ಬೆಂಗಳೂರು: 2019ರ ಐಪಿಎಲ್ ಟೂರ್ನಿಯ 4 ಪಂದ್ಯದಲ್ಲಿ ಕೊಹ್ಲಿ 2 ಬಾರಿ ಸ್ಪಿನ್ ಬೌಲರ್ ಗಳಿಗೆ ವಿಕೆಟ್ ಒಪ್ಪಿಸಿದ್ದು, ಇದು ತಂಡ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟು ಮಾಡಿದೆ.
ಟೂರ್ನಿಯಲ್ಲಿ ಆರ್ ಸಿಬಿ ತಂಡ ಕೋಲ್ಕತ್ತಾ ತಂಡವನ್ನು ಎದುರಿಸಲು ಸಿದ್ಧತೆ ನಡೆಸಿದ್ದು, ಇದೇ ವೇಳೆ ಕೊಹ್ಲಿ ಬ್ಯಾಟಿಂಗ್ ಕೆಲ ವೈಫಲ್ಯಗಳನ್ನು ಸಿನ್ನರ್ಗಳು ತಿಳಿದುಕೊಂಡಿದ್ದಾರೆ. ಅದ್ದರಿಂದಲೇ ಸ್ಪಿನ್ನರ್ ಗಳು ಕೊಹ್ಲಿ ವಿಕೆಟ್ ಪಡೆಯುತ್ತಿದ್ದಾರೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ 78 ರನ್ ಸಿಡಿಸಿದ್ದು, ಇದರಲ್ಲಿ 46 ರನ್ ಅವರ ಅಧಿಕ ಸ್ಕೋರ್ ಆಗಿದೆ. ಕೊಹ್ಲಿ ಕೂಡ ಹಿಂದೆ ಹಲವು ಬಾರಿ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ಅದರಲ್ಲೂ ಕಳೆದ ಪಂದ್ಯದಲ್ಲಿ ಗೂಗ್ಲಿ ಎಸೆತದಲ್ಲೇ ಕೊಹ್ಲಿ ವಿಕೆಟ್ ಒಪ್ಪಿಸಿದ್ದು ವಿಶೇಷವಾಗಿತ್ತು. ಕಳೆದ ವರ್ಷ ಮುಜೀಬ್ ಉರ್ ರಹಮಾನ್, ಆ್ಯಡಂ ಜಂಪಾ, ಮಯಾಂಕ್ ಮಾರ್ಕಂಡೆಯರಂತಹ ಆಟಗಾರರು ಕೊಹ್ಲಿ ವಿಕೆಟ್ ಪಡೆದಿದ್ದರು. ಅದರಲ್ಲೂ ಈ ಬಾರಿ ರಾಜಸ್ಥಾನ್ ತಂಡದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಔಟ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ಪರಿಣಾಮ ಕೊಹ್ಲಿ ಇತ್ತ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಕೊಹ್ಲಿ ಟೀಂ ಇಂಡಿಯಾದ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸುವುದು ಅವರ ಬ್ಯಾಟಿಂಗ್ ಟೆಕ್ನಿಕ್ ಲೋಪದಿಂದ. ಇದನ್ನು ಮೀರಿ ಕೊಹ್ಲಿ ಮುಂದಿನ ಪಂದ್ಯದಲ್ಲಿ ಪ್ರದರ್ಶನ ನೀಡುತ್ತರಾ ಎಂದು ಕಾದುನೋಡಬೇಕಿದೆ ಎಂದು ತಿಳಿಸಿದರು.