– ಸುರಾನಾ ಕಾಲೇಜಿನಲ್ಲಿ `ಎಐ ಕಾಲದಲ್ಲಿ ಕನ್ನಡ’ ಕಾರ್ಯಾಗಾರ
ಬೆಂಗಳೂರು: ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನ ನಮ್ಮ ಭಾಷೆಯನ್ನೂ ಪ್ರಭಾವಿಸುತ್ತಿದೆ. ಈ ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕನ್ನಡಿಗರು ಸಜ್ಜಾಗಬೇಕಿದೆ ಎಂದು ವಿಜ್ಞಾನ ಲೇಖಕ ಟಿ.ಜಿ ಶ್ರೀನಿಧಿ ಹೇಳಿದರು.
Advertisement
ಸುರಾನಾ ಕಾಲೇಜಿನಲ್ಲಿ (Surana College) ನಡೆದ `ಎಐ ಕಾಲದಲ್ಲಿ ಕನ್ನಡ’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳಿಂದಾಗಿ ನಮ್ಮ ಭಾಷೆಗೆ ಹೊಸ ಅವಕಾಶಗಳು ದೊರಕುತ್ತಿವೆ. ಹಾಗೆಯೇ ಹೊಸ ಸವಾಲುಗಳೂ ಎದುರಾಗುತ್ತಿವೆ. ಆತಂಕಗಳು ಇರುವಂತೆಯೇ ಹೊಸ ಸಾಧ್ಯತೆಗಳೂ ಸೃಷ್ಟಿಯಾಗಿವೆ ಎಂದರು. ಇದನ್ನೂ ಓದಿ: ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ
Advertisement
Advertisement
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವತ್ಸಲಾ ಮೋಹನ್ ಮಾತನಾಡಿ, ತಂತ್ರಜ್ಞಾನದ ಅರಿವು ಆ ವಿಷಯದ ವಿದ್ಯಾರ್ಥಿಗಳಿಗಷ್ಟೇ ಇದ್ದರೆ ಸಾಲದು. ಎಲ್ಲಾ ವಿಷಯಗಳ, ಎಲ್ಲಾ ಭಾಷೆಗಳ ವಿದ್ಯಾರ್ಥಿಗಳೂ ತಂತ್ರಜ್ಞಾನದ ಬೆಳವಣಿಗೆಗಳ ಜೊತೆಯಲ್ಲಿ ಹೆಜ್ಜೆ ಹಾಕಬೇಕಿರುವುದು ಇಂದಿನ ಅಗತ್ಯ. ಈ ಕಾರ್ಯಾಗಾರವನ್ನು ಅದೇ ಆಲೋಚನೆಯೊಂದಿಗೆ ಆಯೋಜಿಸಲಾಗಿದೆ. ಇಂತಹ ಕಾರ್ಯಾಗಾರಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ
Advertisement
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಎಐ ತಂತ್ರಜ್ಞಾನದ ಪರಿಚಯ, ನಮ್ಮ ಬದುಕಿನ ಮೇಲೆ ಅದರ ಪ್ರಭಾವ, ಸಂವಹನದಲ್ಲಿ ಎಐ ಬಳಕೆಯ ಸಾಧ್ಯತೆಗಳು ಹಾಗೂ ನಾವು ಬಳಸಬಹುದಾದ ಎಐ ಸಾಧನಗಳ ಕುರಿತು ಈ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆಗಳು ನಡೆಯಿತು. ಇದನ್ನೂ ಓದಿ: ಬೆಳಗಾವಿ | ಸಿಮ್ ಕಾರ್ಡ್ಗಾಗಿ ವ್ಯಕ್ತಿಗೆ ಚಾಕು ಇರಿತ
ಹಿರಿಯ ಲೇಖಕ ಕೊಳ್ಳೇಗಾಲ ಶರ್ಮಾ, ಅಭಿಷೇಕ್ ಜಿ.ಎಸ್, ಪ್ರಸನ್ನ ರಾಮಚಂದ್ರ, ಕಾಲೇಜು ಪ್ರಾಂಶುಪಾಲರಾದ ಡಾ.ವೀಣಾ.ಕೆ.ಎನ್, ಡಾ.ಸುಷ್ಮಾ, ಇಜ್ಞಾನ ಟ್ರಸ್ಟ್ನ ಚೇತನ್ ಗುಪ್ತ, ಟಿ.ಎಸ್.ಗೋಪಾಲ್, ಬಿ.ಎಸ್.ವಿಶ್ವನಾಥ ಉಪಸ್ಥಿತರಿದ್ದರು.