ಹುಬ್ಬಳ್ಳಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ
ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಾತನಾಡಿದ ಅವರು, ಜೈನ ಧರ್ಮ ಮೂರು ವಿಚಾರಗಳನ್ನು ಪ್ರತಿಬಿಂಬಿಸುತ್ತದೆ. ನಂಬಿಕೆ, ಜ್ಞಾನ, ಅಧ್ಯಾತ್ಮದ ಪ್ರತಿರೂಪವೇ ಜೈನ ಧರ್ಮ. ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತ. ಸದ್ಯ ವಿಶ್ವ ಶಾಂತಿಯ ಅಗತ್ಯವಿದೆ. ಮಾನವೀಯ ಜೈನ ಧರ್ಮ ತತ್ವಗಳನ್ನು ಅಳವಡಿಕೊಳ್ಳಬೇಕು. ಮಠ-ಮಂದಿರ ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಮಠ-ಮಂದಿರಗಳು ಸಾಮಾಜಿಕ ಬದಲಾವಣೆಗೂ ಕಾರಣವಾದ ಕೇಂದ್ರಗಳು. ಸಂಘರ್ಷಗಳ ಕಾರಣದಿಂದ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಿವೆ. ಮಾತುಕತೆಗೆ ಮಾನ್ಯತೆ ಸಿಗುತ್ತಿಲ್ಲ. ಮಾತಿಗೆ ಬೆಲೆ ಕೊಡುವ ಕೆಲಸ ಆಗಬೇಕಿದೆ. ಶಾಂತಿ ಮಂತ್ರ ಜಪಿಸಬೇಕಿದೆ. ಭಾರತ ಜಾಗತಿಕ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
Our temples form a network of Adhyatmik Shakti—a force far greater than nuclear power.
Adhyatmik Shakti possesses the transformative power to bring about positive changes of unimaginable proportions. We have preserved and nurtured this spiritual energy.
Despite numerous… pic.twitter.com/roywfoQAtk
— Vice-President of India (@VPIndia) January 16, 2025
ನಿಜವಾದ ವಿಕಾಸವಾದಲ್ಲಿ ಭಾರತ ವಿಶ್ವಗುರು ಆಗುತ್ತದೆ. ನಮ್ಮ ಸಿರಿವಂತ ಸಂಸ್ಕೃತಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ. ಮಾನವೀಯ ಮೌಲ್ಯಗಳು ಶಾಂತಿಗೆ ನಾಂದಿಹಾಡುತ್ತದೆ. ನಮ್ಮ ನಾಗರಿಕತೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯುನ್ನತ ಆಧ್ಯಾತ್ಮಿಕ ಇತಿಹಾಸವಿದೆ. ಭಾರತದ ಸಂಪ್ರದಾಯದ ಉಳಿವಿನ ಅಗತ್ಯವಿದೆ. ಗುಣಧರನಂದಿ ಮಾರ್ಗದರ್ಶನದಲ್ಲಿ ವರೂರು ಕ್ಷೇತ್ರ ಬೆಳೆದಿದೆ. ಸಮಾನತೆ, ಸಹಬಾಳ್ವೆಗೆ ಇಂತಹ ಕ್ಷೇತ್ರಗಳು ವೇದಿಕೆಗಳಾಗಿವೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರೋದಕ್ಕೆ ಖುಷಿಯಾಗ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಯಕ್ಷಗಾನದ ಟೆಂಟ್ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ