Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

Districts

ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

Public TV
Last updated: January 23, 2020 7:45 am
Public TV
Share
2 Min Read
GBL
SHARE

– ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಚಿತ್ರ ಆಚರಣೆ
– ಕಂಬಿಗೆ ತಲೆಕೆಳಗಾಗಿ ನೇತುಬಿದ್ದ ಮಹಿಳೆ

ಕಲಬುರಗಿ: ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಇದೀಗ ಈ ದೇವಸ್ಥಾನದಲ್ಲಿ ದೆವ್ವ-ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿದೆಯಂತೆ, ಅಚ್ಚರಿಯಾದರೂ ಇದು ನಿಜವಾಗಿದೆ.

ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳನ್ನು ನಿತ್ಯ ಇಲ್ಲಿ ಕಾಣಬಹುದು. ಮೈಮೇಲೆ ಪರಿವೇ ಇಲ್ಲದಂತೆ ಚಿತ್ರ ವಿಚಿತ್ರವಾಗಿ ವರ್ತಿಸುವ ಇವರ ಮೇಲೆ ದೆವ್ವ, ಪಿಶಾಚಿ, ಪ್ರಾತಾತ್ಮಗಳು ಆವಾಹಿಸಿಕೊಂಡಿವೆಯಂತೆ. ಇದರಿಂದ ಮುಕ್ತರಾಗಲು ಇವರೆಲ್ಲ ದತ್ತನ ಸನ್ನಿಧಿಗೆ ಬರುತ್ತಾರೆ.

GLB 1

ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ದತ್ತನಿಗೆ ಮಹಾ ಮಂಗಳಾರತಿ ನೆರವೇರಿಸುವ ವೇಳೆ ಮಾನಸಿಕ ಅಸ್ವಸ್ಥರು, ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಕೂದಲು ಕೆದರಿಕೊಂಡು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ, ಕೇಕೆ ಹಾಕುತ್ತಾರೆ, ಅಳುತ್ತಾರೆ, ದೇವರನ್ನೇ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಕೆಲವರು ಕಂಬಿ ಮೇಲೆ ನಿದ್ದೆ ಹೋಗುತ್ತಾರೆ. ಹೀಗೆ ಬರೋರಲ್ಲಿ ಕರ್ನಾಟಕದವರು ಇದ್ದಾರೆ. ಆಂಧ್ರ, ತೆಲಂಗಾಣದವರು ಇದ್ದಾರೆ. ಆದರೆ ಪ್ರೇತಾತ್ಮಗಳ ಕಾಟಕ್ಕೆ ತುತ್ತಾಗುವವರಲ್ಲಿ ಮಹಾರಾಷ್ಟ್ರ ಮಂದಿಯೇ ಅಧಿಕ. ಇಲ್ಲಿ ಬಂದು ಕೆಲ ದಿನಗಳ ದತ್ತನ ಆರಾಧನೆ ಮಾಡಿದರೆ ದುಷ್ಟ ಶಕ್ತಿಗಳಿಂದ ಜನ ಪಾರಾಗುತ್ತಾರೆ ಎಂದು ಅರ್ಚಕ ಪ್ರಸನ್ನ ಪೂಜಾರಿ ಹೇಳಿದ್ದಾರೆ.

ಇವರೆಲ್ಲರೂ ಚಿತ್ರ ವಿಚಿತ್ರವಾಗಿ ವರ್ತಿಸಲು ಒಂದು ಕಾರಣ ಇದೆ. ಜೊತೆಗೆ ಪುರಾಣದ ಹಿನ್ನೆಲೆ ಇದೆ. ಇಲ್ಲಿನ ಅಶ್ವಥ್ಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ನೆಲೆಸಿದ್ದನಂತೆ. ಇಲ್ಲಿನ ಜನ ಜಾನುವಾರುಗಳ ನೆಮ್ಮದಿ ಕೆಡಿಸಿದ್ದರು. ಆಗ ದತ್ತಾತ್ರೇಯ ಸ್ವಾಮಿ, ಎರಡನೇ ಅವತಾರ ಎತ್ತಿ ಶ್ರೀಮಾನ್ ನರಸಿಂಹ ಸರಸ್ವತಿ ಮಹಾರಾಜರು ರೂಪದಲ್ಲಿ ರಾಕ್ಷಸನಿಗೆ ಮುಕ್ತಿ ನೀಡಿದ್ದರು ಎನ್ನಲಾಗುತ್ತದೆ. ಅಂದಿನಿಂದ ಇದು ಪ್ರೇತಾತ್ಮಗಳನ್ನು ದೂರ ಮಾಡುವ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಭಕ್ತೆ ಮಾಲತಿ ರೇಷ್ಮಿ ಹೇಳಿದರು.

GLB 2

ಅಂದಹಾಗೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಅವತಾರವನ್ನೆತ್ತಿರುವ ಗುರುದತ್ತನ ಸನ್ನಿಧಿಯಲ್ಲಿ ಈ ಪವಾಡಗಳು ನಿತ್ಯ ನಡೆಯುತ್ತವೆ. ಯಾಕೆಂದರೆ ಈ ದೇವಾಲಯದ ಆವರಣದಲ್ಲಿರುವ ಅಶ್ವಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ವಾಸಿಸುತ್ತಿದ್ದು, ಇಲ್ಲಿರುವ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದರು. ಆದರೆ ದತ್ತಾತ್ರೇಯ ಸ್ವಾಮಿಗಳ ಎರಡನೇ ಅವತಾರದಲ್ಲಿ ಸಾಕ್ಷತ್ ಶ್ರೀಮನ ನರಸಿಂಹ ಸರಸ್ವತಿ ಮಹಾರಾಜರು ಆ ರಾಕ್ಷಸನಿಗೇ ಮುಕ್ತಿ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ನಡೆಯುವ ಮಹಾಮಂಗಳಾರತಿ ವೇಳೆ ಭೂತ-ಪ್ರೇತಗಳು ಇದೆ ಎಂದು ನಂಬಿದ ಜನ, ಇಲ್ಲಿ ಬಂದು ಶ್ರೀ ಗುರು ದತ್ತನ ಪೂಜೆ ಸಲ್ಲಿಸಿದರೆ, ಅವರಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಭೀಮಾ ಅಮರ್ಜಾ ನದಿ ಸಂಗಮವಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯವು ಸಾವಿರಾರು ಜನ ಬಂದು ಹೋಗುತ್ತಾರೆ. ಕೆಲವರು ಬರಿ ದರ್ಶನ ಭಾಗ್ಯಕ್ಕೆಂದು ಬಂದು ಶ್ರೀಗುರುದತ್ತನ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ಇನ್ನೂ ಕೆಲವರು ಅವರಿಗೆ ಕಾಡುತ್ತಿರುವ ದುಷ್ಟ ಶಕ್ತಿಗಳು ಸಂಕಟ ದೂರು ಮಾಡಿಕೊಳ್ಳಲು ಬರುತ್ತಾರೆ.

TAGGED:dattatreya templeGhostsKalaburagipoojaPublic TVwomenಕಲಬುರಗಿದತ್ತಾತ್ರೇಯ ದೇವಸ್ಥಾನದೆವ್ವಪಬ್ಲಿಕ್ ಟಿವಿಪೂಜೆಮಹಿಳೆಯರು
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

oil price fall
Latest

ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್‌ ಭಾರೀ ಕುಸಿತ

Public TV
By Public TV
23 minutes ago
Lorry Accident Mysore Road Sattelite Bus Stand
Bengaluru City

ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಲಾರಿ – ಚಾಲಕ ಸಾವು

Public TV
By Public TV
50 minutes ago
Hormuz
Latest

ಕದನ ವಿರಾಮಕ್ಕೆ ಇರಾನ್‌ ವಿಧಿಸಿದ 10 ಷರತ್ತುಗಳು ಏನು?

Public TV
By Public TV
54 minutes ago
WAR 1
Latest

ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಏನು?

Public TV
By Public TV
1 hour ago
Bab al Mandab Strait India
Latest

ಹಾರ್ಮುಜ್ ಬಳಿಕ ಬಾಬ್ ಅಲ್-ಮಂಡೇಬ್ ಜಲಸಂಧಿ ಬಂದ್‌ ಭೀತಿ – ಭಾರತಕ್ಕೇನು ಪರಿಣಾಮ?

Public TV
By Public TV
1 hour ago
Donald Trump 2
Latest

ಅಮೆರಿಕ-ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?