ರಾಯಚೂರು: ಸಾಮೂಹಿಕ ವಿವಾಹದಲ್ಲಿ ಸ್ವಚ್ಛ ಭಾರತ ಅಭಿಯಾನ

Public TV
1 Min Read
RCR MADUVE F

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನವಲಕಲ್ ನಲ್ಲಿ ಹಮ್ಮಿಕೊಂಡಿರುವ 171 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ರಾಯಚೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕುರ್ಮಾರಾವ್ ಸ್ವಚ್ಛ ಭಾರತ್ ಅಭಿಯಾನ ನಡೆಸಿದರು.

RCR MADUVE 5

ಅಧಿಕಾರಿಗಳು ನವ ದಂಪತಿಗಳಿಗೆ ಮನವಿ ಪತ್ರ ನೀಡಿ ಶುಭ ಹಾರೈಸುವ ಜೊತೆಗೆ ಕುಟುಂಬದ ಆರೋಗ್ಯ, ಗೌರವ ಹಾಗೂ ಸ್ವಚ್ಛತೆಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ ಮಾಡಿದರು.

RCR MADUVE 7

ವಿಧಾನ ಪರಿಷತ್ ಸದಸ್ಯ ಎನ್. ಎಸ್.ಬೋಸರಾಜು ತಮ್ಮ 70ನೇ ವರ್ಷದ ಹುಟ್ಟು ಹಬ್ಬ ನಿಮಿತ್ತ ನವಲಕಲ್ ಬೃಹನ್ಮಠದಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದರು. ನವ ಜೋಡಿಗಳು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳೇ ನವ ದಂಪತಿಗಳಿಗೆ ಮನವಿ ಪತ್ರ ಹಂಚಿದ್ದಾರೆ. ಬಯಲು ಶೌಚ ಮುಕ್ತ ಗ್ರಾಮ ನಮ್ಮ ಧ್ಯೇಯವಾಗಿರಲಿ ಅಂತ ವಿವಾಹ ಕಾರ್ಯಕ್ರಮದಲ್ಲಿ ಅಭಿಯಾನ ನಡೆಸಲಾಯಿತು.

RCR MADUVE 4

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ರಾಯಚೂರು ಸಂಸದ ಬಿ.ವಿ.ನಾಯಕ್, ಶಾಸಕರಾದ ಎನ್.ಎಸ್.ಬೋಸರಾಜು, ಹಂಪಯ್ಯನಾಯಕ್, ಡಾ.ಶಿವರಾಜ್ ಪಾಟೀಲ್ ಸೇರಿ ಇತರರು ಭಾಗವಹಿಸಿದ್ದರು.

RCR MADUVE 1

RCR MADUVE 6

RCR MADUVE 3

 

Share This Article
Leave a Comment

Leave a Reply

Your email address will not be published. Required fields are marked *