ತುಮಕೂರು: ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರಿನ ಶಿರಾದಲ್ಲಿ ಪಟ್ಟಣದಲ್ಲಿ ನಡೆದಿದೆ.
ಜಾಹ್ನವಿ(4) ಮೃತ ವಿದ್ಯಾರ್ಥಿನಿ. ಜಾಹ್ನವಿ ಕದಂಬ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ. ಇದೇ ಶಾಲೆಯ ಬಸ್ ಹಿಂಬದಿಯಿಂದ ಬಂದು ಜಾಹ್ನವಿ ಮೇಲೆ ಹರಿದಿದೆ.
ಜಾಹ್ನವಿ ತರಗತಿ ಮುಗಿಸಿ ವಾಪಸ್ ಹೋಗುತಿದ್ದಾಗ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಮೃತ ಬಾಲಕಿ ಜಾಹ್ನವಿ ಶಿರಾ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೇದೆ ಭಕ್ತಕುಮಾರ್ ಅವರ ಪುತ್ರಿ ಎನ್ನಲಾಗಿದೆ.
ಸದ್ಯ ಈ ಬಗ್ಗೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.