Tag: ಹಿಂದೂ ಸಮಾಜದ ಮುಖಂಡ

  • 1,100 ಎನ್‌ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ

    1,100 ಎನ್‌ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ

    ಶಿವಮೊಗ್ಗ: ಪೊಲೀಸರು ಈಗ ಮಾಡಿದ್ರೆ 2 ಎನ್‌ಕೌಂಟರ್, 5 ವರ್ಷದ ಬಳಿಕ ಮಾಡಿದ್ರೆ 1,100 ಎನ್‌ಕೌಂಟರ್ ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ ಎಂದು ಹಿಂದೂ ಸಮಾಜದ ಮುಖಂಡ ಯಾದವಕೃಷ್ಣ ಬಿಜೆಪಿ ಮುಖಂಡರ ಎದುರೇ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.

    YADAV KRISHNA 1 1

    ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರದ ಗೋಪಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯಾದವಕೃಷ್ಣ, ಇನ್ನೂ ನಾವು ಬಿಜೆಪಿ ನಾಯಕರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಅದನ್ನು ಅವರು ಉಳಿಸಿಕೊಳ್ಳಬೇಕು. ಪೊಲೀಸರು ಈಗ ಎನ್‌ಕೌಂಟರ್ ಮಾಡಿದ್ರೆ 2, 5 ವರ್ಷದ ಬಳಿಕ ಎನ್‌ಕೌಂಟರ್ ಮಾಡಿದರೆ 1,100 ಮಾಡಬೇಕಾಗುತ್ತದೆ. ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ. ಈಗಲೇ 2 ಮಾಡಿ ಮುಗಿಸಿಬಿಡಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

    PROTEST 4

    ಭಾರತದ ಮುಸ್ಲಿಮರು ಒಂದು ಕ್ಷಣ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಮುಸ್ಲಿಂ ಮುಖಂಡರು ತಮ್ಮ ಸಮಾಜದಲ್ಲಿರುವ ಕೆಟ್ಟವರಿಗೆ ಬುದ್ಧಿ ಹೇಳಿ ತಿದ್ದಬೇಕು. ಅವರು ಹೆಬ್ಬಾವನ್ನು ಸಾಕುತ್ತಿದ್ದಾರೆ. ಕೊನೆಗೊಂದು ದಿನ ಹೆಬ್ಬಾವೇ ಅವರನ್ನು ನುಂಗುತ್ತದೆ, ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಗೆಲ್ಲಿಸಿರೋದು ಕಾರಲ್ಲಿ ಓಡಾಡೋಕಲ್ಲ: ಹಿಂದೂ ಸಮಾಜ, ಬಿಜೆಪಿಯನ್ನು ಗೆಲ್ಲಿಸಿರುವುದು ಪಕ್ಷದ ನಾಯಕರನ್ನು ಕಾರಿನಲ್ಲಿ ಓಡಾಡಿಸಲು ಅಲ್ಲ. ಹಿಂದೂ ಯುವಕರ ಹತ್ಯೆಯಾಗುತ್ತಿದ್ದರೂ ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಬಿಜೆಪಿಯೇ ಗೆದ್ದಿದೆ. 6 ಬಾರಿ ಗೆದ್ದು ಶಾಸಕರಾದವರು ಅಲ್ಲಿದ್ದಾರೆ. ಹಿಂದೂ ಸಮಾಜ ಬಿಜೆಪಿ ನಾಯಕರನ್ನು ಗೆಲ್ಲಿಸಿರುವುದು ಇವರನ್ನು ಕಾರಿನಲ್ಲಿ ಓಡಾಡಿ ಟೈರ್ ಸವೆಸಲು ಅಲ್ಲ. ಹಿಂದೂ ಸಮಾಜವನ್ನು ರಕ್ಷಣೆ ಮಾಡಬೇಕಾದವರು ಅದನ್ನು ಮರೆಯುತ್ತಿದ್ದಾರೆ. ಇದು ಹೀಗೆ ಮುಂದುವರೆಯಬಾರದು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]