಜೆ.ಕುಮಾರ್ ಜಮೀನಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಲಕ್ಷ್ಮಿದೇವಿ ನನ್ನ ಅಕ್ಕನೇ ಆಗಿದ್ದರೂ ಜಮೀನು ಪರಬಾರೆಯಲ್ಲಿ ನಾನು ಯಾವ ಪ್ರಭಾವವನ್ನು ಬಳಸಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಕೇಸ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.

mnd village gulum 4

ಇತ್ತ ಲಕ್ಷ್ಮಿದೇವಿಯ ಮಗ, ತಾಲೂಕು ಪಂಚಾಯ್ತಿ ಸದಸ್ಯ ಹೇಮರಾಜ್ ನಾನು ಕಾನೂನು ಬದ್ಧವಾಗಿ ನನ್ನ ತಾಯಿಯ ಹೆಸರಿಗೆ ಜಮೀನು ಕೊಂಡುಕೊಂಡಿದ್ದೇನೆ. ನನ್ನ ಬಳಿ ಎಲ್ಲ ಸೂಕ್ತ ದಾಖಲೆ ಇದೆ. ಅಲ್ಲಿ ಮನೆ ಕಟ್ಟಿರುವವರೇ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಲಯದ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಅಂತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:mandyaprotestPublic TVRegistervillagevillagersಗ್ರಾಮಸ್ಥರುಪಬ್ಲಕ್ ಟಿವಿಪ್ರತಿಭಟನೆಮಂಡ್ಯರಿಜಿಸ್ಟಾರ್ಹಳ್ಳಿ
Share This Article
Facebook Whatsapp Whatsapp Telegram

Cinema news

suraj bigg boss
Bigg Boss: ಕಿಚ್ಚನ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಔಟ್‌
Cinema Latest Top Stories TV Shows
Sanvi Sudeep 1
ನನ್ನ ದೇಹ ಚರ್ಚೆಯ ವಿಷಯವಲ್ಲ: ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್
Cinema Latest Sandalwood Top Stories
allu arjun 7
ಪುಷ್ಪಾ-2 ಕಾಲ್ತುಳಿತ ಕೇಸ್ – ನಟ ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ
Cinema Latest Main Post National
vijayalakshmi 1 1
`ಮಹಿಳೆ ತುಂಬಾ ಶಕ್ತಿಶಾಲಿ’ – ದರ್ಶನ್ ಪತ್ನಿ ಟಾಂಗ್‌ ಕೊಟ್ಟಿದ್ದು ಯಾರಿಗೆ?
Cinema Latest Sandalwood Top Stories

You Might Also Like

Hassan Bus Accident copy
Crime

ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ – ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
26 minutes ago
helium cylinder blast case mysuru eyewitness
Latest

2 ಹೆಜ್ಜೆ ಮುಂದಿಟ್ಟಿದ್ದರೆ ನಾನು ಇವತ್ತು ಬದುಕಿರುತ್ತಿರಲಿಲ್ಲ.. ನನ್ನ ಮುಂದೆ ದೇಹದ ಭಾಗ ಬಿದ್ದಿತ್ತು: ಮೈಸೂರು ಸ್ಫೋಟ ಬಗ್ಗೆ ಪ್ರತ್ಯಕ್ಷದರ್ಶಿ ಮಾತು

Public TV
By Public TV
1 hour ago
pune gangster
Latest

ಸ್ಥಳೀಯ ಸಂಸ್ಥೆ ಚುನಾವಣೆ; ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ, ಕೈ ಕಟ್ಟಿಕೊಂಡು ಜೈಲಿಂದ ಬಂದು ನಾಮಪತ್ರ ಸಲ್ಲಿಸಿದ ಗ್ಯಾಂಗ್‌ಸ್ಟರ್‌

Public TV
By Public TV
2 hours ago
New Year 2026 Karnataka Tourist Place Rush
Bengaluru City

ಹೊಸ ವರ್ಷದ ಆಚರಣೆಗೆ ಜನರ ಪ್ರವಾಸ – ಕರ್ನಾಟಕದ ಪ್ರವಾಸಿ ತಾಣಗಳು ಹೌಸ್‌ಫುಲ್

Public TV
By Public TV
2 hours ago
vanilla sponge cake 3
Food

ಹೊಸ ವರ್ಷಕ್ಕೆ ಮನೆಯಲ್ಲೇ ಮಾಡಿ ವೆನಿಲ್ಲಾ ಸ್ಪಾಂಜ್ ಕೇಕ್..

Public TV
By Public TV
9 hours ago
KC Venugopal
Latest

ಕೋಗಿಲು ಲೇಔಟ್‌ನಲ್ಲಿ ಮನೆ, ಶೆಡ್‌ಗಳ ನೆಲಸಮ ವಿಚಾರಕ್ಕೆ ಕೆ.ಸಿ ವೇಣುಗೋಪಾಲ್‌ ಎಂಟ್ರಿ; ರಾಷ್ಟ್ರಮಟ್ಟದಲ್ಲಿ ಸದ್ದು!

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?