Tag: ನಿಮಿಷಾಂಭ ದೇವಾಲಯ

  • ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಪೊಲೀಸ್ ಬಂದೋಬಸ್ತ್!

    ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಪೊಲೀಸ್ ಬಂದೋಬಸ್ತ್!

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆಯಿಂದ ಒಂದು ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುತ್ತಿರುವುದರಿಂದ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಭಕ್ತರು ಕಾವೇರಿ ನದಿಗಿಳಿದು ಸ್ನಾನ ಮಾಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ನಿಮಿಷಾಂಭ ದೇವಾಲಯ ಕಾವೇರಿ ನದಿಯ ಪಕ್ಕದಲ್ಲೇ ಇದೆ. ಹೀಗಾಗಿ ದೇವಾಲಯಕ್ಕೆ ಬರುವವರು ಸಾಮಾನ್ಯವಾಗಿ ಕಾವೇರಿ ನದಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತಾರೆ. ಆದರೆ ಕೆಆರ್‍ಎಸ್ ಅಣೆಕಟ್ಟೆಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಕ್ಯೂಸೆಕ್ ನೀರು ಹರಿಯ ಬಿಡುತ್ತಿರುವುದರಿಂದ ನಿಮಿಷಾಂಭ ದೇವಾಲಯದ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

    ನದಿ ದಡದಲ್ಲಿದ್ದ ಅಂಗಡಿಗಳು, ಬಟ್ಟೆ ಬದಲಿಸುವ ಸ್ಥಳ ಜಲಾವೃತವಾಗಿದೆ. ಹೀಗಾಗಿ ನದಿಯ ಬಳಿ ಬ್ಯಾರಿಕೇಡ್ ಹಾಕಿ ಭಕ್ತಾದಿಗಳು ನೀರಿಗಿಳಿಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.

    mnd nimishambha temple

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆಗಿರೋ ನೋಟುಗಳು ಪತ್ತೆ

    ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆಗಿರೋ ನೋಟುಗಳು ಪತ್ತೆ

    ಮಂಡ್ಯ: 500 ಹಾಗೂ 1 ಸಾವಿರ ನೋಟುಗಳು ಅಮಾನ್ಯಗೊಂಡು ವರ್ಷಗಳೇ ಕಳೆದಿದೆ. ಆದರೆ ದೇವಾಲಯದ ಹುಂಡಿಗಳಲ್ಲಿ ಭಕ್ತರು ಇನ್ನೂ ಅಮಾನ್ಯಗೊಂಡ ನೋಟುಗಳನ್ನು ಕಾಣಿಕೆ ರೀತಿ ಹುಂಡಿಗೆ ಈಗಲೂ ಹಾಕುತ್ತಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಲ್ಲಿರುವ ಪ್ರಸಿದ್ಧ ನಿಮಿಷಾಂಭ ದೇವಾಲಯದ 18 ಕಾಣಿಕೆ ಹುಂಡಿ ಸುರಿದು ಏಣಿಕೆ ಮಾಡಲಾಯಿತು. ಹುಂಡಿಯಲ್ಲಿ ಒಟ್ಟು 32.5 ಲಕ್ಷ ರೂ. ಸಂಗ್ರಹವಾಗಿದ್ದು, ಅಮಾನ್ಯಗೊಂಡಿರುವ 1 ಸಾವಿರ ಮುಖ ಬೆಲೆಯ 2 ನೋಟು ಹಾಗೂ 500 ಮುಖ ಬೆಲೆಯ 6 ನೋಟುಗಳು ದೊರೆತಿವೆ. ಕಾಣಿಕೆ ಹುಂಡಿಯಲ್ಲಿ 90 ಗ್ರಾಂ ಚಿನ್ನ, 140 ಗ್ರಾಂ ಬೆಳ್ಳಿ ಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು.

    ಅಮಾನ್ಯಗೊಂಡ ನೋಟುಗಳನ್ನು ಎಸೆಯಲು ಮನಸ್ಸು ಬಾರದೆ ಹುಂಡಿಗೆ ಹಾಕುತ್ತಿರುವ ಭಕ್ತರ ನಡವಳಿಕೆ ಮಾತ್ರ ವಿಚಿತ್ರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.