ನನ್ನ ಪತಿ ಕರ್ಜಿಕಾಯಿ ಕಳ್ಳ: ಶ್ರೀಮುರಳಿ ಪತ್ನಿ

Public TV
1 Min Read
Sri Murali 1

ಬೆಂಗಳೂರು: ಪತಿ ಶ್ರೀಮುರಳಿ ಕರ್ಜಿಕಾಯಿ (ಸಿಹಿ ತಿಂಡಿ) ಕದ್ದು ಅಮ್ಮನ ಕೈಗೆ ಸಿಕ್ಕಿ ಬಿದ್ದಿರುವ ವಿಡಿಯೋವನ್ನು ಪತ್ನಿ ವಿದ್ಯಾ ಶ್ರೀಮುರಳಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಪ್ರತಿ ವರ್ಷ ಅಜ್ಜಿ ಪೂಜೆಗಾಗಿ ಮನೆಯಲ್ಲಿ ಸಿಹಿತಿಂಡಿ ಮೊದಲೇ ತಯಾರಿಸಲಾಗುತ್ತದೆ. ಆದರೆ ಅತ್ತೆ ಪೂಜೆ ಆಗುವರೆಗೂ ತಿಂಡಿಯನ್ನು ಯಾರಿಗೂ ನೀಡಲ್ಲ. ಪತಿ ಶ್ರೀಮರುಳಿ ಮಾತ್ರ ಪ್ರತಿವರ್ಷ ಹೇಗಾದ್ರೂ ಮಾಡಿ ತಿಂಡಿಯನ್ನು ಕದಿಯುತ್ತಾರೆ. ಈ ವರ್ಷ ಅಮ್ಮನ ಕೈಗೆ ಸಿಕ್ಕಿ ಬಿದ್ದರು ಎಂದು ವಿದ್ಯಾ ಶ್ರೀಮುರಳಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

srimurali

ಶ್ರೀಮುರಳಿ ಕದ್ದಿರುವ ಕರ್ಜಿಕಾಯಿಯನ್ನು ಜೇಬಿನಲ್ಲಿಟ್ಟಿಕೊಂಡಿದ್ದು, ಅಮ್ಮ ಅದನ್ನು ವಾಪಾಸ್ ಕೊಡುವಂತೆ ಹೇಳುತ್ತಿದ್ದಾರೆ. ಪುಟ್ಟ ಮಗುವಿನಂತೆ ಶ್ರೀಮುರಳಿ ಕರ್ಜಿಕಾಯಿ ನೀಡಲ್ಲ ಎಂದು ಹಠ ಮಾಡೋದನ್ನು ವಿಡಿಯೋದಲ್ಲಿ ನೋಡಬಹುದು.

ಶ್ರೀಮುರಳಿ ನಟನೆಯ ಭರಾಟೆ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಉಗ್ರಂ ಮತ್ತು ಮಫ್ತಿ ಯಶಸ್ವಿನ ಬಳಿಕ ಭರಾಟೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಬರಲಿದೆ. ಈ ಹಿಂದೆ ನಮ್ಮ ನಿರ್ದೇಶಕರು ಶೂಟಿಂಗ್ ಗೆ ಆಯ್ದುಕೊಳ್ಳುವ ಪ್ರದೇಶಗಳೇ ನಮಗೆಲ್ಲ ಅಚ್ಚರಿ ಹುಟ್ಟಿಸುತ್ತೆ. ಪ್ರತೀ ಕ್ಷಣವೂ ಹೊಸ ಹುಡುಕಾಟ ನಡೆಸೋ ನಿರ್ದೇಶಕರ ಜೊತೆ ಕೆಲಸ ಮಾಡೋದೇ ಸಂತಸದ ವಿಚಾರ ಅಂತ ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ಶ್ರೀ ಮುರಳಿ ತೆರೆದಿಟ್ಟಿದ್ದರು.

Share This Article