ಸೇನೆಗೆ ಆಯ್ಕೆಯಾದ ಸುಲ್ತಾನಪೂರದ 9 ಯುವಕರು- ಎಕ್ಸಂಬಾ ಪಟ್ಟಣದ 8 ಯುವಕರು

Public TV
1 Min Read
CKD Youths Army copy

ಬೆಳಗಾವಿ/ಚಿಕ್ಕೋಡಿ: ಗಡಿ ಕಾಯ್ದು ದೇಶ ಸೇವೆ ಮಾಡಬೇಕು ಎನ್ನುವ ಹಂಬಲ ಸಾಕಷ್ಟು ಯುವಕರಲ್ಲಿ ಇರುತ್ತದೆ. ಆದರೆ ಬಹಳಷ್ಟು ಯುವಕರ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಆದರೆ ಇಲ್ಲಿ ವಿಶೇಷ ಎನ್ನುವಂತೆ ಒಂದೇ ಊರಿನ 9 ಯುವಕರು ಸೇನೆಗೆ ಭರ್ತಿಯಾಗುವ ಮೂಲಕ ಇಡೀ ಊರಿಗೆ ಹೆಮ್ಮೆ ತಂದಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ 9 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿ ದೇಶ ಸೇವೆಗೆ ಸಿದ್ಧವಾಗಿದ್ದಾರೆ. ಕೊಪ್ಪಳದಲ್ಲಿ ನಡೆದ ಸೇನಾ ಭರ್ತಿ ರ‌್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಹಾಗೂ ಲಿಖಿತ ಪರೀಕ್ಷೆ ಬರೆದು ಯುವಕರು ಸೇನೆಯ ಜನರಲ್ ಡ್ಯೂಟಿಗೆ ಜಿ.ಡಿ.ಗೆ ಆಯ್ಕೆಯಾಗಿದ್ದಾರೆ. ಸೇನೆಗೆ ಆಯ್ಕೆಯಾಗಲು ಸಾಕಷ್ಟು ಪರಿಶ್ರಮ ಪಟ್ಟಿರುವ ಯುವಕರು ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

CKD Youths Army 1 copy
ಎಕ್ಸಂಬಾ ಪಟ್ಟಣದ ಯುವಕರು

ಸುಲ್ತಾನಪೂರ ಗ್ರಾಮ ಅಷ್ಟೇ ಅಲ್ಲ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ 8 ಜನ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಭಾರತೀಯ ಸೇನೆಗೆ ಆಯ್ಕೆಯಾದ ಯುವಕರನ್ನ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಸನ್ಮಾನಿಸಿದ್ದಾರೆ. ತಮ್ಮ ಗ್ರಾಮಗಳಿಂದ ಇಷ್ಟೊಂದು ಯುವಕರು ಸೇನೆಗೆ ಆಯ್ಕೆಯಾಗಿ ದೇಶ ಸೇವೆ ಮಾಡಲು ಹೋಗುತ್ತಿರುವದಕ್ಕೆ ಗ್ರಾಮಸ್ಥರು ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *