ಬೆಳಗಾವಿ: ನೀಚ ಸ್ವಾಮಿಯಯೊಬ್ಬ ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿ ನಡೆದಿದೆ.
ನೀಚ ಸ್ವಾಮೀಜಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಾನೆ. ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿದ್ದಾನೆ. ಬ್ರಹ್ಮ ಬರೆದ ಹಣೆ ಬರಹವನ್ನು ಮೊಬೈಲ್ ಟಾರ್ಚ್ ಬಳಸಿ ಓದಿ ಯಾಮಾರಿಸ್ತಾನೆ. ನಿಮ್ಮ ಮನೆಯಲ್ಲಿ ವಾಮಾಚಾರ ನಡೆದಿದೆ. ವಾಮಾಚಾರ ಬಿಡಿಸುತ್ತೇನೆ ಎಂದು ಭವಿಷ್ಯ ಹೇಳ್ತಿನಿ ಎಂದು ಜನರ ಬಳಿ ಹಣ ಪೀಕುತ್ತಾನೆ. ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಮೋಸಗಾರ, ಖತರ್ನಾಕ್ ಸ್ವಾಮಿಯ ಕೃತ್ಯ ಬಯಲಾಗಿದೆ.
ಈ ಡೇಂಜರಸ್ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿದ್ದಾನೆ. ಕತ್ತಲಾಗುತ್ತಿದ್ದಂತೆ ಕಾವಿ ತೊಡುತ್ತಾನೆ. ಬೆಳಗಿನ ಜಾವ ವಾಟರ್ ಮ್ಯಾನ್ ಕೆಲಸ ಮಾಡುತ್ತಾನೆ. ಎರಡು ಕೆಲಸದಲ್ಲೂ ಅಮಾಯಕರನ್ನ ಮೋಸ ಮಾಡಿ ಕಳುಹಿಸುತ್ತಾನೆ. ಹುಕ್ಕೇರಿಯ ಪುರಸಭೆಯ ವಾಟರ್ ಮ್ಯಾನ್ ಈರಪ್ಪ ಭೀಮನ್ನವರನಿಂದ ವಂಚನೆ ಮಾಡುತ್ತಾನೆ. ಸಮಸ್ಯೆ ಹೇಳಿಕೊಂಡು ಬರುವ ಅಮಾಯಕ ಮಹಿಳೆಯರ ಬಾಳಿನ ಜೊತೆ ಚೆಲ್ಲಾಟವಾಡುತ್ತಾನೆ.
ಮಕ್ಕಳಾಗದವರು, ಗಂಡ ಸತ್ತಿರುವ ಮಹಿಳೆಯರೇ ಇವನ ಟಾರ್ಗೆಟ್ಯಾಗಿದ್ದು, ನಾನು ತೋರಿಸಿದ ವ್ಯಕ್ತಿಯ ಜೊತೆಗೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳುತ್ತಾನೆ. ಸಮಸ್ಯೆ ಬಗೆಹರಿಸುತ್ತೀನಿ ಎಂದು ಪಿಂಪ್ ಕೆಲಸ ಮಾಡುತ್ತಿದ್ದಾನೆ. ಪಿಂಪ್ ಕೆಲಸದ ಜೊತೆ ದೆವ್ವ ಬಿಡಿಸುತ್ತೀನಿ ಎಂದು ಈ ನೀಚ ಸ್ವಾಮೀಜಿ ವಾಮಾಚಾರದ ಕೆಲಸ ಮಾಡುತ್ತಾನೆ. ಈರಪ್ಪ ಕೃತ್ಯಕ್ಕೆ ಮ್ಮನ್ನೋಳಿ ಗ್ರಾಮ ಪಂಚಾಯತ್ ಸದಸ್ಯೆ ಕೂಡ ಸಾಥ್ ನೀಡಿದ್ದು, ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಖತರ್ನಾಕ್ ಸ್ವಾಮಿಯ ದೊಡ್ಡ ಜಾಲ ಬಟಾ ಬಯಲಾಗಿದೆ.
ಈ ಸ್ವಾಮೀಜಿ ಬಳಿ ಯಾರೇ ಬರಲಿ ಅವರ ಕೈಯಲ್ಲಿ 2 ನಿಂಬೆ ಹಣ್ಣು ನೀಡಿ ಚಡಿಯಿಂದ ಹೊಡೆಯುತ್ತಾನೆ. ನೀನು ಇವನ ಬಿಟ್ಟು ಹೋಗುವುದಿಲ್ಲ ಎಂದರೆ ತಲೆಯ ಮೇಲೆ ಕರ್ಪೂರ ಸುಡುತ್ತೇನೆ ಎಂದು ಹೆದರಿಸಿ ಜನರನ್ನು ವಂಚಿಸುತ್ತಿದ್ದಾನೆ.
ಈ ವಂಚನೆ ಕಾರ್ಯವನ್ನು ಇವನು ಅಷ್ಟೇ ಮಾಡದೆ ಈತನ ಪತ್ನಿ ಹುಕ್ಕೇರಿ ತಾಲೂಕಿನ ಎಲಿ ಮುನ್ನೋಳಿ ಗ್ರಾಮ ಪಂಚಾಯತಿ ಸದಸ್ಯೆ ಕೂಡ ಈ ಮಾಟ ಮಂತ್ರದಲ್ಲಿ ತೊಡಗಿಕೊಂಡಿದ್ದಾಳೆ. ಇನ್ನೂ ಈರಪ್ಪ್ ಸ್ವಾಮಿಯ ಒಂದು ಬಹು ದೊಡ್ಡ ಜಾಲವನ್ನು ಮಾಡಿಕೊಂಡಿದ್ದು, ನಿಧಿ ತೆಗೆಯುತ್ತೇನೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾನೆ. ಇವನ ಮನೆಯಲ್ಲಿ ಎಲ್ಲಿ ನೋಡಿದರು ನಿಂಬೆ ಹಣ್ಣು, ಗೊಂಬೆಗಳು, ಬೆಕ್ಕು ಮರಿ ಸೇರಿದಂತೆ ಮಾಟ ಮಂತ್ರ ಮಾಡುವ ಸಾಮಗ್ರಿಗಳು ಕಂಡು ಬರುತ್ತವೆ.