ಡೆಹ್ರಾಡೂನ್: ಪೊಲೀಸರು ತನಿಖೆ ನಡೆಸುವಾಗ ಕಳ್ಳನೊಬ್ಬ ತನ್ನ ತಪ್ಪನ್ನು ರಾಪ್ ಸಾಂಗ್ ಮೂಲಕ ವಿಶಿಷ್ಟ ರೀತಿಯಲ್ಲಿ ಒಪ್ಪಿಕೊಂಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ.
ಚಮೋಲಿಯ (Chamoli) ಅಂಗಡಿಯೊಂದರಲ್ಲಿ ಮೊಬೈಲ್ (mobile) ಹಾಗೂ ಕ್ಯಾಮೆರಾ (Camera) ಕಳವು ಮಾಡಿದ ಆರೋಪದ ಮೇರೆಗೆ ಸುಮಿತ್ ಖತ್ರಿ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸುವ ವೇಳೆ ಈ ಪ್ರಸಂಗ ನಡೆದಿದೆ. ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ
ರಾಪರ್ ಆಗುವ ಆಸೆಯಿಂದ ಹಣವಿಲ್ಲದೆ ಖತ್ರಿ ಕಳ್ಳತನವೆಸಗಿದ್ದಾನೆ. ತನಿಖೆ ಸಂದರ್ಭದಲ್ಲಿ ತನ್ನ ತಪ್ಪಿಗೆ ಮರುಕಪಟ್ಟಿದ್ದಾನೆ.
ಫೆ. 19 ರಂದು ಮಂದಿರ ಮಾರ್ಗದ (Mandir Marg) ಸಂಜಯ್ ಸಿಂಗ್ ಎಂಬವರಿಗೆ ಸೇರಿದ್ದ ಅಂಗಡಿಯ ಬೀಗ ಒಡೆದು 3.5 ಲಕ್ಷ ರೂ ಮೌಲ್ಯದ ಐದು ಮೊಬೈಲ್ಗಳನ್ನು ಹಾಗೂ ಒಂದು ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಅಂಗಡಿಯ ಮಾಲೀಕ ಗೋಪೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಯಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು ಸಂಜಯ್ ಸಿಂಗ್ಗೆ ಮರಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ