ಬಾಗಲಕೋಟೆ: ನಿಷೇಧಾಜ್ಞೆಯ ನಡುವೆಯೂ ಬಾಗಲಕೋಟೆಯ (Bagalkote) ಕಿಲ್ಲಾ ಓಣಿಯಲ್ಲಿ ಕಲ್ಲು ತೂರಾಟ (Stone Pelting) ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್(Lathi Charge) ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಶಿವಾಜಿ ಜಯಂತಿ ಮೆರವಣಿಗೆ(Shivaji Jayanti Procession) ವೇಳೆ ಕಲ್ಲು ತೂರಾಟ ನಡೆಸಿನ್ನು ಖಂಡಿಸಿ ಇಂದು ಕೊತ್ತಲೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ಕೇವಲ 8 ಮಂದಿಯಲ್ಲ ಬಹಳಷ್ಟು ಮಂದಿ ಕಲ್ಲು ಎಸೆದಿದ್ದಾರೆ. ಆ ಯುವಕರನ್ನು ಬಂಧಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.
ಸಭೆಯಲ್ಲಿ ನಿರ್ಧಾರ ಮಾಡಿದಂತೆ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮುಂದಾದರು. ಇದನ್ನು ಓದಿ: ಮಸೀದಿಯಿಂದ ಕಲ್ಲು ಎಸೆಯಲಾಗಿದೆ, ನನ್ನ ಮೇಲೂ ಕಲ್ಲು ಬಿದ್ದಿತ್ತು: ಬಾಗಲಕೋಟೆ ಎಸ್ಪಿ
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ತಡೆದಿದ್ದಕ್ಕೆ ಸಿಟ್ಟಾದ ಕಾರ್ಯಕರ್ತರು ನೀವು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ನಾವು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ಜಾಗತಿಕ AI ಶೃಂಗದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

