Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಾರ್ವಜನಿಕವಾಗಿ ಕ್ಷಮೆ ಕೇಳಿದ್ರೂ ನಾನು ತಾರ್ಕಿಕ ಅಂತ್ಯ ಸಿಗೋವರೆಗೆ ಹೋರಾಡ್ತೀನಿ: ಶೃತಿ ಗುಡುಗು

Public TV
Last updated: October 21, 2018 5:57 pm
Public TV
Share
3 Min Read
shruthi hariharan collage 1 copy
SHARE

ಬೆಂಗಳೂರು: ಅರ್ಜುನ್ ಸರ್ಜಾ ಅವರ ವಿರುದ್ಧ ಮಾತನಾಡಿದ ಬಳಿಕ ನನಗೆ ಸರ್ಜಾ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದ್ದು ನಿರಂತರವಾಗಿ ನನ್ನ ಫೋನ್ ರಿಂಗ್ ಆಗುತ್ತಿದೆ ಎಂದು ಶೃತಿ ಹರಿಹರನ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರ್ಜುನ್ ಸರ್ಜಾ ಅವರ ಮೇಲೆ ಆರೋಪ ಮಾಡಿದ ಬಳಿಕ ಹಲವು ಫೋನ್ ಕರೆ ಬಂದಿದೆ. ಆದರೆ ನಾನು ಯಾವುದಕ್ಕೂ ಉತ್ತರಿಸಿಲ್ಲ. ಟ್ರೂ ಕಾಲರ್ ಮೂಲಕ ನಂಬರ್ ಪರಿಶೀಲಿಸಿದ ವೇಳೆ ಸರ್ಜಾ ಅವರ ಫ್ಯಾನ್ಸ್ ಎಂಬುದು ಗೊತ್ತಾಗಿದೆ. ಆ ನಂಬರ್ ಗಳನ್ನು ಬಹಿರಂಗ ಪಡಿಸುತ್ತೇನೆ ಎಂದರು.

ಈ ವೇಳೆ ಸುದೀಪ್ ಸರ್, ದರ್ಶನ್ ಸರ್ ಸೇರಿದಂತೆ ಹಲವರ ಜೊತೆ ನಾನು ಅಭಿನಯಿಸಿದ್ದೇನೆ. ನನಗೆ ಎಲ್ಲಿಯೂ ಈ ರೀತಿಯ ಅನುಭವ ಆಗಿರಲಿಲ್ಲ. ಹೀಗಾಗಿ ನಾನು ಮುಕ್ತವಾಗಿ ಹೇಳಿಕೊಂಡಿದ್ದೇನೆ ಎಂದು ತಿಳಿಸಿದರು.

shruthi hariharan 1

ಆರೋಪ ಮಾಡಲು ತಡವಾಗಿದ್ದೇಕೆ?
ಅರ್ಜುನ್ ಸರ್ಜಾ ಅವರ ನಡವಳಿಕೆ ಬಗ್ಗೆ ಈ ಮೊದಲು ನಾನು ಹೇಳಲು ನನಗೆ ಧೈರ್ಯ ಇರಲಿಲ್ಲ. ಆದರೆ ಮೀಟೂ ಅಭಿಯಾನದ ಮೂಲಕ ಧೈರ್ಯವಾಗಿ ಹೊರಬಂದಿದ್ದೇನೆ. ಸಿನಿಮಾ ವೇಳೆ ನನಗೆ ಆದ ಅನುಭವ ಹಂಚಿಕೊಂಡಿದ್ದೇನೆ. ಇದರಿಂದ ಇನ್ನೂ 4 ಜನರು ತಮಗೆ ಆದ ಕೆಟ್ಟ ಅನುಭವದ ಬಗ್ಗೆ ಹೇಳಿದ್ದಾರೆ. ಇಂದು ನಾನು ಬಹಿರಂಗವಾಗಿ ಹೇಳಿಕೆ ನೀಡಲು ಇದೇ ಕಾರಣ ಎಂದರು.

ಮಾತುಕತೆಗೆ ಸಿದ್ಧರಿದ್ದೀರಾ?
ಅರ್ಜುನ್ ಸರ್ಜಾ ಅವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಮುಂದಾದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಾತನಾಡಲು ಓಕೆ, ಆದರೆ ಸಂಧಾನಕ್ಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದರೆ ನನಗೆ ಮಾತ್ರ ನ್ಯಾಯ ಸಿಗುತ್ತದೆ. ಆದರೆ ಇಂತಹ ಘಟನೆಗಳು ನಡೆಯಬಾರದು ಎಂಬುದು ನಮ್ಮ ಹೋರಾಟದ ಉದ್ದೇಶ. ತಾರ್ಕಿಕ ಅಂತ್ಯ ಸಿಗುವವರೆಗೂ ನಾನು ಹೋರಾಟ ನಡೆಸುತ್ತೇನೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

shruthi hariharan 3

ಕಾನೂನು ಹೋರಾಟ ಏನು?
ಫಿಲ್ಮ್ ಚೇಂಬರ್ ನ ಐಸಿಸಿ ಕಮಿಟಿಗೆ ದೂರು ನೀಡಲು ಘಟನೆ ನಡೆದ 6 ತಿಂಗಳು ಹಾಗೂ ಕೆಲ ಪ್ರಕರಣದಲ್ಲಿ 1 ವರ್ಷದ ಸಮಯ ಮಾತ್ರ ಅವಕಾಶವಿದೆ. ಇಲ್ಲವಾದರೆ ಕೋರ್ಟ್‍ಗೆ ದೂರು ನೀಡಬೇಕು. ಅದ್ದರಿಂದ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ. ಕೆಲವೊಂದು ಕಾನೂನಾತ್ಮಕವಾಗಿ ಹೋಗಬೇಕು. ಇದಕ್ಕೆ ಸಮಯ ಬೇಕಿದೆ, ಆಗ ಮಾಹಿತಿ ಮಾಧ್ಯಮಗಳಿಗೆ ನೀಡುತ್ತೇನೆ ಎಂದರು.

ಇತರರ ಹೆಸರು ಹೇಳುತ್ತಿಲ್ಲ ಏಕೆ?
ಸೆಕ್ಸ್ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ನೀವು ಏಕೆ ಇತರೇ ನಟರ ಹೆಸರು ಹೇಳುತ್ತಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಶೃತಿ ಅವರು, ರೇಡಿಯ ಜಾಕಿಯೊಬ್ಬರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕೇವಲ ಹಾಸ್ಯಕ್ಕಾಗಿ ಆ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅದು ತಪ್ಪು ಅಂದರೆ ನಾನು ಕ್ಷಮೆ ಕೇಳುತ್ತೇನೆ. ಆ ವಿಚಾರಕ್ಕೂ ಈಗ ಕರೆಯಲಾಗಿರುವ ಸದ್ದಿಗೋಷ್ಠಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿ ಇತರರ ಹೆಸರು ಏಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಬೇಡಿ ಎಂದರು. ಈ ಉತ್ತರಕ್ಕೆ ಆಕ್ಷೇಪ ವ್ಯಕ್ತವಾದ ವೇಳೆ ಸಮಯ ಬಂದ ವೇಳೆ ಈ ಪ್ರಶ್ನೆಗೆ ಉತ್ತರಿಸುವುದಾಗಿ ತಿಳಿಸಿದರು.

shruthi hariharan collage

ವಿಸ್ಮಯ ಸಿನಿಮಾ ಬಿಡುಗಡೆ ವೇಳೆ ನೀವು ಮತ್ತೆ ಅರ್ಜುನ್ ಸರ್ಜಾ ಅವರೊಂದಿಗೆ ಮಾಡಬೇಕೆಂಬ ಆಸೆ ಹೊಂದಿದ್ದಾಗಿ ಹೇಳಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಸಿನಿಮಾ ಬಿಡುಗಡೆ ವೇಳೆ ನಾನು ಮತ್ತೆ ಅವರೊಂದಿಗೆ ನಟನೆ ಮಾಡುವುದು ಇಷ್ಟ ಎಂದು ಎಲ್ಲೂ ಹೇಳಿಲ್ಲ. ಆದರೆ ನನಗೆ ಆ ವೇಳೆ ಇದರ ಬಗ್ಗೆ ಸಾರ್ವಜನಿಕವಾಗಿ ಹೇಳುವ ಧೈರ್ಯ ಇರಲಿಲ್ಲ. ಈಗ ಎಲ್ಲವೂ ಹೇಳಿ ಹೊರ ಬಂದಿದ್ದೇನೆ. ಈ ಹಿಂದೆ ಕಸ್ಟಿಂಗ್ ಕೌಚ್ ಬಗ್ಗೆ ನಾನು ಮಾತನಾಡಿದ್ದೆ. ಈಗ ಮೀಟೂವಿನಿಂದ ಧೈರ್ಯ ಬಂದಿದೆ. ಒಂದೊಮ್ಮೆ ನಾನು ಹಾಗೇ ಹೇಳಿದ್ದರೆ, ಆ ಕುರಿತು ಸಾಕ್ಷಿ ಇದೇಯಾ ಎಂದು ಮರುಪ್ರಶ್ನೆ ಮಾಡಿದರು.

ನಿರ್ಮಾಪಕರ ಪತ್ರ: ಆರೋಪ ಮಾಡಿರುವ ಕುರಿತು ನಿರ್ಮಾಪಕರಿಂದ ಯಾವುದೇ ಪತ್ರ ಬಂದಿಲ್ಲ. ಒಂದೊಮ್ಮೆ ಪತ್ರ ಬಂದರೆ ಉತ್ತರಿಸುತ್ತೇನೆ. ನನಗೆ ಮತ್ತೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಗುತ್ತೆ. ಏಕೆಂದರೆ ನಾನು ನಟಿ, ನನ್ನ ಸಿನಿಮಾಗಳನ್ನು ಮುಂದೆಯೂ ನೀವು ನೋಡುತ್ತೀರಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:Arjun SarjaBangaloreMeTooPublic TVಅರ್ಜುನ್ ಸರ್ಜಾಕನ್ನಡಪಬ್ಲಿಕ್ ಟಿವಿಬೆಂಗಳೂರುಮೀ ಟೂಮೀಟೂಶೃತಿ ಹರಿಹರನ್ಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Raja Vardan
ಮಾಲ್ಡೀವ್ಸ್‌ನಲ್ಲಿ ರಾಜವರ್ಧನ್‌ – ದಿವ್ಯ ದಂಪತಿ ಆನಿವರ್ಸರಿ ಸೆಲಬ್ರೇಷನ್
Cinema Latest Sandalwood
Aradhana Upendra Next Level 1
ಉಪೇಂದ್ರಾಗೆ ಮಾಲಾಶ್ರೀ ಮಗಳು ಆರಾಧನಾ ಜೋಡಿ
Cinema Latest Top Stories
Is Dhanush Dating Mrunal Thakur
ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?
Cinema Karnataka Latest
Actress Sumalatha condoles the death of Malayalam Actor Shanawas
ʼಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?
Cinema Latest South cinema Top Stories
janaki vs state of kerala
ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್
Cinema Latest South cinema Top Stories

You Might Also Like

Raichur 2 2
Districts

ಹವಾಮಾನ ವೈಪರೀತ್ಯ – ಸಿಎಂ ರಾಯಚೂರು ಪ್ರವಾಸ ರದ್ದು

Public TV
By Public TV
2 minutes ago
Kudligi Lake Breached After Heavy Rain Lash
Bellary

ಕೋಡಿ ಬಿದ್ದ ಕೂಡ್ಲಿಗಿ ದೊಡ್ಡ ಕೆರೆ – ಫಸ್ಟ್‌ ಟೈಂ ಆಗಸ್ಟ್‌ನಲ್ಲೇ ಭರ್ತಿ

Public TV
By Public TV
3 minutes ago
Bihar 1
Crime

ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

Public TV
By Public TV
24 minutes ago
Kabini Bridge
Districts

ಮೈಸೂರು | ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

Public TV
By Public TV
53 minutes ago
Man washed away in water with bike Hire Bagewadi Belagavi
Belgaum

ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

Public TV
By Public TV
1 hour ago
KJ GEORGE 1
Bengaluru City

ಸ್ಮಾರ್ಟ್ ಮೀಟರ್ ಹಗರಣ – ಸಚಿವ ಜಾರ್ಜ್‌ಗೆ ಬಿಗ್‌ ರಿಲೀಫ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?