ಬೆಳಗಾವಿ: ವಿಪರೀತ ಕುಡಿತಕ್ಕೆ ದಾಸನಾಗಿದ್ದ ಬೆಳಗಾವಿ ಪ್ರಸಿದ್ದ ಉದ್ಯಮಿ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶೈಲೇಶ್ ಜೋಶಿ(40) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬೆಳಗಾವಿ ಹಿಂಡಲಗಾ ಬಡಾವಣೆಯ ನಿವಾಸಿಯಾಗಿದ್ದ ಶೈಲೇಶ್ ಜೋಶಿ ಇಡೀ ರಾಜ್ಯದಲ್ಲಿ ಅಮೃತ ಫಾರ್ಮಸಿಟಿಕಲ್ ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದರು.
ಆದರೆ ಇತ್ತೀಚೆಗಷ್ಟೇ ವಿಪರೀತ ಕುಡಿತದ ದಾಸರಾಗಿದ್ದರು. ಇದರಿಂದ ಕುಟುಂಬಸ್ಥರು ಬೇಸತ್ತಿದ್ದರು. ಅಲ್ಲದೆ ಪತ್ನಿ-ಮಕ್ಕಳು ಸಹ ಮನೆ ಬಿಟ್ಟು ತವರು ಮನೆ ಸೇರಿದ್ದರು. ಈ ಎಲ್ಲಾ ವಿಷಯಗಳಿಂದ ಮನನೊಂದು ಭಾನುವಾರ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.