ಕೊಪ್ಪಳ: ರಾತ್ರಿ ವೇಳೆ ಬಾಲಕಿಯರ ಹಾಸ್ಟೆಲ್ ಮೇಲೇರಿ ಕಿಡಿಗೇಡಿಗಳು ಕಿಟಕಿ ಮತ್ತು ಬಾಗಿಲು ಬಡಿದು ವಿದ್ಯಾರ್ಥಿನಿಯರನ್ನು ಹೆದರಿಸ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಹಿರೇಜಂತಕಲ್ ನಲ್ಲಿರುವ ಬಿಸಿಎಂ ಬಾಲಕಿಯರ ಹಾಸ್ಟೆಲ್ನಲ್ಲಿ ಈ ರೀತಿಯಾದ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ರಾತ್ರಿ ವೇಳೆ ಹಾಸ್ಟೆಲ್ ಮೇಲೇರಿ ಕಿಟಕಿ ಮುಖಾಂತರ ವಿದ್ಯಾರ್ಥಿನಿಯರನ್ನ ಕಿಡಗೇಡಿಗಳು ಹೆದರುಸುತ್ತಿದ್ದಾರೆ. ಇದ್ರಿಂದ ವಿದ್ಯಾರ್ಥಿನಿಯರು ಭಯದಲ್ಲಿದ್ದಾರೆ. ಹೀಗಾಗಿ ಭಾನುವಾರ ರಾತ್ರಿ ಎಸ್ಎಫ್ಐ ಕಾರ್ಯಕರ್ತರು ಹಾಸ್ಟೆಲ್ಗೆ ಕಾವಲು ನಿಂತಿದ್ದರು.
50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ವಾಸ ಮಾಡುತ್ತಿದ್ದು, ಓರ್ವ ಮಹಿಳಾ ವಾರ್ಡನ್ ಇದ್ದಾರೆ. ಸ್ಥಳಕ್ಕೆ ಗಂಗಾವತಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.