Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chamarajanagar

ಮಹದೇವ ಸ್ವಾಮಿಯೇ ಸುಳ್ವಾಡಿಯ ವಿಷ ಸರ್ಪ -ಸ್ವಾಮಿಯ ಸಂಚನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ

Public TV
Last updated: December 19, 2018 8:02 pm
Public TV
Share
4 Min Read
Maramma FF
SHARE

ಚಾಮರಾಜನಗರ: ಕಿಚ್‍ಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇಮ್ಮಡಿ ಮಹದೇವ ಸ್ವಾಮೀಜಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ಶರತ್ ಚಂದ್ರ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆರೋಪಿಗಳು:
1. ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52) @ ದೇವಣ್ಣಬುದ್ದಿ ವೀರಬಸಪ್ಪ
2. ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಗ್ರಾಮದ (ಸ್ವಂತ ಸ್ಥಳ ಶ್ಯಾಗ) ಅಂಬಿಕಾ ಮಾದೇಶ ಮದೇವಸ್ವಾಮಿ (35)
3. ಸುಳ್ವಾಡಿ ಕಿಚ್ಚುಗುತ್ತ್ ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಮಹದೇವಸ್ವಾಮಿ (46) @ ಶ್ಯಾಗ ಮಾದೇಶ
4. ಈ ಹಿಂದೆ ನಾಗರಕಲ್ಲಿನ ಅರ್ಚಕನಾಗಿದ್ದ ಸುಳ್ವಾಡಿ ಗ್ರಾಮ ದೊಡ್ಡಯ್ಯತಂಬಡಿ (35) @ ದೊಡ್ಡಯ್ಯ ಬಿನ್ ಕಾಳತಂಬಡಿ

ಘಟನೆ ವಿವರ:
ಮಾರಮ್ಮ ದೇವಾಲಯಕ್ಕೆ ಅಧಿಕ ಹಣ ಬರುತ್ತಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಟ್ರಸ್ಟ್ ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸ್ತಾರೆ. ಇಮ್ಮಡಿ ಮಹದೇವ ಸ್ವಾಮೀಜಿ ತಮಗೆ ಇಷ್ಟವಿಲ್ಲದಿದ್ದರೂ ಸದಸ್ಯರ ಒತ್ತಾಯದ ಮೇರೆಗೆ ಟ್ರಸ್ಟ್ ಅಂತಾ ನೋಂದಾಯಿಸಿಕೊಳ್ತಾರೆ. ಟ್ರಸ್ಟ್ ರಚನೆಯಾದ ಮೇಲೆ ಸ್ವಾಮೀಜಿ ಹಣಕಾಸಿನ ಸರಬರಾಜು ನಿಂತು ಹೋಗುತ್ತದೆ. ಒಂದು ಚೆಕ್ ಪಾಸ್ ಆಗಬೇಕಾದ್ರೆ ಮೂರು ಜನರ ಸಹಿ ಆಗಬೇಕು. ಹೀಗಾಗಿ ಇತರೆ ಸದಸ್ಯರ ಮೇಲೆ ಸ್ವಾಮೀಜಿ ಅಸಮಾಧಾನ ಹೊಂದಿರುತ್ತಾನೆ.

CNG 1

ಟ್ರಸ್ಟ್ ರಚನೆಯಾದ ಮೇಲೆ ಸದಸ್ಯರೆಲ್ಲರೂ ನಮ್ಮಲ್ಲಿ ಸಾಕಷ್ಟು ಹಣವಿದೆ. ದೇವಸ್ಥಾನಕ್ಕೆ ಗೋಪುರ ನಿರ್ಮಿಸೋಣ ಎಂಬ ವಾದವನ್ನು ಸ್ವಾಮೀಜಿ ಮುಂದೆ ಮಂಡಿಸ್ತಾರೆ. ಮಹದೇವ ಸ್ವಾಮೀಜಿ ತಮಿಳುನಾಡಿಗೆ ತೆರಳಿ ಒಂದೂವರೆ ಕೋಟಿಗೆ ಪ್ಲಾನ್ ಮಾಡಿಸಿಕೊಂಡು ಬರುತ್ತಾರೆ. ದೊಡ್ಡ ಪ್ರಾಜೆಕ್ಟ್ ಬೇಡ, 75 ಲಕ್ಷ ರೂ. ವೆಚ್ಚದಲ್ಲಿ ಸರಳವಾದ ಗೋಪುರ ನಿರ್ಮಿಸೋಣ ಎಂದು ಟ್ರಸ್ಟ್ ಸದಸ್ಯರು ಸಲಹೆ ನೀಡುತ್ತಾರೆ. ಪ್ಲಾನ್ ವಿರೋಧ ವ್ಯಕ್ತವಾಗುತ್ತಲೇ ಸ್ವಾಮೀಜಿ ಕೋಪಗೊಳ್ಳುತ್ತಾರೆ.

ಸ್ವಾಮೀಜಿಯ ವಿರೋಧದ ನಡುವೆಯೇ ಟ್ರಸ್ಟ್ ನ ಕೆಲ ಸದಸ್ಯರು ಸೇರಿ ಡಿಸೆಂಬರ್ 14ರಂದು ಗೋಪುರದ ಶಂಕುಸ್ಥಾಪನೆ ಪೂಜೆ ನಡೆಸಲು ನಿರ್ಧರಿಸುತ್ತಾರೆ. ಈ ಸಂಬಂಧ ಸಾಲೂರು ಮಠದ ಹಿರಿಯ ಸ್ವಾಮೀಜಿಗಳು (ಗುರು ಸ್ವಾಮಿ) ಸೇರಿದಂತೆ ಹಲವು ಗಣ್ಯರಿಗೆ ಅಹ್ವಾನಿಸಲಾಗಿರುತ್ತದೆ. ಈ ವೇಳೆ ಮಹದೇವ ಸ್ವಾಮೀಜಿ ಮೇಲ್ನೋಟಕ್ಕೆ ಬರುತ್ತೇನೆ ಅಂತಾ ಒಪ್ಪಿಗೆ ಸೂಚಿಸಿರುತ್ತಾನೆ. ಗುದ್ದಲಿ ಪೂಜೆಯ ದಿನ ಮಹದೇವ ಸ್ವಾಮೀಜಿ ಗೈರಾಗುವ ಮೂಲಕ ಅಸಮಾಧಾನವನ್ನು ಹೊರಹಾಕುತ್ತಾನೆ.

CNG 2

ತಮ್ಮ ಸಲಹೆ ಪಡೆಯದೇ ಗೋಪುರ ನಿರ್ಮಾಣಕ್ಕೆ ಮುಂದಾದ ಟ್ರಸ್ಟ್ ಸದಸ್ಯರಿಗೆ ಪಾಠ ಕಲಿಸಲು ಮಹದೇವ ಸ್ವಾಮೀಜಿ ಸಂಚು ರೂಪಿಸುತ್ತಾನೆ. ಇದರ ಪರಿಣಾಮವಾಗಿ ಇಮ್ಮಡಿ ಮಹದೇವ ಸ್ವಾಮಿಯು ನೇಮಕ ಮಾಡಿದ್ದ ದೇವಸ್ಥಾನದ ವ್ಯವಸ್ಥಾಪಕನಾದ ಮಾದೇಶ ಮತ್ತು ಆತನ ಪತ್ನಿ ಅಂಬಿಕಳನ್ನು ಭೇಟಿಯಾಗ್ತಾನೆ. ಅಂಬಿಕ ತನ್ನ ಸಂಬಂಧಿಯಾದ ಕೃಷಿ ಅಧಿಕಾರಿಯಿಂದ ಸುಳ್ಳು ಹೇಳಿ ಎರಡು ಕ್ರಿಮಿನಾಶಕ ಬಾಟಲುಗಳನ್ನು ಪಡೆದುಕೊಳ್ಳುತ್ತಾಳೆ. ಡಿಸೆಂಬರ್ 14ರಂದು ಅಂಬಿಕ ಒಂದು ಬಾಟೆಲ್ ಚಿನ್ನಪ್ಪಿಯನ್ನು ದ್ವೇಷಿಸುತ್ತಿದ್ದ ದೊಡ್ಡಯ್ಯನಿಗೆ ಕೊಡುತ್ತಾಳೆ. ದೊಡ್ಡಯ್ಯ ಮತ್ತು ಮಾದೇಶ ಇಬ್ಬರು ಸೇರಿ ಸಮಯ ಸಾಧಿಸಿ ಪ್ರಸಾದದಲ್ಲಿ ವಿಷ ಬೆರೆಸಿರುತ್ತಾರೆ. ಈ ವಿಷಯ ಅರಿಯದ ದೇವಸ್ಥಾನದ ಅಡುಗೆಯವರು ಪೂಜೆ ಕಾರ್ಯಕ್ರಮದ ನಂತರ ಪ್ರಸಾದವನ್ನು ಭಕ್ತರಿಗೆ ವಿತರಿಸಿದ್ದರಿಂದ ಈ ಅವಘಡ ನಡೆದಿದೆ.

ಟ್ರಸ್ಟ್ ಸದಸ್ಯರಿಗೆ ಬೇರೆ ಊಟ:
ಡಿಸೆಂಬರ್ 14ರಂದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಟ್ರಸ್ಟ್ ಸದಸ್ಯರಿಗಾಗಿ ಇಡ್ಲಿ, ಪೊಂಗಲ್ ಸೇರಿದಂತೆ ಬೇರೆ ಊಟವನ್ನು ತರಿಸಲಾಗಿರುತ್ತದೆ. ಹಾಗಾಗಿ ಯಾರು ರೈಸ್ ಬಾತ್ ಸೇವನೆ ಮಾಡಿರುವುದಿಲ್ಲ. ಚಿನ್ನಪ್ಪಿ ಗುದ್ದಲಿ ಪೂಜೆಗೆ ಬರುವ ಭಕ್ತಾದಿಗಳಿಗಾಗಿ ರೈಸ್ ಮಾಡಲು ಟ್ರಸ್ಟ್ ಮೆಂಬರ್ ಚಿನ್ನಪ್ಪಿ ಅಡುಗೆ ಭಟ್ಟನಿಗೆ ಹೇಳಿರುತ್ತಾನೆ. ಈರಣ್ಣ, ಲೋಕೇಶ್ ಮತ್ತು ಪುಟ್ಟಸ್ವಾಮಿ ಮೂವರು ಸೇರಿ ಗುದ್ದಲಿ ಪೂಜೆಯಂದು ಅಡುಗೆ ಮಾಡಿರುತ್ತಾರೆ.

CNG 3

ಈ ಘಟನೆಯಿಂದಾಗಿ ಈವೆರೆಗೆ ಒಬ್ಬ ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 15 ಜನರು ಅಸುನೀಗಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸಿರುತ್ತಿದೆ.

CNG 4

ತನಿಖೆಯ ವಿವರ:
ವಿಷ ಪ್ರಸಾದ ಸೇವನೆ ಬಳಿಕ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಅಪರ ಪೊಲೀಸ್ ಅಧೀಕ್ಷಕರರಾದ ಶ್ರೀಮತಿ ಗೀತಪ್ರಸನ್ನ ಹಾಗೂ ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟಮಾದಯ್ಯ, ಜಿಲ್ಲಾಡಳಿತದ ಸಹಕಾರದೊಂದಿಗೆ ಮುತುವರ್ಜಿ ವಹಿಸಿ ಯಾವುದೇ ಕಾನೂನು ವ್ಯವಸ್ಥೆಗೆ ಭಂಗವಾಗುವಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತಾರೆ. ರೈಸ್ ಬಾತ್‍ನಲ್ಲಿ ವಿಷವನ್ನು ಬೆರೆಸಿದ್ದ ಆಸಾಮಿಗಳನ್ನು ಪತ್ತೆ ಮಾಡುವ ಸಲುವಾಗಿ ಕೊಳ್ಳೇಗಾಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಮಾದಯ್ಯ ರವರ ನೇತೃತ್ವದ 5 ವಿವಿಧ ತಂಡಗಳನ್ನು ರಚಿಸಿದರು. ತನಿಖೆ ಕೈಗೊಂಡಿದ್ದ 05 ತಂಡಗಳು ಕೌಶಲ್ಯದಿಂದ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಲಭ್ಯವಿದ್ದ ಮಾಹಿತಿಯನ್ನು ವಿಶ್ಲೇಶಿಸಿ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರ ತಂಡದ ನೆರವನ್ನು ಬಳಸಿಕೊಂಡು ಈ ಘೋರ ನರಹತ್ಯೆ ನಡೆಸಿರುವ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ಡಿಸೆಂಬರ್ 19 ರಂದು ಬಂಧಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:chamarajanagarmaramma templePublic TVVisha Prasadಚಾಮರಾಜನಗರಪಬ್ಲಿಕ್ ಟಿವಿಮಾರಮ್ಮ ದೇವಸ್ಥಾನಸುಳ್ವಾಡಿ ವಿಷ ಪ್ರಸಾದ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

kiccha sudeep birthday Bigg Boss promo released
ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌
Cinema Latest Main Post TV Shows
Pushpa Arunkumar Deepika Das
ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್
Cinema Latest Sandalwood
Actresses request for posthumous Karnataka Ratna award for late Dr. Vishnuvardhan Sarojadevi
ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ
Bengaluru City Cinema Karnataka Latest Sandalwood Top Stories
darshan ballari jail 1
ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ
Cinema Court Latest Main Post
Bharathi vishnuvardhan
ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್
Cinema Karnataka Latest National Sandalwood Top Stories

You Might Also Like

big bulletin 31 August 2025 part 1
Big Bulletin

ಬಿಗ್‌ ಬುಲೆಟಿನ್‌ 31 August 2025 ಭಾಗ-1

Public TV
By Public TV
11 minutes ago
big bulletin 02 september 2025 part 1
Big Bulletin

ಬಿಗ್‌ ಬುಲೆಟಿನ್‌ 02 September 2025 ಭಾಗ-1

Public TV
By Public TV
23 minutes ago
big bulletin 02 september 2025 part 2
Big Bulletin

ಬಿಗ್‌ ಬುಲೆಟಿನ್‌ 02 September 2025 ಭಾಗ-2

Public TV
By Public TV
27 minutes ago
big bulletin 02 september 2025 part 3
Big Bulletin

ಬಿಗ್‌ ಬುಲೆಟಿನ್‌ 02 September 2025 ಭಾಗ-3

Public TV
By Public TV
29 minutes ago
End of BBMP era 500 members to be elected to Greater Bengaluru Authority
Bengaluru City

ಇತಿಹಾಸದ ಪುಟ ಸೇರಿದ ಬಿಬಿಎಂಪಿ – ಜಿಬಿಎಗೆ ಆಯ್ಕೆಯಾಗಲಿದ್ದಾರೆ 500 ಸದಸ್ಯರು

Public TV
By Public TV
42 minutes ago
KC Veerendra Pappi ED Raid
Chitradurga

‘ಕೈ’ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ ದಾಳಿ – ಆರು ಐಷಾರಾಮಿ ಕಾರುಗಳು ವಶಕ್ಕೆ

Public TV
By Public TV
44 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?