ಚಿಕ್ಕಮಗಳೂರು: ನಾಯಿ ದಾಳಿಗೆ ಕಡವೆ ಬಲಿ- ಕೊಂಬನ್ನು ಕದ್ದೊಯ್ದ ಕಿಡಿಗೇಡಿಗಳು

Public TV
0 Min Read
ckm kadave 1

ಚಿಕ್ಕಮಗಳೂರು: ನೀರು ಹುಡುಕಿಕೊಂಡು ನಾಡಿಗೆ ಬಂದಿದ್ದ ಕಡವೆಯೊಂದು ನಾಯಿ ದಾಳಿಗೆ ಸಿಲುಕಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

ckm kadave 2

ಶುಕ್ರವಾರ ಮಧ್ಯಾಹ್ನ ಚಿಕ್ಕಮಗಳೂರು ಸಮೀಪದ ಚುರ್ಚೆಗುಡ್ಡದಿಂದ ಬಂದಿದ್ದ ಕಡವೆ ಮೇಲೆ ನಾಯಿಗಳು ದಾಳಿ ಮಾಡಿದ್ರಿಂದ ಕಡವೆ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಕೂಡಲೇ ಸ್ಥಳಿಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಅಧಿಕಾರಿಗಳು ಕಡವೆಗೆ ಚಿಕಿತ್ಸೆ ಕೊಡಿಸಿ, ಜಿಂಕೆವನದಲ್ಲಿ ಬಿಟ್ಟಿದ್ರು.

ಆದ್ರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಡವೆ ಮಧ್ಯರಾತ್ರಿ ವೇಳೆ ಸಾವನ್ನಪ್ಪಿದೆ. ಕಿಡಿಗೇಡಿಗಳು ಸತ್ತ ಕಡವೆಯ ಕೊಂಬನ್ನು ಕಿತ್ತುಕೊಂಡು ಹೋಗಿದ್ದಾರೆ.

ckm kadave 4

ckm kadave 3

 

 

Share This Article