ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಇಂದು ಬಿಡುಗಡೆಯಾಗಿದೆ.
ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಗುರುವಾರ ಸಿನಿಮಾದ ಪ್ರೀಮಿಯರ್ ಶೋ ನಡೆದಿತ್ತು. ನಟ ದರ್ಶನ್, ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಅವರು ಪ್ರೀಮಿಯರ್ ಶೋ ವೀಕ್ಷಿಸಿದರು. ಬಳಿಕ ಮಾತಾಡಿದ ಸುಮಲತಾ ಅವರು ನಿಖಿಲ್ ಸೇರಿದಂತೆ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಕುರುಕ್ಷೇತ್ರ ಬರಿ ಸಿನಿಮಾ ಎಂದರೆ ತಪ್ಪಾಗುತ್ತದೆ. ಎಲ್ಲ ನಟರಿಗೂ ಇದು ಒಂದು ಜರ್ನಿ ಎಂದೇ ಹೇಳಬಹುದು. ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರಿಗೆ ಕುರುಕ್ಷೇತ್ರ ಅವರಿಗೆ ಲ್ಯಾಂಡ್ ಮಾರ್ಕ್ ಆಗುತ್ತದೆ. ದುರ್ಯೋಧನ ಅಂದರೇ ದರ್ಶನ್ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇದೆ. ಬರಿ ಡಿ ಬಾಸ್ ಅಲ್ಲ, ಇನ್ನು ಮುಂದೇ ದುರ್ಯೋಧನ ಬಾಸ್. ನನಗೆ ಈ ಸಿನಿಮಾ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನ ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಅವರು ನಟಿಸಲ್ಲ ಎಂದರು ಮುನಿರತ್ನ ಅವರ ಕೋರಿಕೆ ಮೇಲೆ ನಟಿಸಿದ್ದರು. ಆದ್ದರಿಂದಲೇ ಸಅವರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ. ಸಿನಿಮಾ ಬಗ್ಗೆ ಗಂಟೆಗಟ್ಟಲೇ ಮಾತನಾಡಬೇಕಾಗುತ್ತದೆ. ಪ್ರತಿಯೊಬ್ಬ ನಟರು ಕೂಡ ಉತ್ತಮವಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾರ ನಟನೆ ಹೃದಯ ಸ್ಫರ್ಶಿಯಾಗಿದೆ. ನಿಖಿಲ್ ಅವರ ನಟನೆಯೂ ಸೂಪರ್ ಆಗಿದೆ. ಸಿನಿಮಾಗೆ ಶುಭಾ ಹಾರೈಸುತ್ತೇನೆ ಎಂದು ಸುಮಲತಾ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ದರ್ಶನ್ ಅವರು, ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಸಿನಿಮಾ ಮುಕ್ತಾಯವಾದ ಬಳಿಕ 3 ನಿಮಿಷದ ಕೆಲ ದೃಶ್ಯಗಳಿವೆ ಎಲ್ಲರೂ ತಪ್ಪದೇ ಅದನ್ನು ವಿಕ್ಷೀಸಬೇಕು ಎಂದು ಮನವಿ ಮಾಡಿದರು.