Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವೀಕೆಂಡ್: ಶೃಂಗೇರಿ ಸುರೇಶ್ ಮೂರು ದಶಕಗಳ ಅನುಭವಗಾಥೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವೀಕೆಂಡ್: ಶೃಂಗೇರಿ ಸುರೇಶ್ ಮೂರು ದಶಕಗಳ ಅನುಭವಗಾಥೆ!

Bengaluru City

ವೀಕೆಂಡ್: ಶೃಂಗೇರಿ ಸುರೇಶ್ ಮೂರು ದಶಕಗಳ ಅನುಭವಗಾಥೆ!

Public TV
Last updated: May 20, 2019 6:12 pm
Public TV
Share
3 Min Read
weekend d
SHARE

ಬೆಂಗಳೂರು: ಇದೀಗ ತಾನೇ ಹೊಸತಾಗಿ ಎಂಟ್ರಿ ಕೊಟ್ಟವರ ಮೇಲೂ ಆಗಾಗ ಅಪ್ ಡೇಟ್ ಆಗಿಲ್ಲ ಎಂಬಂಥಾ ಆರೋಪಗಳು ಕೇಳಿ ಬರೋದಿದೆ. ಆದರೆ ಅದೆಷ್ಟೋ ದಶಕಗಳಿಂದ ಚಿತ್ರರಂಗದ ಭಾಗವಾಗಿದ್ದೂ, ಆಯಾ ಕಾಲಘಟ್ಟಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತಾ ಮುಂದುವರೆಯೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸಾಧ್ಯವಾಗಿಸಿಕೊಳ್ಳುವ ಕಸುವು ಕೆಲವೇ ಕೆಲ ಮಂದಿಗೆ ಮಾತ್ರವೇ ಸಿದ್ಧಿಸಿರುತ್ತೆ. ಸದ್ಯ ಭಾರೀ ನಿರೀಕ್ಷೆಗಳ ಜೊತೆಗೆ ಚಿತ್ರಮಂದಿರದತ್ತ ಪಯಣ ಬೆಳೆಸಿರುವ ವೀಕೆಂಡ್ ಚಿತ್ರದ ನಿರ್ದೇಶಕ ಶೃಂಗೇರಿ ಸುರೇಶ್ ಆ ವಿರಳರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುತ್ತಾರೆ. ಅಂಥಾ ಗುಣದಿಂದಲೇ ಅವರು ಈ ತಲೆಮಾರಿನ ನಿರ್ದೇಶಕರೂ ಬೆರಗಾಗುವಂಥಾ ವೀಕೆಂಡ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಿಂದಿದ್ದಾರೆ.

weekend c

ಸುರೇಶ್ ಶೃಂಗೇರಿ ಎಂಬುದು ಕನ್ನಡ ಚಿತ್ರರಂಗದ ಪಾಲಿಗೆ ಪರಿಚಿತ ಹೆಸರು. ತೀರಾ ಶಂಕರ್ ನಾಗ್ ಅವರ ಚಿತ್ರಗಳಿಂದ ಆರಂಭವಾಗಿ ಈವರೆಗೂ ಸಲೀಸಾಗಿ ಲೆಕ್ಕಕ್ಕೆ ಸಿಗದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್. ಆ ನಂತರ ಸ್ವತಂತ್ರ ನಿರ್ದೇಶಕರಾಗಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕೋಮಲ್ ಅಭಿನಯದ ಲೊಡ್ಡೆ ಸೇರಿದಂತೆ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರೋ ಸುರೇಶ್ ಅವರೀಗ ವೀಕೆಂಡ್ ಚಿತ್ರದ ಮೂಲಕ ಯೂಥ್ ಫುಲ್ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

weekend b

ಸುರೇಶ್ ಅವರ ಮೂಲವಿರೋದು ಶೃಂಗೇರಿಯಲ್ಲಿ. ಇಲ್ಲಿನ ಕೆರೆದಂಡೆ ಪ್ರದೇಶದಲ್ಲಿ ಇವತ್ತಿಗೂ ಇವರ ಸಂಬಂಧಿಕರಿದ್ದಾರೆ. ಆದರೆ ಸುರೇಶ್ ಅವರು ಬೆಳೆದದ್ದೆಲ್ಲ ಶಿವಮೊಗ್ಗದಲ್ಲಿ. ಅವರ ತಾಯಿ ಶಿಕ್ಷಕಿಯಾಗಿದ್ದವರು. ಈ ಕಾರಣದಿಂದಲೇ ಆರಂಭ ಕಾಲದಿಂದಲೂ ಓದು ಸೇರಿದಂತೆ ಎಲ್ಲ ಚಟುವಟಿಕೆಯಲ್ಲಿಯೂ ಮುಂದಿದ್ದ ಸುರೇಶ್ ಅವರು ಶಿವಮೊಗ್ಗದ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಆ ಕಾಲದಿಂದಲೇ ಚಿತ್ರರಂಗದ ಕನಸು ಕಟ್ಟಿಕೊಂಡಿದ್ದ ಅವರು ಅದನ್ನು ನನಸು ಮಾಡಿಕೊಂಡು ಮೂವತ್ತು ವರ್ಷಗಳ ಕಾಲ ಯಾನ ಕೈಗೊಂಡಿದ್ದೇ ಒಂದು ಚೆಂದದ ಕಥೆ.

weekend a

ಅದು ಹೇಗೋ ಕಷ್ಟಪಟ್ಟು ಚಿತ್ರರಂಗಕ್ಕೆ ಅಡಿಯಿರಿಸಿದ್ದ ಅವರಿಗೆ ಭಕ್ತವತ್ಸಲಂ ಸಹಾಯ ಮಾಡಿದ್ದರು. ಅದಾದ ನಂತರದಲ್ಲಿ ಸಿಕ್ಕಿದ ಸಣ್ಣಪುಟ್ಟ ಅವಕಾಶಗಳನ್ನೂ ಬಳಸಿಕೊಂಡು ಹಂತ ಹಂತವಾಗಿ ಮೇಲೇರಿ ಬಂದ ಸುರೇಶ್ ಅವರ ಪಾಲಿಗೆ ಅತಿರಥ ಮಹಾರಥರ ಸಾಂಗತ್ಯವೂ ದೊರೆತಿತ್ತು. ರಮೇಶ್ ಭಟ್ ಅವರಂಥಾ ಸಂಪರ್ಕಕ್ಕೆ ಬಂದು ಬಿ ಸಿ ಗೌರಿಶಂಕರ್ ಅವರ ಬಳಿ ಎಂಟು ವರ್ಷಗಳ ಕಾಲ ಸುರೇಶ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಜೇಂದ್ರ ಬಾಬು ಗರಡಿಯಲ್ಲಿಯೂ ಪಳಗಿಕೊಂಡಿದ್ದರು. ಉಪೇಂದ್ರ ನಿರ್ದೇಶನದ ಮೊದಲ ಚಿತ್ರ ತರ್ಲೆ ನನ್ಮಗಕ್ಕೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಸುರೇಶ್ ಕಾರ್ಯ ನಿರ್ವಹಿಸಿದ್ದರು. ಕಿಚ್ಚ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರಕ್ಕೂ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ.

weekend

ಹೀಗೆ ಸಾಗಿ ಬಂದಿರೋ ಅವರು ಎಲ್ಲ ಸಂದರ್ಭಗಳಲ್ಲಿಯೂ ಯುವ ಸಮೂಹದ ಸಂಪರ್ಕದಲ್ಲಿದ್ದದ್ದೇ ಹೆಚ್ಚು. ಆದ್ದರಿಂದಲೇ ಜನರೇಷನ್ ಗ್ಯಾಪ್ ನಂಥಾ ಸಮಸ್ಯೆ ಅವರನ್ನೆಂದೂ ಬಾಧಿಸಲೇ ಇಲ್ಲ. ಹೀಗೆ ಅವರು ಮೂರು ದಶಕಗಳ ಕಾಲ ಚಿತ್ರರಂಗದೊಂದಿಗೆ ಒಡನಾಡಿದ್ದಾರೆ. ಇಷ್ಟೊಂದು ಅನುಭವ ಹೊಂದಿದ್ದರೂ ಕೂಡಾ ನಿರ್ದೇಶಕನಾಗೋ ಕನಸು ಮೈ ತುಂಬಾ ಹೊದ್ದುಕೊಂಡಿದ್ದ ಕೆಲಸ ಕಾರ್ಯಗಳ ನಡುವೆ ನನಸಾಗಿರಲಿಲ್ಲ. ಒಂದರ ಹಿಂದೊಂದರಂತೆ ಚಿತ್ರಗಳು ಸಿಗುತ್ತಲೇ ಇದ್ದುದರಿಂದ ಸುರೇಶ್ ಅವರಿಗೆ ಅದೊಂದು ಕೊರಗಾಗಿಯೂ ಕಾಡಲಿಲ್ಲ. ಆದರೆ 2002ರಲ್ಲಿ ಅವರು ಪ್ರೇಮ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶಿವಧ್ವಜ್ ಮತ್ತು ಪ್ರೇಮ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ನಂತರ ಹೆಣ್ಣು ಭ್ರೂಣ ಹತ್ಯೆ ಕುರಿತಾದ ಸ್ತ್ರೀ ಶಕ್ತಿ ಎಂಬ ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು. ಅದರಲ್ಲಿ ಸೋನು ಗೌಡ ಮನೋಜ್ಞ ಪಾತ್ರದಲ್ಲಿ ನಟಿಸಿದ್ದರು.

weekend f

ಈ ರೀತಿಯಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಸುರೇಶ್ ಅವರೀಗ ವೀಕೆಂಡ್ ಎಂಬ ಯುವ ಆವೇಗದ ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಇದರ ನವೀನ ಆಲೋಚನಾ ಕ್ರಮವನ್ನು ಹಿರಿಯ ನಟ ಅನಂತ್ ನಾಗ್ ಅವರೇ ಮೆಚ್ಚಿಕೊಂಡಿದ್ದೂ ಆಗಿದೆ. ಅದುವೇ ವೀಕೆಂಡ್ ಕಥೆಯ ಕಸುವೆಂಥಾದ್ದೆಂಬುದಕ್ಕೆ ಉದಾಹರಣೆಯೂ ಹೌದು. ಇದೀಗ ಟ್ರೈಲರ್ ಮೂಲಕ ಎಲ್ಲರನ್ನು ಸೆಳೆದುಕೊಂಡಿರೋ ಈ ಚಿತ್ರ ಇಷ್ಟರಲ್ಲಿಯೇ ತೆರೆ ಕಾಣಲಿದೆ.

weekend e

TAGGED:cinemaPublic TVsandalwoodSringeri SureshWeekend Kannada Cinemaಪಬ್ಲಿಕ್ ಟಿವಿವೀಕೆಂಡ್ ಕನ್ನಡ ಸಿನೆಮಾಶೃಂಗೇರಿ ಸುರೇಶ್ಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

CSK vs RCB
Bengaluru City

ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್‌ ಕದನ – ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2,300 ಪೊಲೀಸರಿಂದ ಭದ್ರತೆ

Public TV
By Public TV
28 seconds ago
Hubbali Love Jihda
Crime

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್‌ – ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

Public TV
By Public TV
10 minutes ago
Anekal Ona Karaga Mahotsava
Bengaluru City

ಆನೇಕಲ್‌ನಲ್ಲಿ ಅದ್ಧೂರಿಯಾಗಿ ನಡೆದ ಒಣ ಕರಗ ಮಹೋತ್ಸವ

Public TV
By Public TV
51 minutes ago
Donald Trump Angry
Latest

Terminated – ಬೃಹತ್‌ ದಾಳಿಯಲ್ಲಿ ಇರಾನ್‌ ಮಿಲಿಟರಿ ಪಡೆಯ ಟಾಪ್‌ ಕಮಾಂಡರ್‌ಗಳ ಹತ್ಯೆ: ಟ್ರಂಪ್‌

Public TV
By Public TV
1 hour ago
Davanagere Go Back Congress Protest
Davanagere

ದಾವಣಗೆರೆಯಲ್ಲಿ ಪ್ರಚಾರದ ವೇಳೆ ಮುಸ್ಲಿಮರಿಂದ ‘ಗೋ ಬ್ಯಾಕ್ ಕಾಂಗ್ರೆಸ್’ ಪ್ರತಿಭಟನೆ

Public TV
By Public TV
1 hour ago
Bengaluru Yelahanka Businessman Arrested for Blackmailing And Raping Female Customs Officer
Bengaluru City

ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್, ಅತ್ಯಾಚಾರ ಆರೋಪ – ಉದ್ಯಮಿ ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?