ಬಳ್ಳಾರಿ: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲ್ಲೆಯಲ್ಲಿ ನೀರು ಬಿಡಲಾಗಿದೆ. ಇದರಿಂದ ಹಂಪಿಯ ಪುರಾತನ ಕಾಲದ ಮಂಟಪ ಮುಳುಗಡೆಯಾಗಿದೆ.
ನದಿ ಪಾತ್ರದಲ್ಲಿರುವ ಹಂಪಿಯ ಶ್ರೀ ಪುರಂದರದಾಸ ಮಂಟಪ ಮುಳುಗಡೆಯಾಗಿದೆ. ಈ ಮಂಟಪ ವಿಜಯ ವಿಠ್ಠಲ ದೇವಸ್ಥಾನ ಹಿಂಭಾಗದಲ್ಲಿದೆ. ವಿಜಯನಗರ ಸಾಲು ಸೇತುವೆ ಮತ್ತು ನದಿ ಪಾತ್ರದ ಮಂಟಪಗಳು ಮುಳುಗಡೆಯಾಗಿದ್ದು, ಅಷ್ಟೇ ಅಲ್ಲದೇ ಹಂಪಿಯ ಕೆಲ ಸ್ಮಾರಕಗಳ ಬಳಿಯೂ ಕೂಡ ನದಿ ನೀರು ಆಗಮಿಸಿದೆ. ಇದನ್ನೂ ಓದಿ:ತುಂಗಭದ್ರಾ ನದಿ ಪಾತ್ರದ ಜನರಿಗೆ ಅಧಿಕಾರಿಗಳಿಂದ ಪ್ರವಾಹದ ಎಚ್ಚರಿಕೆ
ತುಂಗಭದ್ರಾ ಜಲಾಶಯದ ಭರ್ತಿ ಸನಿಹ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನವೇ ಸುಮಾರು ಹತ್ತು ಸಾವಿರ ನೀರನ್ನು ಬಿಡಲಾಗಿತ್ತು. ಆದರೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಗುರುವಾರ 21 ಕ್ರಸ್ಟ್ ಗೇಟುಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ನೀರು ನದಿ ಮೂಲಕ ಬಿಡುಗಡೆಯಾಗಿದೆ. ಪರಿಣಾಮ ಪುರಂದರದಾಸ ಮಂಟಪ ಮುಳುಗಡೆಯಾಗಿದೆ.