ಬಿಸಿಎಂ ವಸತಿ ನಿಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

Public TV
1 Min Read
BIJ SUCIDE

ವಿಜಯಪುರ: ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಿಸಿಎಂ ಹಾಸ್ಟೆಲ್‍ನಲ್ಲಿ ನಡೆದಿದೆ.

ಕಡ್ಲೆವಾಡ ಗ್ರಾಮದ ನಿವಾಸಿ ಅಮೃತ ಮಾದರ (22) ನೇಣಿಗೆ ಶರಣಾದ ವಿದ್ಯಾರ್ಥಿ. ಈತ ಸಿಂದಗಿ ತಾಲೂಕಿನ ಎಚ್.ಜಿ. ಕಾಲೇಜಿನಲ್ಲಿ ಪದವಿಯನ್ನು ವಿದ್ಯಾಭ್ಯಾಸ ಮಾಡುತ್ತಿದ್ದು, ಬಿಸಿಎಂ ಹಾಸ್ಟೆಲ್‍ನಲ್ಲಿ ವಾಸವಿದ್ದನು.

vlcsnap 2017 11 23 15h10m23s238

ಅಮೃತ ಮಾದರ ಇಂದು ಕಾಲೇಜಿಗೆ ಹೋಗದೆ ಹಾಸ್ಟೆಲ್‍ನಲ್ಲಿಯೇ ಉಳಿದುಕೊಂಡಿದ್ದ. ನಂತರ ಹಾಸ್ಟೆಲ್‍ನ ಸ್ನೇಹಿತರೆಲ್ಲರೂ ಕಾಲೇಜಿಗೆ ಹೋದ ಬಳಿಕ ಯಾರು ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಸಿಂದಗಿ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

vlcsnap 2017 11 23 15h10m29s290

vlcsnap 2017 11 23 15h11m09s384

 

vlcsnap 2017 11 23 15h10m35s700

vlcsnap 2017 11 23 15h10m39s788

vlcsnap 2017 11 23 15h11m42s465

vlcsnap 2017 11 23 15h10m53s220

 

Share This Article
Leave a Comment

Leave a Reply

Your email address will not be published. Required fields are marked *