ಮುಂಬೈ: ಇಂದು ಸಂಜೆ ವೇಳೆಗೆ ಅರ್ಜಿ ಸಲ್ಲಿಸಿರುವ ಶಾಸಕರನ್ನು ವಿಚಾರಣೆ ನಡೆಸಿ ರಾಜೀನಾಮೆ ತೀರ್ಮಾನ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರೆಬೆಲ್ ಶಾಸಕರು ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿದ್ದಾರೆ.
ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ರೆಬೆಲ್ ಶಾಸಕರು ಇಂದು ಸಂಜೆ ವೇಳೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮುಖ್ಯಮಂತ್ರಿಗಳು ಕರೆದಿರುವ ಸಚಿವ ಸಂಪುಟ ಸಭೆಯತ್ತ ಎಲ್ಲ ಅತೃಪ್ತರ ಚಿತ್ತ ಹರಿದಿದ್ದು, ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನ ಮೇಲೆ ಎಲ್ಲ ಶಾಸಕರ ಗಮನ ಕೇಂದ್ರಿಕೃತವಾಗಿದೆ. ಬುಧವಾರ ನಡೆದ ರಾಜಕೀಯ ಹೈಡ್ರಾಮಾ ಹಿನ್ನೆಲೆ ಕಾದು ನೋಡುವ ತಂತ್ರವನ್ನು ಅತೃಪ್ತ ಶಾಸಕರು ಅನುಸರಿಸುತ್ತಿದ್ದಾರೆ.
ಬೆಳಗ್ಗೆ ಎಲ್ಲ ಶಾಸಕರು ಒಂದೆ ಕಡೆ ಸೇರಿ ಮುಂದಿನ ನಿರ್ಧಾರ ಬಗ್ಗೆ ಚರ್ಚೆಸಿದ್ದು, ಅತ್ತ ಮಹಾರಾಷ್ಟ್ರ ಬಿಜೆಪಿ ಮುಖಂಡರು ಹೋಟೆಲ್ನಲ್ಲಿಯೇ ಇದ್ದಾರೆ. ಹೋಟೆಲ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.