Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

Bengaluru City

ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

Public TV
Last updated: November 10, 2019 12:49 pm
Public TV
Share
4 Min Read
PARASARAN 9
SHARE

– ಶತಮಾನದ ಭೂ ವ್ಯಾಜ್ಯದ ಸಕ್ಸಸ್‍ಗೆ ಪರಾಸರನ್ ಕಾರಣ
– ಎರಡನೇ ‘ಪತ್ನಿ’ಯಿಂದ ಅಯೋಧ್ಯೆ ಕೇಸ್ ಗೆಲುವು

ಬೆಂಗಳೂರು: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಭೂ ವ್ಯಾಜ್ಯ ಕೇಸ್ ಇತ್ಯರ್ಥವೇನೋ ಆಯ್ತು. ಆದರೆ ಶತಮಾನದ ವ್ಯಾಜ್ಯದ ಸಕ್ಸಸ್‍ಗೆ ಕಾರಣವಾಗಿದ್ದು ಯಾರು ಎಂಬ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ.

ಹೌದು. ದಶಕಗಳ ಕಾನೂನು ಹೋರಾಟದ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯ ವಿವಾದ ಕೊನೆಗೂ ಬಗೆಹರಿದಿದೆ. ರಾಮಜನ್ಮಭೂಮಿ ಶ್ರೀರಾಮನಿಗೆ ಸೇರಿದ್ದು. ಇದು ಬೇರೆ ಯಾರಿಗೂ ಸೇರಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಶಿಯಾ, ವಕ್ಫ್, ನಿರ್ಮೋಹಿ ಅಖಾರರ ಪರ ಖ್ಯಾತನಾಮ ವಕೀಲರು ಮಂಡಿಸಿದ ವಾದವನ್ನು ಮೆಟ್ಟಿನಿಂತು ರಾಮಲಲ್ಲಾ ಕೇಸ್ ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ 92 ವರ್ಷ ಹಿರಿಯ ವಕೀಲ ಕೆ ಪರಾಸರನ್.

parasaran 2

ಕೆ ಪರಾಸರನ್ ಅವರು ಕಾನೂನು ಲೋಕದ ಹೀರೋ. ಇವರಿಗೆ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸೋದು ಅಂದರೆ ಪಂಚಪ್ರಾಣ. `1949ರಲ್ಲಿ ನನಗೆ ಮದುವೆ ಆಯ್ತು. ಇದಾದ ಮರುವರ್ಷವೇ ಮತ್ತೊಂದು ಮದುವೆ ಮಾಡಿಕೊಂಡೆ. ಎರಡನೇ ಹೆಂಡತಿ ಹೆಸರು `ಕಾನೂನು’. ಯಾವ ಪುರುಷನಿಗಾದ್ರೂ ಎರಡನೇ ಹೆಂಡತಿ ಮೇಲೆ ಮೋಹ. ನನಗೂ ಮೊದಲ ಹೆಂಡತಿಗಿಂತ 2ನೇ ಹೆಂಡತಿ ಮೇಲೆಯೇ ಮೋಹ. ನಾನು ನನ್ನ ಜೀವನದಲ್ಲಿ ನಿಜವಾದ ಪತ್ನಿಗಿಂತ ಕಾನೂನನ್ನೇ ಹೆಚ್ಚು ಪ್ರೀತಿಸಿದೆ’ ಎಂದು ಹಿರಿಯ ವಕೀಲ ಪರಾಸರನ್ ಹೇಳುತ್ತಾರೆ. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

parasaran 4

ಇಂತಹ ಕಾನೂನು ವ್ಯಾಮೋಹಿ ಪರಾಸರನ್, ತಮ್ಮ 92ನೇ ವಯಸ್ಸಿನಲ್ಲಿಯೂ ರಾಮಲಲ್ಲಾ ಪರ ಸುಪ್ರೀಂಕೋರ್ಟಿನಲ್ಲಿ ಪ್ರಖರ ವಾದ ಮಂಡಿಸಿ, ಕೇಸನ್ನು ಗೆಲ್ಲಿಸಿದ್ದಾರೆ. ಇದೀಗ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಮಲಲ್ಲಾ ವಿರಾಜಮಾನ್ ಪರ ಸುಪ್ರೀಂಕೋರ್ಟಿನಲ್ಲಿ 40 ದಿನಗಳ ಕಾಲ ಪ್ರಖರ ವಾದ ಮಂಡಿಸಿದರು. 92 ವರ್ಷದ ಪರಾಸರನ್ ಕೋರ್ಟ್ ಹಾಲ್‍ನಲ್ಲಿ ನಿಂತು ವಾದ ಮಂಡಿಸುತ್ತಿದ್ದರೆ, ನ್ಯಾಯಮೂರ್ತಿಗಳು ತಾವು ದಯವಿಟ್ಟು ಕುಳಿತು ವಾದ ಮಾಡಿ ಎಂದು ಕೇಳಿಕೊಳ್ಳುತ್ತಿದ್ರು. ಆದರೆ ಪರಾಸರನ್ ಮಾತ್ರ ನಿಂತು ವಾದ ಮಂಡಿಸೋದು ನಮ್ಮ ಸಂಸ್ಕೃತಿ ಎಂದು ಹೇಳಿ ವಾದಿಸಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

parasaran 6

ರಾಮಲಲ್ಲಾ ಪರ ವಾದ ಮಂಡಿಸುವ ವೇಳೆ ಕೆ ಪರಾಸರನ್ ಅವರು ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ಹೇಳುತ್ತಾರೆ. ಅಂದರೆ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದರ್ಥ. ಶ್ರೀರಾಮನಜನ್ಮಭೂಮಿ ಕೂಡ ನಮಗೆ ಮುಖ್ಯ. ರಾಮಲಲ್ಲಾಗೆ ರಾಮಜನ್ಮಭೂಮಿ ಸಿಗಬೇಕು ಎಂದು ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

ಕೋರ್ಟಿನಲ್ಲಿ ಪ್ರಕರಣ ಸಂಬಂಧ ವಾದ ಮಂಡನೆಯಲಿ ಪರಾಸರನ್ ಅವರು ವೇದಗಳನ್ನು, ಪುರಾಣಗಳನ್ನು ಕೂಡ ಉಲ್ಲೇಖಿಸುತ್ತಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳಲೇಬೇಕು ಎಂಬ ಉದ್ದೇಶದಿಂದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದವರಲ್ಲಿ ಪರಾಸರನ್ ಸಹ ಒಬ್ಬರು. ಪ್ರತೀದಿನದ ಕೋರ್ಟ್ ಕಲಾಪಗಳಿಗೆ ಒಂದು ದಿನ ಮುಂಚಿತವಾಗಿಯೇ ಸಿದ್ಧಗೊಳ್ಳುವ ಪರಿಪಾಠವನ್ನು ಪರಾಸರನ್ ಅವರು ಅಳವಡಿಸಿಕೊಂಡಿದ್ದರು.

parasaran 1

ಈ ವಾದ ಸರಣಿಯ ಸಂದರ್ಭದಲ್ಲಿ ಪಿ.ವಿ. ಯೋಗೇಶ್ವರನ್, ಅನಿರುದ್ ಶರ್ಮಾ, ಶ್ರೀಧರ್ ಪುಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಸರನ್ ಅವರಿಗೆ ಸಹಾಯ ಮಾಡುತ್ತಿದ್ದರು. ಪರಾಸರನ್ ಅವರು ಎಷ್ಟು ತಯಾರಾಗಿ ಕಲಾಪಕ್ಕೆ ಹಾಜರಾಗುತ್ತಿದ್ದರು ಎಂದರೆ ನ್ಯಾಯಾಧೀಶರು ಮತ್ತು ವಕೀಲರು ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅವರು ಅಲ್ಲೇ ನಿಖರವಾಗಿ ಉತ್ತರಿಸಿ ವಾದಿಸುತ್ತಿದ್ದರು. ವಯಸ್ಸು ಆಗಿದ್ದರೂ ಅವರ ಜ್ಞಾಪಕ ಶಕ್ತಿ ಕಲಾಪ ವೀಕ್ಷಿಸುತ್ತಿದ್ದ ಯುವ ವಕೀಲರ ಅಚ್ಚರಿಗೆ ಕಾರಣವಾಗಿತ್ತು.

parasaran 7

ಆದರೆ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಸರನ್ ಅವರು ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಪರಾಸರನ್ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್ ಧವನ್ ಅವರು. ಧವನ್ ಸುಪ್ರೀಂ ಕೋರ್ಟಿನ ಪ್ರಮುಖ ವಕೀಲರು. ಹೀಗಾಗಿ ಎದುರಾಳಿಗಳ ಮೇಲೆ ಲಾ ಪಾಯಿಂಟ್ ಎತ್ತಿ ವಕೀಲರನ್ನು ಕಕ್ಕಾಬಿಕ್ಕಿ ಮಾಡುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಧವನ್ ಕಾಗದ ಪತ್ರವನ್ನು ಹರಿದು ಹಾಕಿದ್ದರೂ ಪರಾಸರನ್ ಅವರು ತಾಳ್ಮೆ ಕಳೆದುಕೊಂಡಿರಲಿಲ್ಲ. ಹಿಂದೂ ಕಡೆಯ ವಕೀಲರ ವಾದ ಮೂರ್ಖತನದಿಂದ ಕೂಡಿದ್ದು ಎಂದು ಹೇಳಿದರು ಪರಾಸರನ್ ಶಾಂತವಾಗಿದ್ದರು.

AYODHYA SUPREME

ಅಕ್ಟೋಬರ್ 16ರಂದು ಜನ್ಮಭೂಮಿ ಪ್ರಕರಣದ ವಿಚಾರಣೆ ಮುಕ್ತಾಯವಾದ ಬಳಿಕ ಪರಾಸರನ್ ಅವರು ನ್ಯಾಯಾಲಯದ ಹೊರಭಾಗದಲ್ಲಿ 15 ನಿಮಿಷಗಳ ಕಾಲ ರಾಜೀವ್ ಧವನ್ ಅವರಿಗಾಗಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ರಾಜೀವ್ ಧವನ್ ಅವರು ಹೊರಗೆ ಬಂದು ಪರಾಸರನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಮೂಲಕ ಕೋರ್ಟಿನ ಒಳಗೆ ನಾವಿಬ್ಬರು ಎದುರಾಳಿಗಳಾಗಿದ್ದರೂ ಹೊರಗಡೆ ಮಾತ್ರ ಸ್ನೇಹಿತರು ಎಂದು ತೋರಿಸಿದ್ದರು. ಈ ಮೂಲಕ ಎಲ್ಲ ವಕೀಲರ ಮನಸ್ಸು ಗೆದ್ದಿದ್ದರು.

parasaran 8

ಇಂತಹ ಕೆ ಪರಾಸರನ್, ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಕರಣದಲ್ಲಿ ಮಹಿಳೆಯರ ಪ್ರವೇಶದ ವಿರುದ್ಧವಾಗಿ ವಾದ ಮಂಡಿಸಿದ್ದಾರೆ. ಈ ಕುರಿತ ತೀರ್ಪು ಇನ್ನೂ ಬರಬೇಕಿದೆ. ಅಂದಹಾಗೇ, ಕೆ ಪರಾಸರನ್ ಅವರನ್ನು ಭಾರತೀಯ ಬಾರ್ ಅಸೋಸಿಯೇಷನ್‍ನ ಪಿತಾಮಹ ಅಂತಲೇ ಕರೆಯಲಾಗುತ್ತಿದೆ. 1927 ಅಕ್ಟೋಬರ್ 9ರಂದು ತಮಿಳುನಾಡಿನ ಅಯ್ಯಂಗಾರಿ ಕುಟುಂಬದಲ್ಲಿ ಜನಿಸಿದ ಪರಾಸರನ್, ತಮ್ಮ ಬಹುಕೇತ ಜೀವನವನ್ನು ಕೋರ್ಟ್ ಹಾಲ್‍ಗಳಲ್ಲೇ ಕಳೆದಿದ್ದಾರೆ. ಹಿಂದುತ್ವದ ಬಗ್ಗೆ ಅಪಾರ ಜ್ಞಾನವಿರುವ ಇವರು ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 1983ರಿಂದ 1989ರ ತನಕ ಭಾರತ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.

parasaran

ಕೆ ಪರಾಸರನ್ ಅವ್ರ ಕಾನೂನು ಸೇವೆ ಪರಿಗಣಿಸಿ ಭಾರತ ಸರ್ಕಾರ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಒಟ್ಟಿನಲ್ಲಿ ರಾಮನಜನ್ಮಭೂಮಿಯನ್ನು ರಾಮನಿಗೆ ಮರಳಿಸುವಲ್ಲಿ ಕೆ ಪರಾಸರನ್ ಪಾತ್ರವನ್ನು ಯಾರು ಮರೆಯುವಂತೆ ಇಲ್ಲ. ಇವರ ಜೀವನ ಪಥ ಕಾನೂನು ವಿದ್ಯಾರ್ಥಿಗಳಿಗೆ ಒಂದು ಪಾಠವಾಗಿದೆ.

TAGGED:Ayodhyabengaluruk parasaranPublic TVsupremecourtverdictಅಯೋಧ್ಯೆಕೆ ಪರಾಸರನ್ತೀರ್ಪುಪಬ್ಲಿಕ್ ಟಿವಿಬೆಂಗಳೂರುಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

CM Siddaramaiah congratulates Gilli Nata on winning Kannada Bigg Boss
ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ ಸಿಎಂ
Bengaluru City Cinema Districts Karnataka Latest Top Stories TV Shows
Payal Changappa
ʻಅಮೃತ ಅಂಜನ್‌ʼ ಸಿನಿಮಾದ ಫೀಲಿಂಗ್‌ ಸಾಂಗ್‌ ರಿಲೀಸ್‌
Cinema Latest Sandalwood
Life Ellind Ellige
`ಲೈಫ್ ಎಲ್ಲಿಂದ ಎಲ್ಲಿಗೆ’ ಅಂತ ಹಾಡಿದ ಟೀಮ್
Cinema Latest Sandalwood Top Stories
Gilli 1
ದೇಶ ಕಾಯುವ ಯೋಧರಿಂದ ಹಿಡಿದು ಎಲ್ರೂ ಪ್ರೀತಿ ಕೊಟ್ಟು, ಸಪೋರ್ಟ್ ಮಾಡಿದ್ದೀರಿ: ಗಿಲ್ಲಿ ನಟ
Cinema Latest Main Post Sandalwood TV Shows

You Might Also Like

kalaburagi reels death
Kalaburagi

ಕಲಬುರಗಿ| ರೀಲ್ಸ್ ಮಾಡುತ್ತ ಟ್ರ್ಯಾಕ್ಟರ್‌ ಕೆಳಗೆ ಬಿದ್ದ ಚಾಲಕ; ಚಕ್ರಕ್ಕೆ ಸಿಲುಕಿ ಸಾವು

Public TV
By Public TV
20 minutes ago
Nikhil Kumaraswamy
Districts

ರಾಜ್ಯಪಾಲರ ಘನತೆಗೆ ಕಾಂಗ್ರೆಸ್ ಅಗೌರವ ತೋರಿದೆ, ಸದಾಕಾಲ ಕೇಂದ್ರದ ಜೊತೆ ಸಂಘರ್ಷ ಸರಿಯಲ್ಲ: ನಿಖಿಲ್

Public TV
By Public TV
28 minutes ago
Trump unveils Board of Peace India absent from stage Pakistan joins
Latest

ಅಸ್ತಿತ್ವಕ್ಕೆ ಬಂತು ಟ್ರಂಪ್‌ ಕನಸಿನ ಬೋರ್ಡ್‌ ಆಫ್‌ ಪೀಸ್‌ – ಪಾಕಿಸ್ತಾನವೂ ಸದಸ್ಯ ದೇಶ

Public TV
By Public TV
37 minutes ago
dharwad murder case man set to marry her strangled her to death
Crime

ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

Public TV
By Public TV
52 minutes ago
woman arrested for blackmailing swamiji ccb police bengaluru
Bengaluru City

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಹನಿಟ್ರ್ಯಾಪ್? – ಬ್ಲ್ಯಾಕ್‌ಮೇಲ್‌ ಮಾಡಿದ್ದ ಮಹಿಳೆ ಬಂಧನ

Public TV
By Public TV
1 hour ago
cocaine bengaluru airport
Crime

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 38 ಕೋಟಿ ಮೌಲ್ಯದ ಕೊಕೇನ್ ಸೀಜ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?