ಜೆಡಿಎಸ್ ಶಾಸಕರಿರುವ ಮಧುಗಿರಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ

Public TV
1 Min Read
tmk 2

ತುಮಕೂರು: ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಿಜೆಪಿ ಶಾಸಕರ ಕ್ಷೇತ್ರವನ್ನು ಕಡೆಗಣನೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ ಜೆಡಿಎಸ್ ಶಾಸಕರಿರುವ ಮಧುಗಿರಿ ಕ್ಷೇತ್ರಕ್ಕೆ ಅನುದಾನಗಳ ಮಹಾಪೂರವೇ ಹರಿದು ಬಂದಿದೆ.

ಮಧುಗಿರಿ ಕ್ಷೇತ್ರವೊಂದಕ್ಕೆ ಸುಮಾರು ಒಂದು ಸಾವಿರ ಕೋಟಿ ಅನುದಾನ ನೀಡಿದ್ದು, ಇದೆಲ್ಲಾ ಸಿಎಂ ಕೃಪೆ ಎಂದು ಮಧುಗಿರಿ ಶಾಸಕ ಎಚ್.ವಿ.ವೀರಭದ್ರಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದಲ್ಲಿ 874.81 ಕೋಟಿ ಮಧುಗಿರಿಗೆ ಅನುದಾನ ಬಂದಿದ್ದು, ಇದರಲ್ಲಿ ಪ್ರಮುಖವಾಗಿ ಎತ್ತಿನ ಹೊಳೆ ಯೋಜನೆಗೆ 410 ಕೋಟಿ ಅನುದಾನ ಇಟ್ಟಿದ್ದಾರೆ. ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

jds

ಲೋಕೋಪಯೋಗಿ ಇಲಾಖೆಗೆ 215 ಕೋಟಿ, ಪಶುಸಂಗೋಪನೆಗೆ 5 ಕೋಟಿ ರೂ. ಜಯಮಂಗಲಿ ನದಿ ಸೇತುವೆಗೆ 16 ಕೋಟಿ, ಕೆಆರ್‍ಐಡಿಎಲ್ 23 ಕೋಟಿ ರೂ. ಅನುದಾನ ಬಂದಿದೆ. ಹೀಗೆ ವಿವಿಧ ಇಲಾಖೆಗೆ ಒಟ್ಟು ಸರ್ಕಾರಿಂದ 874 ಕೋಟಿ ರೂ. ಅನುದಾನ ಹರಿದು ಬಂದಿದೆ ಎಂದು ವೀರಭದ್ರಯ್ಯ ಹೇಳಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿರುವ ನಾಲ್ಕು ಕ್ಷೇತ್ರಕ್ಕೆ ಅನುದಾನವೇ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮಧುಗಿರಿ ಶಾಸಕರು ತಮ್ಮ ಅನುದಾನದ ಸರಮಾಲೆಯನ್ನು ಹೇಳಿಕೊಂಡಿದ್ದು, ಬಿಜೆಪಿ ಶಾಸಕರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *