ಏಕಾಏಕಿ ಬನಶಂಕರಿ ದೇಗುಲದ ಬಳಿ ಇದ್ದ ಬೀದಿ ವ್ಯಾಪಾರಿಗಳ ಎತ್ತಂಗಡಿ!

Public TV
1 Min Read
TEMPLE

ಬೆಂಗಳೂರು: ಬನಶಂಕರಿ ದೇವಾಲಯ ನಗರದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದ್ದು, ಆದರೆ ಈಗ ದೇಗುಲದ ಮುಂದೆ ಅನೇಕ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ಪೊಲೀಸರು ಎತ್ತಂಗಡಿ ಮಾಡಿದ್ದಾರೆ.

ಪೊಲೀಸರು ಏಕಾಏಕಿ ಎತ್ತಂಗಡಿ ಮಾಡಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಎತ್ತಂಗಡಿ ಮಾಡೋವಾಗ ವ್ಯಾಪಾರಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ದೇಗುಲದ ಅಧ್ಯಕ್ಷ ವೆಂಕಟೇಶ್ ಅವರೇ ಪೊಲೀಸರಿಗೆ ಹೇಳಿ ನಮ್ಮ ಹೊಟ್ಟೆ ಮೇಲೆ ಕಲ್ಲು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೀದಿಬದಿ ವ್ಯಾಪಾರಿಗಳು ಕಿಡಿಕಾರಿದ್ದಾರೆ.

TEMPLE 1

ಬೀದಿಬದಿ ವ್ಯಾಪಾರಸ್ಥರ ಆರೋಪವನ್ನ ತಳ್ಳಿ ಹಾಕಿದ ದೇಗುಲದ ಅಧ್ಯಕ್ಷ ವೆಂಕಟೇಶ್, ದೇವಸ್ಥಾನದ ಮುಂದೆ ಮೆಟ್ರೋ ಸ್ಟೇಷನ್ ಇದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಅಲ್ಲದೇ ವ್ಯಾಪಾರಸ್ಥರಿಂದ ಸ್ಥಳೀಯ ರೌಡಿಯೊಬ್ಬ ಹಣ ವಸೂಲಿ ಮಾಡುತ್ತಿದ್ದಕ್ಕೆ ಪೊಲೀಸರು ಎತ್ತಂಗಡಿ ಮಾಡಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬನಶಂಕರಿ ದೇವಸ್ಥಾನದ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.

ದೇಗುಲದ ಆವರಣದಿಂದ ಎತ್ತಂಗಡಿ ಮಾಡಿಸಿದ್ದಕ್ಕೆ, ಬೀದಿವ್ಯಾಪಾರಿಗಳು ದೇಗುಲ ಅಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿದ್ದರು. ಸುಮಾರು 30 ವರ್ಷಗಳಿಂದ ದೇಗುಲದ ಮುಂದೆಯೇ ವ್ಯಾಪಾರ ಮಾಡುತ್ತಿದ್ದ ಅವರು ಮುಂದೆ ಎಲ್ಲಿ ವ್ಯಾಪಾರ ಮಾಡೋದು ಅಂತ ಆತಂಕಕ್ಕಿಡಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *