– ಲ್ಯಾಬ್ ಟೆಕ್ನಿಷಿಯನ್ಗೆ ನೋಟಿಸ್; ತನಿಖೆಗೆ ಸೂಚನೆ
ಬೆಂಗಳೂರು: ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಮಾಡುವ ಎಡವಟ್ಟುಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗಲ್ಲ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳೇ ಬಲಿಯಾಗಿಬಿಡುತ್ವೆ. ಈಗ ಅಂತಹದ್ದೇ ಒಂದು ಮಹಾ ಎಡವಟ್ಟು ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ 2 ದಿನಗಳ ಹಿಂದೆ ತಲೆ ನೋವು ಅಂತ ಜಯನಗರ ಆಸ್ಪತ್ರೆಗೆ ಬಂದಿದ್ದ ಪುನೀತ್ ಸೂರ್ಯ ಎಂಬ ವ್ಯಕ್ತಿ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದಕ್ಕೆ ಕಾರಣ ಸಿಬ್ಬಂದಿಯೊಬ್ಬ ಮಾಡಿದ ಎಡವಟ್ಟಿನ ಕೆಲಸ. ಇದನ್ನೂ ಓದಿ: RSS ಸಂಘಟನಾ ಕೌಶಲ್ಯಕ್ಕೆ ದಿಗ್ವಿಜಯ್ ಸಿಂಗ್ ಮೆಚ್ಚುಗೆ – ಅಡ್ವಾಣಿ ಮುಂದೆ ಮೋದಿ ಕುಳಿತಿರೋ ಫೋಟೋ ಹಂಚಿಕೊಂಡ `ಕೈ’ ನಾಯಕ

ಹೌದು. ವೈದ್ಯರು ರಕ್ತಹೀನತೆ ಆಗಿದೆ, ರಕ್ತ ಕೊಡಬೇಕು ಎಂದಿದ್ದಾರೆ. ಪುನೀತ್ಗೆ ಬೇಕಾಗಿದ್ದು `O+ve’ ಪಾಸಿಟಿವ್ ಬ್ಲಡ್.. ಆದ್ರೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದು `A+ve’ ಪಾಸಿಟಿವ್.. ಇದಕ್ಕೆಲ್ಲಾ ಕಾರಣವಾಗಿದ್ದು ಜಯನಗರ ಸಾರ್ವಜನಿಕರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಉಮೇಶ್. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ದಿನಗಣನೆ ಬೆನ್ನಲ್ಲೇ ಡ್ರಂಕ್ & ಡ್ರೈವ್ ತಪಾಸಣೆ ಜೋರು – 1500ಕ್ಕೂ ಹೆಚ್ಚು ಕೇಸ್ ದಾಖಲು
ಪುನೀತ್ ದೇಹದೊಳಕ್ಕೆ ಎ ಪಾಸಿಟಿವ್ ಬ್ಲಡ್ ಹೋಗ್ತಿದ್ದಂತೆ ಆರೋಗ್ಯದಲ್ಲಿ ಭಾರೀ ಏರುಪೇರು ಕಂಡುಬಂದಿದೆ. ಕೂಡಲೇ ಆಗಿರುವ ಲೋಪ ಮನಗಂಡ ಸಂಬಂಧಿಕರು ರಕ್ತ ಹಾಕಿಸೋದನ್ನ ನಿಲ್ಲಿಸಿ, ಸಿಬ್ಬಂದಿ ವಿರುದ್ಧ ಮುಗಿಬಿದ್ದಿದ್ದಾರೆ. ಯಾಕಪ್ಪ ಹೀಗೆ ಮಾಡ್ದೆ ಅಂದ್ರೆ, ಲ್ಯಾಬ್ ಟೆಕ್ನಿಷಿಯನ್ ಉಮೇಶ್ ಕೊಡೋ ಉತ್ತರ, ನನಗೆ ರಜೆ ಕೊಟ್ಟಿರಲಿಲ್ಲ. ಅದಕ್ಕೆ ಹೀಗೆ ಆಗೋಯ್ತು. ಪ್ರಾಣ ಹೋಗಿಲ್ವಲ್ಲ ಬಿಡಿ ಅಂತ ಉಡಾಫೆ ತೋರಿದ್ದಾನೆ.

ಕೊನೆಗೆ ಈ ವಿಚಾರ ಮುಂದಿಟ್ಟುಕೊಂಡು ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ, ತಲೆನೋವು ಅನುಭವಿಸಿದ್ದ ಪುನೀತ್ ಸೂರ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾನೆ. ಇಂಥ ನಿರ್ಲಕ್ಷ್ಯಗಳು ಮತ್ತೆ ಆಸ್ಪತ್ರೆಗಳಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ವೈದ್ಯಕೀಯ ಅಧೀಕ್ಷಕರು ಮಾತನಾಡಿ, ದೊಡ್ಡ ತಪ್ಪಾಗಿದೆ. ಕ್ಷಮಿಸಿ, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗದುಕೊಳ್ತೀವಿ ಎಂದಿದ್ದಾರೆ.
ಈ ಬಗ್ಗೆ ಸುದ್ದಿ ಪ್ರಸಾರವಾದ ಕೂಡಲೇ, ಶೀಘ್ರದಲ್ಲೇ ಲ್ಯಾಬ್ ಟೆಕ್ನೀಷಿಯನ್ ಉಮೇಶ್ ಅಮಾನತು ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪುಷ್ಪಾ-2 ಕಾಲ್ತುಳಿತ ಕೇಸ್ – ನಟ ಅಲ್ಲು ಅರ್ಜುನ್ ಸೇರಿ 23 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

