ವಿಜಯವಾಡ: ಲಕ್ಷದ್ವೀಪ, ಹೈದರಾಬಾದ್, ಗುವಾಹಟಿ ಮತ್ತು ಶಿಲಾಂಗ್ ಸೇರಿದಂತೆ 20 ಮಾರ್ಗಗಳಲ್ಲಿ 2025ರಲ್ಲಿ ಸೀಪ್ಲೇನ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ವಿಮಾನಯಾನ ಸಂಸ್ಥೆಯು ಅನೇಕ ಸ್ಥಳಗಳಲ್ಲಿ ಸೀಪ್ಲೇನ್ (Seaplane) ಪ್ರಯೋಗಗಳಲ್ಲಿ ಪಾಲುದಾರಿಕೆ ಹೊಂದಿದೆ ಎಂದು ಸ್ಪೈಸ್ಜೆಟ್ (SpiceJet) ಹೇಳಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (N Chandrababu Naidu) ಮತ್ತು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಭಾಗವಹಿಸಿದ್ದ ವಿಜಯವಾಡದ ಪ್ರಕಾಶಂ ಬ್ಯಾರೇಜ್ನಿಂದ ಶ್ರೀಶೈಲಂ ಅಣೆಕಟ್ಟಿಗೆ ಸೀಪ್ಲೇನ್ ಹಾರಾಟದ ಪ್ರದರ್ಶನದ ಸಂದರ್ಭದಲ್ಲಿ ಸ್ಪೈಸ್ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಈ ಘೋಷಣೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ರೂ ಗೆಲ್ಲೋದು ಎನ್ಡಿಎ: ಪ್ರಹ್ಲಾದ್ ಜೋಶಿ ಭವಿಷ್ಯ
ಸಮುದ್ರ ವಿಮಾನಗಳು ಭಾರತದ ಪ್ರಾದೇಶಿಕ ಸಂಪರ್ಕವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶದ ಅತ್ಯಂತ ಅದ್ಭುತವಾದ, ದೂರದ ಕೆಲವು ಭಾಗಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಸ್ಪೈಸ್ಜೆಟ್ ಯಾವಾಗಲೂ ದೊಡ್ಡ ಕನಸುಗಳನ್ನು ಕಾಣುತ್ತದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ ಕೆ ರಾಮಮೋಹನ್ ನಾಯ್ಡು ಅವರಂತಹ ದೂರದೃಷ್ಟಿಯ ನಾಯಕರ ಬೆಂಬಲದೊಂದಿಗೆ ನಾವು ಭಾರತದಲ್ಲಿ ಸೀಪ್ಲೇನ್ ಕಾರ್ಯಾಚರಣೆಗಳನ್ನು ಆರಂಭಿಸಲಿದ್ದೇವೆ ಎಂದರು. ಇದನ್ನೂ ಓದಿ: ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ
ಸ್ಪೈಸ್ಜೆಟ್ ಅಕ್ಟೋಬರ್ 2020ರಲ್ಲಿ ಭಾರತದ ಮೊದಲ ನಿಗದಿತ ಸೀಪ್ಲೇನ್ ಸೇವೆಯನ್ನು ಪ್ರಾರಂಭಿಸಿತು. ಅಹಮದಾಬಾದ್ನ ಸಾಬರಮತಿ ನದಿಯ ಮುಂಭಾಗದಿಂದ ಗುಜರಾತ್ನ ಕೆವಾಡಿಯಾದಲ್ಲಿರುವ ಏಕತೆಯ ಪ್ರತಿಮೆಗೆ ಸಂಪರ್ಕಿಸುತ್ತದೆ. ಕೋವಿಡ್-19 ಕಾರಣದಿಂದಾಗಿ ಸ್ಥಗಿತವಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುನ್ನಡೆಸಲು ಏರ್ಲೈನ್ ಮತ್ತೊಮ್ಮೆ ಸಿದ್ಧವಾಗಿದೆ. ಇದನ್ನೂ ಓದಿ: ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿ – ಐವರು ಸಾವು