ಮೈಸೂರು: ಅಂಬರೀಶ್ ಅವರು ನಾಮಪತ್ರ ಸಲ್ಲಿಸುತ್ತಿದ್ದ ವೇಳೆ ಅವರ ಜೊತೆ ನಾನಿರುತ್ತಿದ್ದೆ. ಆದ್ರೆ ಇಂದು ನಾನು ನಾಮಪತ್ರ ಸಲ್ಲಿಸುವಾಗ ಅವರು ನನ್ನ ಜೊತೆ ಇದ್ದಾರೆ ಎಂದು ಸುಮಲತಾ ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಅಂಜಿಕೆ ಇಲ್ಲ. ಅಂದು ಅಂಬಿ ನಾಮಪತ್ರ ಸಲ್ಲಿಸುವ ವೇಳೆ ನಾನು ಜೊತೆಯಲ್ಲಿ ಇರುತ್ತಿದ್ದೆ. ಇಂದು ಅವರು ನನ್ನ ಜೊತೆ ಇದ್ದಾರೆ. ಅಂಬಿ ಅಭಿಮಾನಿಗಳಿಗಾಗಿ ಇಂತಹ ಹಜ್ಜೆ ಇಟ್ಟಿದ್ದೇನೆ. ಇದರಲ್ಲಿ ರಿಸ್ಕ್ ಎನ್ನುವ ಪ್ರಶ್ನೆ ಇಲ್ಲ ಅಂದ್ರು.
ಇಂದು ನಗರದಲ್ಲಿ ಸುಮಲತಾ ಅವರು ಸಮಾವೇಶ ನಡೆಸಲಿದ್ದು, ಕಾರ್ಯಕ್ರಮದಲ್ಲಿ ನಟ- ನಟಿಯರು ಭಾಗಿಯಾಗಲಿದ್ದಾರೆ. ಸುಮಲತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಕೈ ಮುಖಂಡರ ಮೇಲೆ ಜೆಡಿಎಸ್ ಪಕ್ಷ ನಿಗಾ ಇಟ್ಟಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖಂಡರ ಮಾಹಿತಿಯನ್ನ ಕಲೆ ಹಾಕುವಂತೆ ವರಿಷ್ಠರಿಂದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಮೈತ್ರಿ ಧರ್ಮ ಮೀರಿ ಸುಮಲತಾಗೆ ಬೆಂಬಲಿಸಿದ್ರೆ, ನಿಖಿಲ್ ಗೆ ಹಿನ್ನಡೆಯಾಗುವ ಹಿನ್ನಲೆಯಲ್ಲಿ ಗೌಪ್ಯವಾಗಿ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಇಂದು ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸುಮಲತಾಗೆ ಅಧಿಕೃತ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, 40-50 ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇರುವುದಾಗಿ ತಿಳಿದು ಬಂದಿದೆ.