Tag: ಹೆಚ್.ಆರ್.ರಂಗನಾಥ್

  • ಈಗ ಸೇವೆಗಳಲ್ಲಿ ಸ್ವಾರ್ಥ ಬಂದಿದೆ: ಹೆಚ್‌.ಆರ್‌.ರಂಗನಾಥ್‌ ಬೇಸರ

    ಈಗ ಸೇವೆಗಳಲ್ಲಿ ಸ್ವಾರ್ಥ ಬಂದಿದೆ: ಹೆಚ್‌.ಆರ್‌.ರಂಗನಾಥ್‌ ಬೇಸರ

    – ಮೈಸೂರಿನಲ್ಲಿ ಎಂ.ವೆಂಕಟಕೃಷ್ಣಯ್ಯನವರ ಜಯಂತೋತ್ಸವದಲ್ಲಿ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರು ಭಾಗಿ
    – ದಿ ಅನಾಥಾಲಯದ ಯೋಜನೆಗಳು ಬೇಗ ಸಾಕಾರವಾಗಲಿ

    ಮೈಸೂರು: ಈಗ ಸೇವೆಗಳಲ್ಲಿ ಸಾರ್ಥ ಬಂದಿದೆ. ಹೀಗಾಗಿ ಜನರಿಗೆ ಸಂಸ್ಥೆಗಳ ಮೇಲೆ ನಂಬಿಕೆ ಹೋಗಿದೆ ಎಂದು ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಬೇಸರ ವ್ಯಕ್ತಪಡಿಸಿದರು.

    ಮೈಸೂರಿನ (Mysuru) ದಿ ಅನಾಥಾಲಯದಲ್ಲಿ (The Anathalaya) ವೃದ್ಧ ಪಿತಾಮಹ ದಯಸಾಗರ ಎಂ.ವೆಂಕಟಕೃಷ್ಣಯ್ಯನವರ 108 ನೇ ಜಯಂತ್ಯೋತ್ಸವ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ಹೆಚ್.ಆರ್. ರಂಗನಾಥ್ ಅವರು, ಈಗ ಸೇವೆಗಳಲ್ಲಿ ಸ್ವಾರ್ಥ ಬಂದಿದೆ‌. ಹೀಗಾಗಿ ಜನಕ್ಕೆ ಸಂಸ್ಥೆಗಳ ಮೇಲೆ ನಂಬಿಕೆ ಹೋಗಿದೆ. ಆದರೆ ಅನಾಥಾಲಯದ ಆಡಳಿತ ಮಂಡಳಿ ಮಾತ್ರ ಬಹಳ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದೆ. ಇನ್ನೂ ಬಹಳ ದೊಡ್ಡ ಮಟ್ಟದಲ್ಲಿ ಅನಾಥಾಲಯದ ಸೇವೆ ವಿಸ್ತರಣೆ ಆಗುವ ಯೋಜನೆಗಳನ್ನು ಆಡಳಿತ ಮಂಡಳಿ ಇಟ್ಟುಕೊಂಡಿದೆ. ಈ ಯೋಜನೆಗಳು ಬೇಗ ಸಾಕಾರವಾಗಲಿ. ಈ ಸಂಸ್ಥೆ ಸದಾ ಕಾಲ ಉಳಿಯಬೇಕು ಎಂದು ಆಶಿಸಿದರು. ಇದನ್ನೂ ಓದಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆ

    the anathalaya program

    ಪಾಪಿಗಳು ಒಮ್ಮೊಮ್ಮೆ ಬಹುದಾನಿಗಳಂತೆ ನನಗೆ ಕಾಣಿಸುತ್ತಾರೆ. ಅವರ ಪಾಪವನ್ನು ನಮ್ಮಂಥವರ ಮೂಲಕ ಕಳೆದುಕೊಳ್ಳುವ ಮನಸ್ಥಿತಿ ಸದಾಕಾಲ ಅವರಲ್ಲಿರುತ್ತದೆ. ಸಾಮಾಜಿಕ ಕಳಕಳಿ, ಸೇವೆ, ಮನೋಭಾವ ಸ್ಥಿರವಾಗಿದ್ದರೆ, ಅದು ಸತ್ವವಾಗಿದ್ದರೆ, ಅದರಲ್ಲಿ ಸ್ವಾರ್ಥ ಇಲ್ಲದಿದ್ದರೆ, ಅಂತಹ ಸಮಾಜಸೇವೆ ಈ ಸಮಾಜ ಗುರುತಿಸಿ ಕಾಪಾಡುತ್ತದೆ. ಇಲ್ಲದಿದ್ದರೆ ಆ ಸಂಸ್ಥೆಗಳು ಮುಳುಗಿ ಹೋಗುತ್ತವೆ ಎಂದು ತಿಳಿಸಿದರು.

    ವ್ಯಕ್ತಿಯಾಗಿ ಸೇವೆ, ಸಹಾಯ ಮಾಡುವುದು ಬಹಳ ಸುಲಭ. ಸಂಸ್ಥೆಗಳಾಗಿ ಸೇವಾ ಕಾರ್ಯಗಳನ್ನು ಮುಂದುವರಿಸುವುದು ಬಹಳ ಕಷ್ಟ. ಯಾಕೆಂದರೆ ಸಂಸ್ಥೆಗಳ ಒಳಗಡೆ ಬಹಳಷ್ಟು ಕಾಲ ಖೋ ಖೋ ಮತ್ತೆ ಕಬಡ್ಡಿ ಆಟ ನಡೆಯುತ್ತಿರುತ್ತದೆ. ಒಬ್ಬರು ಖೋ ಕೊಡುತ್ತಾರೆ, ಮತ್ತೊಬ್ಬರು ಕಾಲು ಎಳೀತಾರೆ. ಈ ಎರಡೂ ದೇಶೀಯ ಆಟಗಳನ್ನು ನಾವು ಚೆನ್ನಾಗಿಯೇ ಆಡುತ್ತೇವೆ ಎಂದು ಆಧುನಿಕ ವ್ಯವಸ್ಥೆ ಬಗ್ಗೆ ವ್ಯಂಗ್ಯಾತ್ಮಕವಾಗಿ ಮಾತನಾಡಿದರು. ಇದನ್ನೂ ಓದಿ: ಸಂಸದ ಡಾ.ಮಂಜುನಾಥ್ ನನ್ನ ಪರ ಇದ್ದಾರೆ, ಟಿಕೆಟ್ ಸಿಗುವ ವಿಶ್ವಾಸ ಇದೆ: ಸಿ.ಪಿ ಯೋಗೇಶ್ವರ್

    ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ, ದಿ ಅನಾಥಾಲಯದ ಅಧ್ಯಕ್ಷರಾದ ಸಿ.ವಿ.ಗೋಪಿನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಹೆಚ್.ವಿ‌.ಮೃತ್ಯುಂಜಯ ಹಾಗೂ ರಾಘವೇಂದ್ರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

  • ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ

    ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ

    – ಹಲವು ಕೋರ್ಸ್‌ಗಳ ಬಗ್ಗೆ ಮಾಹಿತಿ, ಗೊಂದಲಗಳಿಗೆ ಪರಿಹಾರ ಕಂಡುಕೊಂಡ ವಿದ್ಯಾರ್ಥಿಗಳು, ಪೋಷಕರು

    ಬೆಂಗಳೂರು: ʻಪಬ್ಲಿಕ್ ಟಿವಿʼ (Public TV) ಪ್ರಸ್ತುತ ಪಡಿಸುವ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಎರಡನೇ ದಿನವಾದ ಭಾನುವಾರವೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು ಮೇಳಕ್ಕೆ ಭೇಟಿ ನೀಡಿ, ಡಿಗ್ರಿ ನಂತರ ಮುಂದೇನು? ಅನ್ನೋ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ.

    Public TV Education Expo 2

    ʻಪಬ್ಲಿಕ್ ಟಿವಿʼ ಪ್ರಸ್ತುತಪಡಿಸುವ 3ನೇ ಆವೃತ್ತಿಯ, ವಿದ್ಯಾಮಂದಿರ ಮೆಗಾ ಪಿಜಿ ಶೈಕ್ಷಣಿಕ ಮೇಳಕ್ಕೆ (Vidhya Mandira PG Education Expo) ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ಮೊದಲ ದಿನದ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಆರಂಭವಾದ ಶೈಕ್ಷಣಿಕ ಮೇಳದಲ್ಲಿ 2ನೇ ದಿನವೂ ಸಾವಿರಾರು ವಿದ್ಯಾರ್ಥಿಗಳು (Bengaluru Students) ಭಾಗಿಯಾಗಿದ್ದರು. ಡಿಗ್ರಿ ಬಳಿಕ ಮುಂದೇನು..? ಯಾವ ಕೋರ್ಸ್ ಭವಿಷ್ಯವನ್ನ ರೂಪಿಸುತ್ತೆ? ಅನ್ನೋ ಹಲವು ಗೊಂದಲಗಳಿಗೆ ಪೋಷಕರು, ವಿದ್ಯಾರ್ಥಿಗಳು ಪರಿಹಾರ ಕಂಡುಕೊಂಡರು. ತಮಗಿಷ್ಟದ ಕೋರ್ಸ್‌ಗಳ ಬಗ್ಗೆ ತಿಳಿದುಕೊಂಡು, ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ಪಡೆದರು. ಇದನ್ನೂ ಓದಿ: ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು

    Public TV Education Expo 3

    ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ಆವೃತ್ತಿಯ ಪಿಜಿ ಶೈಕ್ಷಣಿಕ ಮೇಳದಲ್ಲಿ 42ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗಿಯಾಗಿದ್ದವು. 2ನೇ ದಿನದ ಶೈಕ್ಷಣಿಕ ಮೇಳವು ಬೆಳಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆ ವೇಳೆಗೆ ಮುಕ್ತಾಯಗೊಂಡಿತು. ಭಾನುವಾರ ರಜಾದಿನದ ಹಿನ್ನೆಲೆ ವಿದ್ಯಾರ್ಥಿಗಳು, ಪೋಷಕರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ತಮಗೆ ಯಾವ ಕಾಲೇಜು ಸೂಕ್ತ? ಕೋರ್ಸ್, ಪ್ರವೇಶ ಶುಲ್ಕ ಹೇಗೆ? ಕೋರ್ಸ್ ಬಳಿಕ ಉದ್ಯೋಗಕಾವಕಾಶ ಹೇಗೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆದರು. ಪೋಷಕರು ಸಹ ತಮ್ಮ ಮಕ್ಕಳಿಗೆ ಯಾವ ಶಿಕ್ಷಣ ಸಂಸ್ಥೆಗಳು ಸೂಕ್ತ? ಅನ್ನೋ ಬಗ್ಗೆ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್

    Public TV Education Expo 4

    ಅದೃಷ್ಟಶಾಲಿಗಳಿಗೆ ಲಕ್ಕಿ ಡಿಪ್‌:
    ಇದೇ ವೇಳೆ ಶೈಕ್ಷಣಿಕ ಮೇಳದಲ್ಲಿ ಭಾಗಿಯಾದ 14 ಅದೃಷ್ಟಶಾಲಿಗಳಿಗೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಚಿನ್ನದ ನಾಣ್ಯವಿರುವ ಗಿಫ್ಟ್‌ ಓಚರ್‌ಗಳನ್ನ ನೀಡಲಾಯಿತು. ಇ‌ನ್ನೂ ಮೇಳದಲ್ಲಿ ಭಾಗಿಯಾದ ಪೋಷಕರು ಕೂಡ ಮೇಳದ ಬಗ್ಗೆ ಸಂತಸ ಹಂಚಿಕೊಂಡರು. ಸಾಮಾನ್ಯವಾಗಿ ಡಿಗ್ರಿ ಬಳಿಕ ಸ್ನಾತಕೋತ್ತರ ಪದವಿಗಳಿಗೆ ಮಕ್ಕಳನ್ನ ಸೇರಿಸಲು ಹತ್ತಾರು ಕಾಲೇಜಗಳನ್ನ ಪೋಷಕರು ಸುತ್ತಬೇಕಾದ ಪರಿಸ್ಥಿತಿ ಇರ್ತಾ ಇತ್ತು. ಆದ್ರೆ ʻಪಬ್ಲಿಕ್ ಟಿವಿʼ ಈ ಕಷ್ಟವನ್ನ ತಪ್ಪಿಸಿ ಒಂದೇ ವೇದಿಕೆ ಅಡಿ ನೂರಾರು ಆಯ್ಕೆಗಳನ್ನ ನೀಡಿದೆ. ನಿಜಕ್ಕೂ ಇದು ಅದ್ಭುತ ಕಾರ್ಯಕ್ರಮ ಅಂತ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    publictv vidhyamandir scaled

    ಇನ್ನೂ ಎರಡು ದಿನಗಳ ಮೇಳದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ ಅನುಕೂಲವನ್ನ‌ ಪಡೆದುಕೊಂಡ್ರು. ಮೇಳದಲ್ಲಿ ಭಾಗಿಯಾದ ವಿದ್ಯಾಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇನ್ನೂ ಕಾರ್ಯಕ್ರಮದ ಆಯೋಜನೆ, ಜನರ ಪ್ರತಿಕ್ರಿಯೆಗೆ ಮೇಳದಲ್ಲಿ ಭಾಗಿಯಾದ ವಿದ್ಯಾಸಂಸ್ಥೆಗಳು ಕೂಡ ಹರ್ಷ ವ್ಯಕ್ತಪಡಿಸಿ, ಈ ರೀತಿಯ ಕಾರ್ಯಕ್ರಮ ಪೋಷಕರ ಒತ್ತಡ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನೂಕೂಲ ಆಗಲಿದೆ. ಕಾರ್ಯಕ್ರಮ ಆಯೋಜನೆ ಮಾಡಿದ ʻಪಬ್ಲಿಕ್ ಟಿವಿʼಗೆ ಧನ್ಯವಾದ ಅರ್ಪಿಸಿದರು.

    PublicTV VidhyaMandir 2

    ಒಟ್ಟಾರೆ ಎರಡು ದಿನದ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಕಾರ್ಯಕ್ರಮದ ಮೂಲಕ ಸಾವಿರಾರು ಪೋಷಕರು,‌ ವಿದ್ಯಾರ್ಥಿಗಳ‌ ಭವಿಷ್ಯದ ಕನಸಿನ ಗಿಡಕ್ಕೆ ನೀರೆರೆಯುವ ಪ್ರಯತ್ನ ಮಾಡಿದೆ.

  • ಪಬ್ಲಿಕ್ ಟಿವಿಯ ʻವಿದ್ಯಾಮಂದಿರʼ ಪಿಜಿ ಶೈಕ್ಷಣಿಕ ಮೇಳ – ಇಂದು ಕೊನೇ ದಿನ, ಬನ್ನಿ ಸದುಪಯೋಗಪಡಿಸಿಕೊಳ್ಳಿ..

    ಪಬ್ಲಿಕ್ ಟಿವಿಯ ʻವಿದ್ಯಾಮಂದಿರʼ ಪಿಜಿ ಶೈಕ್ಷಣಿಕ ಮೇಳ – ಇಂದು ಕೊನೇ ದಿನ, ಬನ್ನಿ ಸದುಪಯೋಗಪಡಿಸಿಕೊಳ್ಳಿ..

    ಬೆಂಗಳೂರು: AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ ‘ಪಬ್ಲಿಕ್‌ ಟಿವಿ’ (PUBLiC TV) ಪ್ರಸ್ತುತ ಪಡಿಸುತ್ತಿರುವ `ವಿದ್ಯಾಮಂದಿರ’ ಶೈಕ್ಷಣಿಕ ಮೇಳ (Vidhya Mandira Education Expo) 3ನೇ ಆವೃತ್ತಿಯು ಇಂದು (ಸೆ.1) ಮುಕ್ತಾಯಗೊಳ್ಳಲಿದೆ. ಆದ್ದರಿಂದ ಡಿಗ್ರಿ ಬಳಿಕ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಸೂಕ್ತ ಪರಿಹಾರ ಕಂಡುಕೊಳ್ಳಲು ಇದು ಸೂಕ್ತ ಶೈಕ್ಷಣಿಕ ಮೇಳವಾಗಿದೆ.

    vidhya mandira

    ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪೋಷಕರು ಪದವಿ ನಂತರ ಮುಂದೇನು ಎನ್ನುವ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ. ಇಂದು ಕೊನೆಯ ದಿನವಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

    ಮಲ್ಲೇಶ್ವರಂನ ಕೆ.ಸಿ.ಜನರಲ್‌ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ವಿದ್ಯಾಮಂದಿರ ಶೈಕ್ಷಣಿಕ ಮೇಳ ನಡೆಯುತ್ತಿದೆ. ಭಾನುವಾರವಾದ ಇಂದು ಸಹ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಜುಕೇಷನ್‌ ಎಕ್ಸ್‌ಪೋ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಎಜುಕೇಶನ್ ಎಕ್ಸ್‌ಪೋದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

    Vidhyamandira Education

    42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗಿ:
    ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಲಕ್ಕಿ ಡಿಪ್‌ ಉಡುಗೊರೆ ಪಡೆಯಿರಿ
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡಿಪ್‌ ಮೂಲಕ ಪ್ರತಿ ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

    Vidhyamandira Education Expo 2

    ಪ್ಲಾಟಿನಂ ಪ್ರಾಯೋಜಕರು:
    ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌, CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಸಪ್ತಗಿರಿ NPS ವಿಶ್ವವಿದ್ಯಾಲಯ.

    ಸಿಲ್ವರ್‌ ಪ್ರಾಯೋಜಕರು:
    AIMS ಇನ್‌ಸ್ಟಿಟ್ಯೂಟ್ಸ್‌, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ಬೆಂಗಳೂರು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪೂರ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪ್ರೆಸಿಡೆನ್ಸಿ ಯೂನಿವರ್ಸಿಟಿ.

    Vidhyamandira Education Expo 3

    ಸ್ಪೆಷಲ್‌ ಪೆವಿಲಿಯನ್‌
    ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್.

    ಸ್ಟಾಲ್‌ ಪಾಲುದಾರರು:
    ಆಚಾರ್ಯ ಬೆಂಗಳೂರು ಬಿ ಶಾಲೆ – ಸ್ವಾಯತ್ತ, BMS ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್, ಸಿಟಿ ಕಾಲೇಜು, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ – ತುಮಕೂರು, ಪ್ರೆಸಿಡೆನ್ಸಿ ಕಾಲೇಜು, ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆರ್ ವಿ ವಿಶ್ವವಿದ್ಯಾಲಯ, www.bangalorestudy.com, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್, ಎಸ್ – ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯ – ಬೆಂಗಳೂರು, ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಹರ್ಷ ಇನ್ಸ್ಟಿಟ್ಯೂಷನ್ಸ್, ಸುರಾನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್).

    ಕ್ರಿಯೆಟಿವ್‌ ಸ್ಪಾನರ್ಸ್‌:
    RR ಸಂಸ್ಥೆಗಳು

    ಇವೆಂಟ್‌ ಪಾರ್ಟ್‌ನರ್‌ :
    AD 6 ಜಾಹೀರಾತು

    ಗಿಫ್ಟ್‌ ಸ್ಪಾನ್ಸರ್ಸ್‌:
    ಜೀನಿ ಮಿಲೆಟ್‌ ಮಿಕ್ಸ್

    (ಕೊನೇ ದಿನ) ದಿನಾಂಕ: ಸೆಪ್ಟೆಂಬರ್‌ 1
    ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

  • ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    – ಎಜುಕೇಶನ್‌ ಎಕ್ಸ್‌ಪೋದಲ್ಲಿ ಪಿಜಿ ಕಾಲೇಜು, ಕೋರ್ಸ್‌ಗಳ ಬಗ್ಗೆ ಮಾಹಿತಿ
    – ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ರಿಂದ ಕಾರ್ಯಕ್ರಮಕ್ಕೆ ಚಾಲನೆ
    – ರೇವಾ ವಿವಿ ಕುಲಪತಿ ಶ್ಯಾಮರಾಜು, ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಮುಖ್ಯ ಅತಿಥಿಗಳಾಗಿ ಭಾಗಿ

    ಬೆಂಗಳೂರು: ‘ಪಬ್ಲಿಕ್‌ ಟಿವಿ’ (PUBLiC TV) ಪ್ರಸ್ತುತ ಪಡಿಸುತ್ತಿರುವ AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ ವಿದ್ಯಾಮಂದಿರ ಎಜುಕೇಷನ್‌ ಎಕ್ಸ್‌ಪೋ (Vidhya Mandira Education Expo) 3ನೇ ಆವೃತ್ತಿಗೆ ಇಂದು (ಶನಿವಾರ) ಚಾಲನೆ ದೊರೆಯಲಿದೆ.

    Public TV Education Expo 2024

    ಮಲ್ಲೇಶ್ವರಂನ ಕೆ.ಸಿ.ಜನರಲ್‌ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ವಿದ್ಯಾಮಂದಿರ ಶೈಕ್ಷಣಿಕ ಮೇಳ ನಡೆಯಲಿದ್ದು, ಇಂದು ಬೆಳಗ್ಗೆ 10:30 ಕ್ಕೆ ಕಾರ್ಯಕ್ರಮಕ್ಕೆ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೇವಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ.ಶ್ಯಾಮರಾಜು ಹಾಗೂ ಮಾಜಿ ಡಿಸಿಎಂ ಮತ್ತು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್.ಅಶ್ವಥ್‌ ನಾರಾಯಣ್‌ (C.N.Ashwath Narayan) ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    HR RANGANATH

    ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಜುಕೇಷನ್‌ ಎಕ್ಸ್‌ಪೋ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬಹುದು.

    ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ಪಬ್ಲಿಕ್ ಟಿವಿ ವಿದ್ಯಾಮಂದಿರ ಎಜುಕೇಶನ್ ಎಕ್ಸ್‌ಪೋ ಪರಿಹಾರ ನೀಡಲಿದೆ. ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾಮಂದಿರಕ್ಕೆ ಬನ್ನಿ

    Dr. Ashwathnarayan

    ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

    ಉಡುಗೊರೆ ಪಡೆಯಿರಿ
    ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ಪ್ರತಿ ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

    ಪ್ಲಾಟಿನಂ ಪ್ರಾಯೋಜಕರು:
    ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ.

    vidhya mandira

    ಗೋಲ್ಡ್‌ ಪ್ರಾಯೋಜಕರು
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌, CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಸಪ್ತಗಿರಿ NPS ವಿಶ್ವವಿದ್ಯಾಲಯ.

    ಸಿಲ್ವರ್‌ ಪ್ರಾಯೋಜಕರು:
    AIMS ಇನ್‌ಸ್ಟಿಟ್ಯೂಟ್ಸ್‌, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು,
    ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ಬೆಂಗಳೂರು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪೂರ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಪ್ರೆಸಿಡೆನ್ಸಿ ಯೂನಿವರ್ಸಿಟಿ,

    ಸ್ಪೆಷಲ್‌ ಪೆವಿಲಿಯನ್‌
    ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್.

    ಸ್ಟಾಲ್‌ ಪಾರ್ಟ್‌ನರ್‌:
    ಆಚಾರ್ಯ ಬೆಂಗಳೂರು ಬಿ ಶಾಲೆ – ಸ್ವಾಯತ್ತ, BMS ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್, ಸಿಟಿ ಕಾಲೇಜು, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಶ್ರೀದೇವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ – ತುಮಕೂರು, ಪ್ರೆಸಿಡೆನ್ಸಿ ಕಾಲೇಜು, ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆರ್ ವಿ ವಿಶ್ವವಿದ್ಯಾಲಯ, www.bangalorestudy.com, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್, ಎಸ್ – ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯ – ಬೆಂಗಳೂರು, ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಹರ್ಷ ಇನ್ಸ್ಟಿಟ್ಯೂಷನ್ಸ್, ಸುರಾನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್).

    ಕ್ರಿಯೆಟಿವ್‌ ಸ್ಪಾನರ್ಸ್‌:
    RR ಸಂಸ್ಥೆಗಳು

    ಇವೆಂಟ್‌ ಪಾರ್ಟ್‌ನರ್‌ :
    AD 6 ಜಾಹೀರಾತು

    ಗಿಫ್ಟ್‌ ಸ್ಪಾನ್ಸರ್ಸ್‌:
    ಜೀನಿ ಮಿಲೆಟ್‌ ಮಿಕ್ಸ್

    ದಿನಾಂಕ: ಆಗಸ್ಟ್‌ 31, ಸೆಪ್ಟೆಂಬರ್‌ 1
    ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು
    ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

  • ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ

    ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ

    ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೋಟಿ’ (Kotee Film) ಸಿನಿಮಾ ಅಬ್ಬರ ಇಂದಿನಿಂದ ಶುರುವಾಗಿದೆ. ‘ಕೋಟಿ’ ಎಂಬ ಮಿಡಲ್ ಕ್ಲಾಸ್ ಹುಡುಗ ನಿಷ್ಠೆಯಿಂದ ಕೋಟಿ ರೂಪಾಯಿ ಗಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುತ್ತಾನೆ. ಆ ಕನಸಿನ ಹಾದಿಯಲ್ಲಿ ಬರುವ ಸವಾಲುಗಳು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಜೊತೆ ನಟರಾಕ್ಷಸ ಡಾಲಿ ಹಂಚಿಕೊಂಡಿದ್ದಾರೆ. ‘ಕೋಟಿ’ ಕನಸುಗಳನ್ನು ಡಾಲಿ ಬಿಚ್ಚಿಟ್ಟಿದ್ದಾರೆ.

    daali dhananjay 1 1

    ‘ಕೋಟಿ’ ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ಏನು ಎಂಬುದನ್ನು ಡಾಲಿ ಮುಕ್ತವಾಗಿ ಮಾತನಾಡಿದ್ದಾರೆ. ಪರಮ್ ಅವರು ನನಗೆ ‘ಬಡವ ರಾಸ್ಕಲ್’ ಸಿನಿಮಾ ಸಮಯದಲ್ಲಿ ಪರಿಚಯ ಆಗಿದ್ದು, ತುಂಬಾ ಹತ್ತಿರದಿಂದ ನೋಡಿದ್ದೇನೆ. ನಮ್ಮೀಬ್ಬರಿಗೂ ಒಳ್ಳೆಯ ಕನೆಕ್ಷನ್ ಇತ್ತು. ಅವರು ಕಥೆ ಹೇಳಿದಾಗ ನನಗೆ ತುಂಬಾ ಕ್ಯೂರಿಯಾಸಿಟಿ ಇತ್ತು. ಇವರು ಕಿರುತೆರೆಯಲ್ಲಿ ಕೆಲಸ ಮಾಡಿದವರು. ಸಿನಿಮಾಗೆ ಹೇಗೆ ಬರೆದಿರುತ್ತಾರೆ ಏನೋ ಅಂತ ಭಾವಿಸಿದ್ದೆ, ಆದರೆ ಪರಮ್ ಕಥೆ ಹೇಳಿದಾಗ ಇಲ್ಲ ಅನ್ನೋಕೆ ಮನಸ್ಸು ಬರಲಿಲ್ಲ. ಈ ಕಥೆ ನನಗೆ ಕಾಡ್ತಾ ಇತ್ತು ಎಂದು ಡಾಲಿ ಮಾತನಾಡಿದರು. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    daali dhananjay

    ನೀವು ಫ್ರೆಂಡ್‌ಶಿಪ್‌ಗಾಗಿ ಸಿನಿಮಾ ಓಕೆ ಹೇಳಬೇಡಿ. ಚೆನ್ನಾಗಿಲ್ಲ ಅಂದರೆ ಚೆನ್ನಾಗಿಲ್ಲ ಅಂತಲೇ ಹೇಳಿ ಎಂದಿದ್ದರು. ಅವರು ಸಖತ್ ಆಗಿಯೇ ಕಥೆ ಬರೆದಿದ್ದರು. ಒಂದು ಚಾನಲ್ ಕಟ್ಟಿ ಅಷ್ಟು ಸಕ್ಸಸ್ ಕಂಡಿರೋರು. ಒಂದು ಸಿನಿಮಾಗೆ ಕಥೆ ಕಟ್ಟುವ ತಾಕತ್ತು ಇದೆ ಎನ್ನುವ ನಂಬಿಕೆ ನನಗಿತ್ತು ಹಾಗಾಗಿ ಕೋಟಿ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ಡಾಲಿ ಮಾತನಾಡಿದರು. ಕೋಟಿ ಸಿನಿಮಾ ನಿಜಕ್ಕೂ ವರ್ಕೌಟ್ ಆಗಿದೆ. ಜನರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆ ಇದೆ ಎಂದು ಮಾತನಾಡಿದರು.

    daali dhananjay 1

    ಅಂದಹಾಗೆ, ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು’ 777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ.

  • ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ಮೈಸೂರು: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ (Dr C.N. Manjunath) ಅವರಿಗಾಗಿ ಮೈಸೂರಿನ (Mysuru) ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

     
    ಹೆಚ್‌ಆರ್‌ ರಂಗನಾಥ್‌ (HR Ranganath) ಮಾತನಾಡುವಾಗ ಹಲವು ಸಲಹೆ ಕೊಟ್ಟಿದ್ದಾರೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಇನ್ನು ಹೆಚ್ಚಿನ ಜವಾಬ್ದಾರಿ ನೀಡುತ್ತದೆ. ಜನರ ಆಶೋತ್ತರ, ಬಯಕೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಬಹುದೇನೋ? ಆದರೆ ಇನ್ನೂ ನಾನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಾ.ಮಂಜುನಾಥ್‌ ಹೇಳಿದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಶರೀರದ ತೂಕ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ ಮಾಡಬೇಕು. ಜೇಬಿನ ತೂಕ ಹೆಚ್ಚಾದರೆ ದಾನ ಮಾಡಬೇಕು. ಈಗ ಸನ್ಮಾನ ಮಾಡುವ ಮೂಲಕ ನನಗೆ ಇನ್ನೂ ಹೆಚ್ಚಿನ  ಜವಾಬ್ದಾರಿ ಸಿಕ್ಕಂತಾಗಿದೆ.  ತೂಕ ಜಾಸ್ತಿಯಾಗಿದೆ  ಎಂದರು.

     

    ಮೊದಲು ಮಾತನಾಡಿದ್ದ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿ ಇದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದ್ದರು.

  • ಪಬ್ಲಿಕ್ ಟಿವಿ ದ್ವಾದಶಿ ಸಂಭ್ರಮ

    ಪಬ್ಲಿಕ್ ಟಿವಿ ದ್ವಾದಶಿ ಸಂಭ್ರಮ

    – 2012ರ ಫೆಬ್ರವರಿ 12 ರಂದು ಹುಟ್ಟಿದ ಪಬ್ಲಿಕ್ ಟಿವಿಗೆ ಇಂದು 12 ವರ್ಷ

    ಬ್ಲಿಕ್ ಟಿವಿ.., ಕನ್ನಡ ಸುದ್ದಿ ಲೋಕದ ಸರ್ವಾಂತರ್ಯಾಮಿ..! ಪಬ್ಲಿಕ್ ಟಿವಿ.., ಕನ್ನಡಿಗರ ಮನೆ ಮನಗಳಲ್ಲಿ ಅಚ್ಚೊತ್ತಿದ ಹೆಸರು..! ಪಬ್ಲಿಕ್ ಟಿವಿ.., ಸೃಜನಶೀಲ, ಪ್ರಯೋಗಶೀಲ ಹಾಗೂ ಮೌಲ್ಯಪ್ರತಿಪಾದನೆಯ ಸುದ್ದಿಬಿಂಬ..! 2012ರ ಫೆಬ್ರವರಿ 12 ರಂದು ಲೋಕಾರ್ಪಣೆಗೊಂಡ ಅಲ್ಪಕಾಲದಲ್ಲೇ ಜನಪ್ರಿಯತೆ ಪಡೆದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಗೆ ಇಂದು 12 ವರ್ಷದ (Public TV 12th Anniversary) ಸಾರ್ಥಕ ಸಂಭ್ರಮ..! ವೀಕ್ಷಕ ಪ್ರಭುಗಳೇ.. ನೀವಿಲ್ಲದೆ ನಾವಿಲ್ಲ..! ನಮ್ಮನ್ನು ಹರಸಿ ಹಾರೈಸಿ ಬೆಳೆಸಿದ ನಿಮ್ಮೆಲ್ಲರಿಗೂ ಶರಣು ಶರಣಾರ್ಥಿ..! ಇದು ಪಬ್ಲಿಕ್ ಟಿವಿಯ ದ್ವಾದಶಿಯ ಸಂಭ್ರಮದ ಹಬ್ಬ.

    public tv 12th anniversary 1 3

    ದಿನದ 24 ಗಂಟೆಯೂ ಜಗತ್ತಿನ ಆಗುಹೋಗುಗಳನ್ನು ನಿಮ್ಮ ಮನೆಯಂಗಳಕ್ಕೆ ತಲುಪಿಸುವ ಧಾವಂತದಲ್ಲೇ ಇರುವ ಪಬ್ಲಿಕ್ ಟಿವಿ (Public TV) ಪರಿವಾರದಲ್ಲಿ ಇಂದು ಹಬ್ಬದ ಸಂಭ್ರಮ. ಸುದ್ದಿಲೋಕದ ಲೆಕ್ಕವಿಲ್ಲದಷ್ಟು ಜಂಜಾಟಗಳ ಮಧ್ಯೆ ಮತ್ತೊಂದು ವರುಷ ಕಳೆದದ್ದು ಗೊತ್ತಾಗಲೇ ಇಲ್ಲ. ಪಬ್ಲಿಕ್ ಟಿವಿಗೆ 12 ವರ್ಷ ತುಂಬಿದ್ದರೆ.., ಪಬ್ಲಿಕ್ ಮೂವೀಸ್‌ಗೂ ಇಂದು 6ರ ಸಡಗರ….

    ಜನರಿಗೆ ಸುತ್ತಮುತ್ತಲಿನ ಬೆಳವಣಿಗೆಗಳೇನು ಅಂತ ತಿಳಿಯೋ ತವಕ. ಆ ತುಡಿತಕ್ಕೆ ತೃಪ್ತಿಯಾಗುವಂತೆ ಪ್ರತಿಯೊಂದು ವಿದ್ಯಮಾನವನ್ನು ತಿಳಿಸುವುದರಲ್ಲಿ ಪಬ್ಲಿಕ್ ಟಿವಿ ಸದಾ ಮುಂದು. ಕೈಯಲ್ಲೊಂದು ಫೋನಿದ್ರೆ ಸಾಕು.., ಜಗದಗಲದ ಸಕಲ ಮಾಹಿತಿಯೂ ಬೆರಳಂಚಿನಲ್ಲೇ ನಲಿಯುತ್ತಿರುವ ಕಾಲವಿದು. ಅಂಥದ್ರಲ್ಲಿ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದ್ರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ.., ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.

    public tv 12th anniversary 1 1

    ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಪ್ರೇರಣೆ ಮತ್ತು ಶಕ್ತಿ. ಕ್ಯಾಪ್ಟನ್ ಹೆಚ್.ಆರ್.ರಂಗನಾಥ್ (H.R.Ranganath) ಅವರ ಸರಿ ಸಾಟಿಯಿಲ್ಲದ ಕಾರ್ಯತತ್ಪರತೆಯ ಫಲವೇ ಪಬ್ಲಿಕ್ ಟಿವಿಗೆ ಪ್ರಾಪ್ತಿಯಾಗಿರೋ ಜನಪ್ರಿಯತೆಗೆ ಸಾಕ್ಷಿ. ಆಳುವವರ ಕಿವಿ ಹಿಂಡುತ್ತಾ, ರಾಜಕಾರಣದ ಚರ್ಚೆಗಳಿಗೆ ಗಾಂಭೀರ್ಯತೆಯ ಮೆರುಗು ನೀಡುತ್ತಾ.., ಸಲಹೆಯ ಸೂತ್ರ, ಅಗತ್ಯವಿದ್ದಾಗ ಮಾತಿನ ಪೆಟ್ಟು, ಲಘುಹಾಸ್ಯದ ಲೇಪ ಕೊಟ್ಟು ನಿತ್ಯ ರಾತ್ರಿ ಒಂಭತ್ತರ ಪ್ರೈಮ್‌ ಟೈಮಿಗೆ ಸರಿಸಾಟಿಯಿಲ್ಲದ ವೀಕ್ಷಕ ವೃಂದವನ್ನು ಹೆಚ್.ಆರ್.ರಂಗನಾಥ್ ಅವ್ರು ಕಟ್ಟಿಕೊಂಡ ಪರಿಯೇ ಅಮೋಘ. ಅದಕ್ಕೆ ಇವತ್ತಿಗೂ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕನ್ನಡ ಸುದ್ದಿವಾಹಿನಿ ಇತಿಹಾಸದ ಮೈಲಿಗಲ್ಲು!

    ಪ್ರಚಲಿತ ವಿದ್ಯಮಾನಗಳ ಜೊತೆಗೆ ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲೂ ಪಬ್ಲಿಕ್ ಟಿವಿ ಸದಾ ಮುಂದೆ. ಬೆಳಕು, ಪಬ್ಲಿಕ್ ಹೀರೋ, ಎಸ್‌ಎಸ್‌ಎಲ್‌ಸಿಯ ಬಡ ಮಕ್ಕಳಿಗೆ ಉಚಿತ ಟ್ಯಾಬ್ ಕೊಡುವ ಜ್ಞಾನದೀವಿಗೆ ಅಭಿಯಾನ.., ಕೊರೊನಾ ಲಾಕ್‌ಡೌನ್ ಕಾಲದಲ್ಲಿ ನಡೆಸಿಕೊಟ್ಟ ಮನೆಯೇ ಮಂತ್ರಾಲಯ.., ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದೇವೆ… ಈ ಮೂಲಕ ಜನಮನ ಗೆದ್ದಿದ್ದೇವೆ.

    public tv 12th anniversary 1 2

    ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಪಬ್ಲಿಕ್ ಟಿವಿಯ ಕೋಟಿ ನಮನ. 12 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೇ ಮುಂದುವರಿಯಲಿ ಅನ್ನೋದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ…

  • ಕಾಲು ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ `ಪಬ್ಲಿಕ್ ಬೆಳಕು’ ಆಧಾರ!

    ಕಾಲು ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ `ಪಬ್ಲಿಕ್ ಬೆಳಕು’ ಆಧಾರ!

    ಕಲಬುರಗಿ: ನಿಮ್ಮ `ಪಬ್ಲಿಕ್ ಟಿವಿ’, `ಬೆಳಕು’ (Public TV Belaku) ಕಾರ್ಯಕ್ರಮದ ಮೂಲಕ ಸಮಾಜಮುಖಿ ಕೆಲಸಗಳನ್ನ ಮುಂದುವರಿಸಿದ್ದು, ನೊಂದ ಬಡ ಕುಟುಂಬಕ್ಕೆ ಆಧಾರವಾಗಿದೆ. ಕಲಬುರಗಿ (Kalaburagi) ಜಿಲ್ಲೆ ಆಳಂದ ತಾಲೂಕಿನ ದಣ್ಣೂರ ಗ್ರಾಮದ ಕುಟುಂಬದ ಕಥೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    BJP Leader

    ಹೌದು. ಆಳಂದ ತಾಲೂಕಿನ ದಣ್ಣೂರ ಗ್ರಾಮದ ಅಂಗವಿಕಲ ಕುಟುಂಬದ ಸಂಕಷ್ಟದ ಕುರಿತು ʻಪಬ್ಲಿಕ್ ಟಿವಿʼ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ಕುಟುಂಬ ತನ್ನ ಕಷ್ಟವನ್ನು ನಾಡಿನ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. `ಪಬ್ಲಿಕ್’ ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡ (BJP Leader), ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ್ ನೊಂದ ಕುಟುಂಬಕ್ಕೆ ನೇರವಾಗಿದ್ದಾರೆ. ಚಿಕ್ಕದಾಗಿ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು, ನೊಂದ ಕುಟುಂಬಕ್ಕೆ ಆಸರೆಯಾಗಿದ್ದಾರೆ.

    Belaku

    ಕುಟುಂಬದ ಕಥೆ-ವ್ಯಥೆ:
    ದಣ್ಣೂರ ಗ್ರಾಮದ ನಿವಾಸಿ ಪ್ರಭು ಬೈಕ್ ಅಪಘಾತದಲ್ಲಿ (Bike Accident) ಕಾಲು ಕಳೆದುಕೊಂಡು ಜೀವನ ನಡೆಸಲಾರದಷ್ಟು ಸಮಸ್ಯೆಗೀಡಾಗಿದ್ದರು. ತಮ್ಮ ಪತ್ನಿ ಹಾಗೂ ಮೂರು ಮಕ್ಕಳ ಪ್ರತಿದಿನ ಕಷ್ಟದ ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದರು. ಈ ಬಗ್ಗೆ ನಿಮ್ಮ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    Belaku 4

    ಹೆಚ್.ಆರ್ ರಂಗನಾಥ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಆಗ ಪ್ರಭು ಹಾಗು ಅವರ ಪತ್ನಿ ಮಲ್ಲಮ್ಮ ತಮ್ಮ ಕುಟುಂಬ ನಿರ್ವಹಣೆಗೆ ಗ್ರಾಮದಲ್ಲಿಯೇ ಒಂದು ಚಿಕ್ಕ ಕಿರಾಣಿ ಅಂಗಡಿ ಮಾಡಿಕೊಟ್ಟರೇ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತದೆ. ದಾನಿಗಳು ಯಾರಾದರೂ ಸಹಾಯ ಮಾಡಿದ್ರೆ ತುತ್ತು ಅನ್ನ ಸಿಗುತ್ತದೆ ಅಂತಲೂ ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರ ಮನವಿಗೆ ಆಳಂದ ತಾಲೂಕಿನ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ್ ಅವರು ಪ್ರಭು ಅವರ ಕುಟುಂಬಕ್ಕೆ ನೇರವಿನ ಹಸ್ತ ಚಾಚಿದ್ದಾರೆ. ಪ್ರಭು ಅವರ ಕುಟುಂಬದ ಬೇಡಿಕೆಯಂತೆ 30 ಸಾವಿರ ರೂ. ವೆಚ್ಚದಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು ಜೀವನಕ್ಕೆ ನೆರವಾಗಿದ್ದಾರೆ. ಇದರಿಂದ ಸಂತಸಗೊಂಡಿರುವ ಕುಟುಂಬ `ಪಬ್ಲಿಕ್ ಟಿವಿ’ಗೆ ಧನ್ಯವಾದ ಹೇಳಿದೆ.

  • ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

    ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

    ಬೆಂಗಳೂರು: ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಬಾಲಕರಾಮ ನೆಲೆಯಾಗಿದ್ದಾರೆ. ಈ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದತೂ ಪಕ್ಕಾ. ಈ ಕಣ್ಣುಗಳ ಕೆತ್ತನೆಯ ವೇಳೆ ತನಗಾದ ಅನುಭವವನ್ನು ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    AYODHYA 5

    ಅಯೋಧ್ಯೆಯಿಂದ ಬೆಂಗಳೂರಿಗೆ ವಾಪಸ್‌ ಆಗ್ತಿದ್ದಂತೆಯೇ ಹೆಚ್‌.ಆರ್‌ ರಂಗನಾಥ್‌ (HR Ranganath) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.

    ಈ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹೇಳಿಕೊಂಡೆ ಎಂದರು.

    ಪ್ರಭಾವಳಿಯ ತೀರ್ಮಾನ ಮಾಡಿದ್ದು ಯಾರು..?: ಪ್ರಭಾವಳಿಯ ತೀರ್ಮಾನವನ್ನು ನಾನೇ ಮಾಡಿದ್ದಾಗಿದೆ. ವಿಷ್ಣುವಿನ ಒಂದು ರೂಪ ಆಗಿರುವುದರಿಂದ ಪ್ರಭಾವಳಿಯಲ್ಲಿ ದಶಾವತಾರ ತಗೊಂಡೆ ಎಂದು ಹೇಳಿದರು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

    Ayodhya Ram Lalla 1

    ಮುಂದೆ ಏನು?: ಕೊಡುವ ಜವಾಬ್ದಾರಿಗಳನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕಲು ಎಂಬುದು ನನ್ನ ಮುಂದಿರುವ ಚಾಲೆಂಜ್‌ ಆಗಿದೆ. ಉನ್ನತ ಮಟ್ಟದಲ್ಲಿ ಹೇಗೆ ಕೆಲಸ ಮಾಡಿ ವಾಪಸ್ ಕೊಡಬಹುದು ಎಂಬುದಷ್ಟೇ ನನ್ನ ಯೋಚನೆಗಳಾಗಿವೆ ಎಂದು ತಿಳಿಸಿದರು.

    ಒಟ್ಟಿನಲ್ಲಿ ಪ್ರಪಂಚದ ಅತೀ ಅದೃಷ್ಟವಂತ ನಾನು ಅಂತಾ ಅರುಣ್‌ ಯೋಗಿರಾಜ್‌ ಹೇಳಿದರು. ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದರು.

    ಫೋಟೋಗಳಲ್ಲಿ ನೋಡುವುದಕ್ಕಿಂತಲೂ ರಾಮಲಲ್ಲಾರನ್ನು ಎದುರುಗಡೆ ನೋಡುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ನಾನೇ ಮಾಸ್ಕ್‌ ಹಾಕಿಕೊಂಡು ಹೋಗಿ ಎಲ್ಲರನ್ನೂ ಹೇಗಿದೆ ವಿಗ್ರಹ ಎಂದು ಕೇಳುತ್ತಿದ್ದೆ. ಎಲ್ಲರೂ ತುಂಬಾ ಚೆನ್ನಾಗಿದೆ ಅಂತ ಹೇಳಿದರು. ಅವತ್ತು ಹೋಗಿ ಒಳ್ಳೆ ನಿದ್ದೆ ಮಾಡಿದೆ ಎಂದರು.

  • ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

    ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

    ಬೆಂಗಳೂರು: ಅಯೋಧ್ಯೆಯಿಂದ ಬುಧವಾರವಷ್ಟೇ ವಾಪಸ್‌ ಆಗಿರುವ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ರಾಮಲಲ್ಲಾ ಮೂರ್ತಿ ಕೆತ್ತಲು ತಾನು ಹೇಗೆ ಆಯ್ಕೆಯಾದೆ ಎಂಬುದರ ಕುರಿತು ವಿವರಿಸಿದ್ದಾರೆ.

    ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್.‌ ಆರ್‌ ರಂಗನಾಥ್‌ (HR Ranganath) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅರುಣ್‌ ಅವರು, ತಾವು ಹೇಗೆ ಮೂರ್ತಿ ಕೆತ್ತನೆಗೆ ಆಯ್ಕೆಯಾಗಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಜನವರಿಯಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಯಿತು. ಇದರಲ್ಲಿ ನಮ್ಮ ಕರ್ನಾಟಕದ ಶಿಲ್ಪಿಗಳು ಇದ್ದರು. ಆದರೆ ನನಗೆ ಆಹ್ವಾನ ಬಂದಿರಲಿಲ್ಲ. ನಾನು ಈಗಾಗಲೇ ದೇಶಕ್ಕೆ 2 ಪ್ರಮುಖ ಪ್ರಾಜೆಕ್ಟ್‌ಗಳನ್ನು ಮಾಡಿದ್ದೇನೆ. ಕೇದಾರನಾಥದಲ್ಲಿ ಶಂಕರಾಚಾರ್ಯರದ್ದು, ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರದ್ದು ಮಾಡಿದ್ದೀನಿ. ಆದರೂ ಯಾಕೆ ನನ್ನ ಯಾರೂ ಕರೀತಾ ಇಲ್ವಲ್ಲ ಎಂದು ಪ್ರಶ್ನೆ ಮಾಡಿಕೊಂಡೆ ಎಂದು ತಿಳಿಸಿದರು.

    Ayodhya Ram Lalla 1

    ನನ್ನ ಗೆಳೆಯರು ಕೂಡ ಅಯೋಧ್ಯೆಗೆ (Ayodhya Ram Mandir) ನನ್ನ ಕರೆದಿದ್ದರು, ಸಭೆ ಮುಗಿಸಿಕೊಂಡು ಬಂದೆ ಎಂದು ಹೇಳುತ್ತಿದ್ದರು. ಆಗ ನಾನು ಬಿಡು ದೇವರು ಎರಡು ಕೊಟ್ಟಿದ್ದಾನೆ, ಇನ್ನೂ ಎಲ್ಲಾ ನನಗೆ ಬೇಕು ಅಂತಾ ಇರಬಾರದು. ಇದು ದುರಾಸೆ ಆಗುತ್ತೆ ಎಂದು ಸುಮ್ನೆ ಮನೆಯಲ್ಲಿ ಕುಳಿತಿದ್ದೆ ಎಂದರು. ಇದನ್ನೂ ಓದಿ: ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

    ಕಲಾವಿದರ ಮೂರ್ತಿಗಳು ಲಾಸ್ಟ್‌ಗೆ ಫೈನಲ್‌ ಆಗಬೇಕಿತ್ತು. ಆಗ ಅಲ್ಲಿ ಐಜಿಎನ್‌ಸಿಯಲ್ಲಿ ಸಚೀಂದರ್‌ ಜೋಶಿ ಎಂಬ ಚೇರ್‌ಮೆನ್‌ ಇದ್ದಾರೆ. ದೆಹಲಿಯಲ್ಲಿ ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಅವರ ಪರಿಚಯ ಇತ್ತು. ಅಲ್ಲದೆ ಬಂದು ನೋಡಿ ಏನು ಈ ಹುಡುಗ ಇಷ್ಟೊಂದು ಕಷ್ಟ ಪಡುತ್ತಿದ್ದಾನೆ ಅಲ್ವಾ ಎಂದು ಹೇಳುತ್ತಿದ್ದರು. ಹೀಗೆ ಅವರು ಸಭೆ ಮಾಡುತ್ತಿದ್ದಾಗ ಒಂದು ಒಂದು ದಿನ ಅರುಣ್‌ ಬಂದಿದ್ದಾರಾ ಎಂದು ಕೇಳಿದ್ದಾರೆ. ಆಗ ಅಲ್ಲಿದ್ದವರು ಇಲ್ಲ ಬಂದಿಲ್ಲ ಅಂತಾರೆ. ಬಳಿಕ ಅವರು ಮರುದಿನವೇ ನನ್ನನ್ನು ದೆಹಲಿಗೆ ಕರೆಸಿಕೊಳ್ಳುತ್ತಾರೆ ಎಂದು ಹೇಳಿದರು.

    arun yogiraj 1

    ನನ್ನ ಬೇಕುಂತಲೇ ಹೆಸರು ಬಿಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ ಅರುಣ್‌, ಹೇಳಿದರೆ ಇವನು ಮೂರು ಜನರಲ್ಲಿ ಆಯ್ಕೆ ಆಗಿ ಬಿಡಬಹುದು ಎಂದು ಹೇಳಿರಲ್ಲ ಅಂದ್ರು. ಆಮೇಲೆ ಏಪ್ರಿಲ್‌ನಲ್ಲಿ ನಾನು ಏನು ಕೆಲಸ ಮಾಡಿದ್ದೇನೆ ಅಂತಾ ಒಂದು ಪೆನ್‌ಡ್ರೈವ್‌ನಲ್ಲಿ ತೋರಿಸುತ್ತೇನೆ. ನೋಡಿ ಎಲ್ಲರಿಗೂ ಬಹಳ ಖುಷಿಯಾಗುತ್ತೆ. ಏಪ್ರಿಲ್‌ನಲ್ಲಿ ಮತ್ತೆ ನನಗೊಂದು ಪತ್ರ ಬರುತ್ತೆ. ಅದರಲ್ಲಿ ಕಲ್ಲು ಸೆಲೆಕ್ಟ್‌ ಮಾಡಲು ಅಯೋಧ್ಯೆಗೆ ಬನ್ನಿ ಎಂದು ತಿಳಿಸಲಾಗಿತ್ತು. ಹೀಗಾಗಿ ಹೋಗಿ ಕಲ್ಲು ಸೆಲೆಕ್ಟ್‌ ಮಾಡಿ ರಾಮಲಲ್ಲಾ ಮೂರ್ತಿ ನಿರ್ಮಾಣ ಮಾಡಿರುವುದಾಗಿ ಅರುಣ್‌ ಯೋಗಿರಾಜ್‌ ವಿವರಿಸಿದರು.