ಬೆಳಗಾವಿ: ಇಷ್ಟು ದಿನ ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಜಿಲ್ಲೆಯ ಸುವರ್ಣ ಸೌಧದ ಬಣ್ಣ ಬದಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುವರ್ಣ ಸೌಧ ಹಸಿರು ಸೌಧವಾಗಿ ಮಾರ್ಪಟ್ಟಿದೆ.
ಇಡೀ ಕಟ್ಟಡ ಸಂಪೂರ್ಣವಾಗಿ ಹಸಿರು ಬಣಕ್ಕೆ ತಿರುಗಿದೆ. ಇಷ್ಟಾದರು ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವರ್ಷಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಸೌಧದ ನಿರ್ವಹಣೆ ನಡೆಯುತ್ತದೆ. ಆದರೆ ಶ್ವೇತ ಬಣ್ಣದ ಸೌಧದ ಹಸಿರು ಬಣ್ಣಕ್ಕೆ ತಿರುಗಿದರು ಯಾರೊಬ್ಬರೂ ಇತ್ತ ಸುಳಿದಿಲ್ಲ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.
ಸುವರ್ಣ ಸೌಧದ ಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಕಟ್ಟಡ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಹೀಗಾಗಿದೆ. ಮಳೆ ನಿಂತ ಮೇಲೆ ಕ್ಲೀನ್ ಮಾಡಿಡುತ್ತೀವಿ ಅಂತಾರೆ ಎಂದು ಸುವರ್ಣ ಸೌಧ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜಿ. ಧರಣಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಸುವರ್ಣ ಸೌಧ ಹಸಿರು ಬಣ್ಣಕ್ಕೆ ತಿರುಗಿದ್ದು, ಒಳಗೆ ಎಲ್ಲೆಲ್ಲಿ ಎನಾಗಿದಿಯೋ ಅದನ್ನು ಅಧಿಕಾರಿಗಳೇ ನೋಡಿ ಹೇಳಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv