ಬಹುಮತ ಸಾಬೀತು ಪಡಿಸದಿದ್ದರೆ ನಾನೇ ರಾಜೀನಾಮೆ ಕೊಡ್ತೀನಿ- ಸಿಎಂಗೆ ಸ್ಪೀಕರ್ ಎಚ್ಚರಿಕೆ

Public TV
1 Min Read
RAMESH KUMAR 1

ಬೆಂಗಳೂರು: ವಿಶ್ವಾಸ ಮತಯಾಚನೆಯ ಚರ್ಚೆಯ ವೇಳೆ ಸದನದಲ್ಲಿ ಗದ್ದಲ ಎದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪ ಮುಂದೂಡಿದ್ದು, ಇಂದು ರಾತ್ರಿ 9 ಗಂಟೆವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

9 ಗಂಟೆಯಷ್ಟರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲವೆಂದಲ್ಲಿ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

HDK 3

ವಿಧಾನಸಭೆಯಲ್ಲಿ ನಡೆಯುತ್ತಿದ್ದ ದೋಸ್ತಿಗಳ ಚರ್ಚೆ ನಾಲ್ಕನೇ ದಿನವಾದ ಇಂದೂ ಮುಂದುವರಿದಿತ್ತು. ಇಂದು ಕೂಡ ದೋಸ್ತಿಗಳೇ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಬಿಜೆಪಿ ಇಂದೂ ಮೌನಕ್ಕೆ ಶರಣಾಗಿತ್ತು.

ಈ ಹಿಂದೆ ರಾಜ್ಯಪಾಲರು ಗಡುವು ನೀಡಿದ್ದರೂ ದೋಸ್ತಿಗಳು ಕ್ಯಾರೇ ಎಂದಿಲ್ಲ. ಅಲ್ಲದೆ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಮೂಲಕ ದಿನ ದೂಡಿದ್ದರು. ಆದರೆ ಈ ಚರ್ಚೆ ಇಂದು ಕೂಡ ಮುಂದುವರಿದಿದ್ದರಿಂದ ಸಿಟ್ಟಾದ ಸ್ಪೀಕರ್ ವಿಧಾನಸಭೆಯಿಂದ ಹೊರ ನಡೆದು 9 ಗಂಟೆಯ ವರೆಗೆ ಗಡುವು ನೀಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *