Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!

Public TV
Last updated: April 5, 2017 2:37 pm
Public TV
Share
4 Min Read
hot summer main
SHARE

– ಜನರಿಗೆ ಬಿಸಿಲಾಘಾತದ ಮುನ್ನೆಚ್ಚರಿಕೆ ನೀಡಿದ ರಾಜ್ಯ ಸರ್ಕಾರ

– ಹೀಟ್ ಸ್ಟ್ರೋಕ್ ತಂದೀತು ಜೀವಕ್ಕೇ ಕುತ್ತು

– ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ

ಪವಿತ್ರ ಕಡ್ತಲ

Contents
– ಜನರಿಗೆ ಬಿಸಿಲಾಘಾತದ ಮುನ್ನೆಚ್ಚರಿಕೆ ನೀಡಿದ ರಾಜ್ಯ ಸರ್ಕಾರ– ಹೀಟ್ ಸ್ಟ್ರೋಕ್ ತಂದೀತು ಜೀವಕ್ಕೇ ಕುತ್ತು– ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ

ಬೆಂಗಳೂರು: ಭೀಕರ ಬಿಸಿಲಿನಿಂದ ಕಂಗೆಡುತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ತೀವ್ರ ಬಿಸಿಲ ಧಗೆಯ ಮುನ್ನೆಚ್ಚರಿಕೆ ನೀಡಿದೆ. ಸುಡುಬಿಸಿಲಿನ ತಾಪದಿಂದ ಎದುರಾಗಬಹುದಾದ ಅಪಾಯಕಾರಿ ಪರಿಣಾಮಗಳ ಬಗ್ಗೆ ವಿವರಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಬೇಸಿಗೆ ತಾಪ ಹೆಚ್ಚುತ್ತಿರುವುದರಿಂದ ಬಯಲು ಸೀಮೆ ಹಾಗೂ ಕರಾವಳಿ ಪ್ರದೇಶದಲ್ಲಿ ಹೀಟ್ ಸ್ಟ್ರೋಕ್ ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತದೆ. ಹೀಗಾಗಿ ಆಯಾಯಾ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಸರ್ಜನ್, ತಾಲೂಕು ಆಸ್ಪತ್ರೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದೆ.

ಅಧಿಕಾರಿಗಳು ಏನ್ಮಾಡಬೇಕು?: ಕಡ್ಡಾಯವಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಮಾದರಿ ಪರೀಕ್ಷೆ ಹಾಗೂ ಕ್ಲೋರಿನೆಷನ್ ಮಾಡಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ಒಆರ್‍ಎಸ್, ಐವಿ ದ್ರವ, ಔಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು. ಹೀಟ್ ಸ್ಟ್ರೋಕ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಅಗತ್ಯ ಚಿಕಿತ್ಸೆಗೆ ಅಡ್ಮಿಟ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೀಟ್ ಸ್ಟ್ರೋಕ್ ಎಂದರೇನು?: ಮಳೆ ಬರುವಾಗ ಸಾಂಕ್ರಾಮಿಕ ರೋಗ ಬರುವಂತೆ ಭೀಕರ ತಾಪಮಾನದ ಸಂದರ್ಭದಲ್ಲಿ ಯೂ ಸಾಕಷ್ಟು ಕಾಯಿಲೆ ಬರುತ್ತದೆ. ಹೀಟ್ ಸ್ಟ್ರೋಕ್ ಎಂದರೆ ಶಾಖಾಘಾತ ಅಥವಾ ಬಿಸಿಲಾಘಾತ. ಇದರಿಂದ ಪ್ರಾಣ ಹಾನಿಯಾಗುವ ಸ್ಥಿತಿಯೂ ಇದೆ. ದೇಹವು ಅತಿಯಾದ ಉಷ್ಣತೆಗೆ ಒಡ್ಡಿಕೊಂಡಾಗ ಅದರ ಶಾಖ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ಅತಿ ಹೆಚ್ಚಿನ ಚಟುವಟಿಕೆಯಿಂದ ದೇಹ ಅಥವಾ ಹೊರಗಿನ ಅತಿ ಹೆಚ್ಚಿದ ಉಷ್ಣತೆಯಿಂದ ದೇಹದ ಪ್ರಮುಖ ಅಂಗಗಳು ವಿಫಲವಾಗುತ್ತವೆ. ತುಂಬ ಉಷ್ಣತೆಯ ಪರಿಸರದಲ್ಲಿ ಕೆಲಸ ಮಾಡುವುದು, ಜತೆಗೆ ದ್ರವಾಹಾರ ಸೇವನೆಯ ಕೊರತೆಯು ಇದಕ್ಕೆ ಕಾರಣ. ಸೂರ್ಯನ ತಾಪಮಾನ ಎಫೆಕ್ಟ್ ನಿಂದಾಗಿ ಇಡೀ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದ್ರಿಂದ ಅತಿ ಸುಸ್ತು, ತಲೆ ನೋವು ವಾಕರಿಕೆ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಕುಸಿದು ಬಿದ್ದು ಅಂಗಾಂಗಗಳು ನಿಷ್ಕ್ರಿಯಗೊಂಡು ಮಾತು ನಿಂತು ಹೋಗುತ್ತದೆ. ಈ ಸಮತದಲ್ಲಿ ತಡ ಮಾಡದೆ ಆಸ್ಪತ್ರೆಗೆ ಸೇರಿಸಿಕೊಳ್ಳಬೇಕು.

hot wave summer 11 3

ಲಕ್ಷಣಗಳೇನು?: ಬಿಸಿಲಿನ ತಾಪಮಾನಕ್ಕೆ ವಿಪರೀತ ತಲೆನೋವು, ತಲೆ ಸುತ್ತುವುದು, ಎಷ್ಟೇ ಶೆಖೆಯಿದ್ದರೂ ಬೆವರಿಳಿಯದೆ ಕಾಡುವ ಆಯಾಸ, ಮಾಂಸ ಖಂಡಗಳು ಶಕ್ತಿ ಕಳೆದುಕೊಳ್ಳುವುದು, ವಾಂತಿ ಕಾಣಿಸಿಕೊಳ್ಳುವುದು, ದೇಹದ ಉಷ್ಣತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು, ದೀರ್ಘವಾದ ತೀವ್ರ ಉಸಿರಾಟ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇಲ್ಲದಿದ್ದಲ್ಲಿ ಮೂರ್ಚೆ ಬೀಳುವುದು ಅಥವಾ ಪ್ರಜ್ಞೆ ತಪ್ಪಬಹುದು.

ಬಿಸಿಲಾಘಾತ ನಿಮಗಾಗದಿರಲು ಹೀಗೆ ಮಾಡಿ.

1. ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿ
2. ಬಿಸಿಲಿನಲ್ಲಿ ಕೆಲಸ ಮಾಡುವಾಗ ಸದಾ ಕೈಗೆಟಕುವಂತೆ ಕುಡಿಯುವ ನೀರು ಜೊತೆಗಿರಲಿ
3. ನಿಧಾನವಾಗಿ, ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ ಕುಡಿಯಿರಿ. ಸಾಫ್ಟ್ ಡ್ರಿಂಕ್‍ಗಳನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ. ಕಾಫಿ, ಟೀ ಸಾಧ್ಯವಾದಷ್ಟೂ ಕಡಿಮೆ ಕುಡಿಯಿರಿ.
4. ಹತ್ತಿಯ ನುಣುಪಾದ ಬಟ್ಟೆ/ಟಿಶ್ಯೂ ಕರವಸ್ತ್ರದಿಂದ ಬೆವರು ಒರೆಸಿ
5. ನೀರು ಮಜ್ಜಿಗೆ/ ಎಳನೀರು ಕುಡಿಯುವುದೂ ಆರೋಗ್ಯಕರ
6. ಬೆಚ್ಚಗಿನ ಮಸಾಲೆ ರಹಿತ ಶುದ್ಧ ಆಹಾರ ಸೇವಿಸಿ
7. ಗಾಳಿಯಾಡುವಂತಹ ಪಾದರಕ್ಷೆಗಳನ್ನೇ ಬಳಸಿ
8. ನಿಮ್ಮ ಜೊತೆಗಿನ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿಗೆ ಕೊಂಡೊಯ್ಯಿರಿ
9. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆತ್ತಿ
10. ಆ ವ್ಯಕ್ತಿಯ ಹಣೆ, ಕತ್ತು, ಪಾದ, ತೊಡೆಯ ಭಾಗವನ್ನು ಒದ್ದೆ ಬಟ್ಟೆಯಿಂದ ಒರೆಸಿ
11. ನಿಧಾನವಾಗಿ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಿ
12. ಹತ್ತಿರದ ವೈದ್ಯರನ್ನು ಕರೆಸಿ ಅಥವಾ ಆಸ್ಪತ್ರೆಗೆ ಸೇರಿಸಿ

hot wave summer 11 2

ಬಿಸಿಲಾಘಾತವಾಗಿದ್ರೆ ಹೀಗೆ ಮಾಡಿ!: ಹೀಟ್ ಸ್ಟ್ರೋಕ್ ಗೆ ಒಳಗಾದವರ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ ತೆಗೆಯಿರಿ. ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಹಾಕಿ. ತಣ್ಣಗಿನ ನೀರನ್ನು ಆ ವ್ಯಕ್ತಿಯ ಮೇಲೆ ಸಿಂಪಡಣೆ ಮಾಡಿ. ಯಾವುದೇ ಔಷಧ ನೀಡಬೇಡಿ. ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಲೇಬೇಡಿ. ಪ್ರಜ್ಞೆ ಬಂದ ಮೇಲೆ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಯಾವುದೇ ಕಾರಣಕ್ಕೂ ಆತುರ ಬೇಡವೇ ಬೇಡ.

ಹೀಗಾದ್ರೆ ಮಾತ್ರ ಡಾಕ್ಟರ್ ನೋಡ್ಲೇಬೇಕು!: ಚರ್ಮ ಕೆಂಪಗಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರವಾದ ಉಸಿರಾಟವಿದ್ದರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

ಇದನ್ನು ಮಾತ್ರ ಮಾಡಲೇಬೇಡಿ: ಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬೇಡಿ. ಕುಷನ್‍ಯುಕ್ತ ಕುರ್ಚಿಯಲ್ಲಿ ಕುಳಿತುಕೊಳ್ಳಬೇಡಿ. ಬಾಯಾರಿದಾಗ ಕಡ್ಡಾಯವಾಗಿ ನೀರನ್ನು ಕುಡಿಯಿರಿ. ಆದರೆ ಸೋಡಾ, ಸಾಫ್ಟ್ ಡ್ರಿಂಕ್ ಮಾತ್ರ ಬೇಡವೇ ಬೇಡ. ಬೆವರೊರೆಸಲು ಒರಟಾದ ಬಟ್ಟೆ ಉಪಯೋಗಿಸಬೇಡಿ. ಕಾಫಿ, ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ. ಬಿಸಿಲಿನ ವೇಳೆ ಮಸಾಲೆಯುಕ್ತ ಆಹಾರ ತಿನ್ನಬೇಡಿ. ಮಾಂಸಾಹಾರ ವರ್ಜಿಸಿ, ಮದ್ಯಪಾನವಂತೂ ಬೇಡವೇ ಬೇಡ. ಬಿಗಿಯಾದ, ಗಾಳಿಯಾದ ಚಪ್ಪಲಿ, ಶೂ ಧರಿಸಬೇಡಿ.

ಹೀಗೂ ಆಗುವ ಸಾಧ್ಯತೆ ಇದೆ: ಬಿಸಿಲಾಘಾತವಾದಾಗ ಎಚ್ಚರ ತಪ್ಪುವುದು ವಯಸ್ಸಾದವರಲ್ಲಿನ ಮೊದಲ ಲಕ್ಷಣ. ಹೀಟ್ ಸ್ಟ್ರೋಕ್ ಹೆಚ್ಚಾದರೆ ಮುಂದೆ ಮಾನಸಿಕ ಗೊಂದಲ, ಹೈಪರ್ ವೆಂಟಿಲೇಷನ್, ಸ್ನಾಯು ಸೆಳೆತ, ಕೈ ಕಾಲುಗಳಲ್ಲಿ ನೋವಿನಿಂದ ಕೂಡಿದ ಹರಿತ, ಸೆಳೆತವಾಗಬಹುದು. ಪರಿಸ್ಥಿತಿ ವಿಪರೀತವಾದರೆ ಕೆಲವು ಬಾರಿ ಕೋಮಾಗೂ ಜಾರಬಹುದು.

heat wave summer 7

heat wave summer 8

heat wave summer 9

heat wave summer 10

hot wave summer 11 1

heat wave summer 11

heat wave summer 1

heat wave summer 2

heat wave summer 5

heat wave summer 3

heat wave summer 4

heat wave summer 6

TAGGED:bengaluruhealthheatstrokePublic TVsummersunnyಆರೋಗ್ಯಪಬ್ಲಿಕ್ ಟಿವಿಬಿಸಿಲಾಘಾತಬಿಸಿಲುಬೆಂಗಳೂರುಬೇಸಿಗೆ
Share This Article
Facebook Whatsapp Whatsapp Telegram

You Might Also Like

Parag Jain
Latest

ʻಆಪರೇಷನ್ ಸಿಂಧೂರʼದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪರಾಗ್ ಜೈನ್‌ ʻರಾʼ ನೂತನ ಮುಖ್ಯಸ್ಥ

Public TV
By Public TV
17 minutes ago
Road Accident
Crime

ಮಂಗಳೂರು | ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿ!

Public TV
By Public TV
20 minutes ago
AI Image
Bengaluru City

Uttar Pradesh | ರೀಲ್ಸ್ ಮಾಡೋಕೆ ಐಫೋನ್‌ಗಾಗಿ ಬೆಂಗಳೂರು ಯುವಕನ ಕೊಲೆ

Public TV
By Public TV
21 minutes ago
sreeleela 1 1
Cinema

ಶ್ರೀಲೀಲಾ ಲೆನಿನ್ ಚಿತ್ರದಿಂದ ಹೊರಬಿಳೋಕೆ ಇಲ್ಲಿದೆ ಕಾರಣ..!?

Public TV
By Public TV
26 minutes ago
Vinay Rajkumar
Cinema

ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

Public TV
By Public TV
53 minutes ago
Dhruva Sarja 2
Cinema

ಮೂರು ಮೆಗಾ ಪ್ರಾಜೆಕ್ಟ್ ಒಪ್ಪಿದ ಧ್ರುವ ಸರ್ಜಾ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?